The Public Spot
Uncategorized

ಸುಪ್ರೀಂಕೋರ್ಟ್​ನಲ್ಲಿ ಜಾಮೀನು ರದ್ದಾದ ವೇಳೆ ದರ್ಶನ್​ ಮಾಡಿದ್ದೇನು..?

ದರ್ಶನ್​ಗೆ ಜಾಮೀನು ಕೊಟ್ಟ ಹೈಕೋರ್ಟ್​ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಆಗ ದರ್ಶನ್ ತುಂಬಾ ಬೇಸರದಲ್ಲಿ ಇದ್ದರು. ಕೆಲವು ದಿನ ಮೌನವಾದರು. ಒಬ್ಬರೇ ಯೋಚನೆ ಮಾಡ್ತಿದ್ದರು ಎಂದು ವಿಜಯಲಕ್ಷ್ಮೀ ಹೇಳಿಕೊಂಡಿದ್ದಾರೆ. ಜಾಮೀನು ತೀರ್ಪು ಬರುವ ದಿನ ದರ್ಶನ್​​ ತಮಿಳುನಾಡಿಗೆ ಹೋಗಿದ್ದರು. ಕುದುರೆ ಕೊಂಡುಕೊಳ್ಳುವ ಉದ್ದೇಶದಿಂದ ಹೋಗಿದ್ದರು. ಆಗ ಬೇಲ್ ಕ್ಯಾನ್ಸಲ್ ಅಂತ ಬಂದ ಸುದ್ದಿ ಕೇಳಿ ನನಗಂತು ತುಂಬಾನೆ ಬೇಜಾರಾಯ್ತು ಎಂದಿದ್ದಾರೆ.

ಸುಪ್ರೀಂಕೋರ್ಟ್​ ಜಾಮೀನು ರದ್ದು ಮಾಡಿದ ವಿಚಾರವನ್ನು ನಾವು ದರ್ಶನ್​ಗೆ ಹೇಳುವುದು ಹೇಗೆ..? ಅನ್ನೋ ವಿಚಾರ ಒಂದು ಕ್ಷಣ ನಾನು ಯೋಚನೆ ಮಾಡಿದೆ. 15 ನಿಮಿಷ ಆದರೂ ಈ ವಿಚಾರ ತಿಳಿಸೋ ಬಗ್ಗೆ ನನಗೆ ಉತ್ತರ ಹೊಳೆಯಲಿಲ್ಲ. ನಾನು ಯೋಚಿಸುತ್ತಲೇ ಇದ್ದೆ. ಆ ವಿಚಾರ ಕೇಳಿದ ತಕ್ಷಣ ಬ್ಯಾಗ್‌‌ನ ರೆಡಿ ಮಾಡು ಬರ್ತಿದ್ದೀನಿ ಅನ್ನೋ ಮಾತನ್ನ ದರ್ಶನ್ ನನಗೆ ಹೇಳಿದ್ದರು ಎನ್ನುವ ಮೂಲಕ ನನ್ನಲ್ಲಿದ್ದ ಆತಂಕವನ್ನು ತಾನೇ ಕಡಿಮೆ ಮಾಡಿದರು ಎಂದಿದ್ದಾರೆ.

ದರ್ಶನ್ ವಿರೋಧಿಗಳು ದರ್ಶನ್​ಗೆ ಮಾತ್ರವಲ್ಲ, ಮಗ ವಿನೀಶ್‌ನನ್ನೂ ಕೂಡ ಸೋಷಿಯಲ್ ಮಿಡಿಯಾದಲ್ಲಿ ಟ್ರೋಲ್ ಮಾಡಿದ್ದರು. ದರ್ಶನ್ ಮಗ ವಿನೀಶ್‌ಗೆ ಇನ್ನು 16 ವರ್ಷ, ವಿನೀಶ್ ವಿಚಾರ ಕೇಳಿದಾಗ, 16 ವರ್ಷದ ಹುಡುಗನಿಗೆ ನಾನು ಏನಂತ ಹೇಳಲಿ..? ದರ್ಶನ್ ಮೊದಲ ಬಾರಿ ಅರೆಸ್ಟ್ ಆದಾಗ ವಿನೀಶ್ ತುಂಬಾನೆ ಅತ್ತಿದ್ದ. ಈ ವಿಚಾರ ಅವನಿಗೆ ಫ್ರೆಂಡ್ಸ್ ಮೂಲಕ ಗೊತ್ತಾಗಿತ್ತು. ದರ್ಶನ್ ಜೈಲು ಸೇರಿದಾಗ ಮಧ್ಯರಾತ್ರಿಯೆಲ್ಲ ವಿನೀಶ್ ಎದ್ದು ಅಳ್ತಾ ಕೂರ್ತಿದ್ದ ಎಂದು ನೆನಪಿಸಿಕೊಂಡಿದ್ದಾರೆ.

ದರ್ಶನ್​ ಅರೆಸ್ಟ್​ ಮೇಲೆ ಸುಮಾರು 1 ತಿಂಗಳು ವಿನೀಶ್​ನ ಮ್ಯಾನೇಜ್ ಮಾಡೋದು ಕಷ್ಟವಾಯ್ತು. ಅಪ್ಪ ಅನ್ನೋದಕ್ಕಿಂತ ಫ್ಯಾನ್ ತರ ದರ್ಶನ್​ನನ್ನು ನೋಡ್ತಾನೆ ಅಂದಿದ್ದಾರೆ. ಅಷ್ಟೇ ಅಲ್ಲದೆ ದರ್ಶನ್ ಫ್ಯಾನ್ಸ್ ಅನ್ ಎಜುಕೇಟೆಡ್ ಅನ್ನೋರಿಗೂ ಚಾಟಿ ಬೀಸಿರುವ ದರ್ಶನ್ ಪತ್ನಿ ವಿಜಯಲಕ್ಷ್ಮೀ. ಒಂದು ಶಾಲೆ ಓಪನ್​ ಮಾಡಿ, ಟೀಕಾಕಾರಿಂದಲೇ ಪಾಠ ಮಾಡಿಸೋಣ ಬಿಡಿ ಎಂದು ವ್ಯಂಗ್ಯಭರಿತ ಮಾತುಗಳಲ್ಲಿ ಉತ್ತರ ನೀಡಿದ್ದಾರೆ. ಈ ನಡುವೆ ಇವತ್ತು ದರ್ಶನ್​ ಕೊಲೆ ಕೇಸ್​ ಟ್ರಯಲ್​ ಆರಂಭ ಆಗುತ್ತಿದೆ.

Related posts

Modi Japan Tour: ದೇಶದ ವಿದೇಶಾಂಗ ನೀತಿ ಬಗ್ಗೆ ಟೀಕೆ ಒಳ್ಳೇದಾ..? ಕೆಟ್ಟದ್ದಾ..?

Publicspot

New Law In Loksabha: ಪ್ರಧಾನಿ, ಸಿಎಂ, ಮಂತ್ರಿಗಳಿಗೂ ಬರ್ತಿದೆ ಹೊಸ ಕಾನೂನು..!

Publicspot

PIL rejected by supreme court; ಸುಪ್ರೀಂಕೋರ್ಟ್‌ ಆದೇಶ ಮುಚ್ಚಿಟ್ಟು SIT ರಚನೆ ಮಾಡಿತಾ ಸರ್ಕಾರ..?

Publicspot

Delhi Car Blast; ರೆಡ್​ಪೋರ್ಟ್​ ಬಳಿಕ ಕಾರು ಸ್ಫೋಟ.. 10ಕ್ಕೂ ಹೆಚ್ಚು ಸಾವು.. ಪುಲ್ವಾಮಾ ಲಿಂಕ್..!?

Publicspot

Nepal New Leader emerged: ನೇಪಾಳಕ್ಕೆ ನೂತನ ನಾಯಕರು ಯಾರು..? ಏನು ವಿಶೇಷ..?

Publicspot

ಕಾರ್​ ಸ್ಫೋಟ.. NIA ತನಿಖೆಗೆ ವಹಿಸಿ ಕೇಂದ್ರ ಗೃಹ ಇಲಾಖೆ ಆದೇಶ

Publicspot