The Public Spot
ರಾಜಕೀಯ

Hate Speach Act; ದ್ವೇಷ ಭಾಷಣಕ್ಕೆ ನೂತನ ಕಾನೂನು..! ಬಿಜೆಪಿ ನಾಯಕರಿಗೆ ಇದು ಲಗಾಮು..?

ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ದ್ವೇಷ ಭಾಷಣ ವಿಧೇಯಕ ಮಂಡನೆ ವಿಚಾರವಾಗಿ ಕಾನೂನು ಸಚಿವ ಹೆಚ್.ಕೆ ಪಾಟೀಲ್ ಮಾತನಾಡಿದ್ದಾರೆ. ಸಮಾಜವನ್ನು ಸಮುದಾಯಗಳನ್ನ ಒಟ್ಟಾರೆ ರಾಜ್ಯ, ದೇಶದಲ್ಲಿ ಶಾಂತಿ ಇರಬೇಕು ಎನ್ನುವ ಉದ್ದೇಶದಿಂದ ದ್ವೇಷ ಭಾಷಣ ನಿಷೇಧ ಮಾಡುವ ಸಲುವಾಗಿ ಸರ್ಕಾರ ವಿಧೇಯಕ ಮಂಡನೆ ಮಾಡಲಿದೆ. ಉದ್ದೇಶ ಅನಾವಶ್ಯಕವಾಗಿ ಯಾರು ಸಮಾಜದ ಶಾಂತಿ ಕದಡುವ ಕೆಲಸ ಮಾಡಬಾರದು ಎಂದಿದ್ದಾರೆ. ಸಮಾಜದಲ್ಲಿ ಸುಮಧುರ ಭಾವನೆಯನ್ನ ಕದಡುವ ಕೆಲಸ ಮಾಡಬಾರದು. ಯಾರು ಸಮಾಜದಲ್ಲಿ ಶಾಂತಿ ಬಯಸ್ತಾರೆ ಅವರು ಎಲ್ಲರೂ ಈ ವಿಧೇಯಕ ಬೆಂಬಲಿಸಬೇಕು ಎಂದು ನಿರೀಕ್ಷೆ ಮಾಡ್ತೇವೆ ಎಂದಿದ್ದಾರೆ.

ದ್ವೇಷ ಭಾಷಣವನ್ನು ಯಾರೇ ಮಾಡಲಿ, ಯಾವ ಪಕ್ಷದವರೇ ಮಾಡಲಿ, ಯಾವುದೇ ಗುಂಪಿನವರೇ ಮಾಡಲಿ ಅಂತವರ ವಿರುದ್ಧ ಈ ಕಾನೂನು ಅಸ್ತ್ರ ಬಳಕೆ ಆಗುತ್ತದೆ ಎಂದಿರುವ ಹೆಚ್​.ಕೆ ಪಾಟೀಲ್​, ಯಾರು ದ್ವೇಷ ಮಾಡ್ತಾರೆ ಅವರಿಗೆ ಈ ಬಗ್ಗೆ ಸ್ವಲ್ಪ ಅಂಜಿಕೆ ಇರಬಹುದು. ಆದರೆ ಈ ಕಾನೂನು ಮಾಡೋದನ್ನ ಬಿಡಲು ಆಗೋದಿಲ್ಲ. ಬಿಜೆಪಿ ಅವರು ಅನುಮಾನಗಳನ್ನ ಹೇಳಲಿ. ಅವರ ಸ್ಪಷ್ಟೀಕರಣಗಳನ್ನ ನಾವು ಕೇಳ್ತೇವಿ. ನಮ್ಮ ಮಾತಿಗೆ ಒಪ್ಪುತ್ತಾರೆ ಎಂದು ನಿರೀಕ್ಷೆ ಮಾಡ್ತೇವೆ ಎಂದಿದ್ದಾರೆ.

ದ್ವೇಷ ಭಾಷಣ ಬಿಲ್ ಮಂಡನೆ ವಿಚಾರವಾಗಿ ಪ್ರತಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ , ಇವರು ರಾಜಕೀಯ ನಾಯಕರನ್ನ ಟಾರ್ಗೆಟ್ ಮಾಡಿದ್ದಾರೆ. ದ್ವೇಷ ಭಾಷಣ ಮಾಡಿದರೆ ಕಡಿವಾಣ ಇದೆ. ಈಗ ಬೇಕಾದಷ್ಟು ಕಾನೂನುಗಳಿವೆ. ಇದು ಕೋಮು ಸೌಹಾರ್ಧತೆ ಹಾಳು ಮಾಡುವುದಕ್ಕಷ್ಟೇ ಹೊಸ ಕಾನೂನು ಎಂದಿದ್ದಾರೆ.

ಬೆಳಗಾವಿಯ ಸುವರ್ಣಸೌಧದಲ್ಲಿ ಮಾತನಾಡಿದ ಬಿಜೆಪಿ ಶಾಸಕ ಚನ್ನಬಸಪ್ಪ ( ಚೆನ್ನಿ ) , ಸರ್ಕಾರದಿಂದ ಹೇಟ್ ಸ್ಪೀಚ್ ಬಿಲ್ ಮಂಡನೆ ಮಾಡುವ ಮೂಲಕ ದ್ವೇಷ ಬಿತ್ತುವ ಕೆಲಸ ಮಾಡ್ತಿದೆ ಎಂದಿದ್ದಾರೆ. ಕಾಂಗ್ರೆಸ್​ನವರಿಗೆ ಸತ್ಯಸಂಗತಿ ಬೇಕಿಲ್ಲ. ಅದನ್ನು ದ್ವೇಷ ಭಾಷಣ ಅಂದರೆ ಹೇಗೆ..? ವಂದೇ ಮಾತರಂ 150 ವರ್ಷ ಮುಚ್ಚಿಟ್ರು. ಈಗ ಕಾಂಗ್ರೆಸ್ ಈ ಬಿಲ್ ತರೋದಕ್ಕೆ ಹೊರಟಿದೆ. ಇದೆಲ್ಲವೂ ಆಗದ ಮಾತು ಎಂದಿದ್ದಾರೆ.

ದ್ವೇಷ ಭಾಷಣ ಮಾಡಿದರೆ ಈಗಲೂ ಕ್ರಮ ತೆಗೆದುಕೊಳ್ಳುವುದಕ್ಕೆ ಕಾನೂನು ಅವಕಾಶ ಮಾಡಿಕೊಡುತ್ತದೆ. ಆದರೆ ಇದೀಗ ಹೊಸ ರೂಪದಲ್ಲಿ ತರ್ತಿರೋ ಕಾನೂನು ಏನೆಲ್ಲಾ ಅಂಶಗಳನ್ನು ಸೇರಿಸಿದ್ದಾರೆ ಅನ್ನೋದನ್ನು ಕಾದು ನೋಡ್ಬೇಕು. ಯಾವ ಯಾವ ರೀತಿಯ ಮಾತುಗಳು ದ್ವೇಷ ಭಾಷಣದ ಅಡಿಯಲ್ಲಿ ತರುತ್ತಿದ್ದಾರೆ. ಈ ದ್ವೇಷ ಭಾಷಣ ಕಾನೂನು ತರುವುದಕ್ಕೆ ಪ್ರಮುಖವಾಗಿ ಬಿಜೆಪಿಗೆ ಕಡಿವಾಣ ಹಾಕುವ ಉದ್ದೇಶ ಹೊಂದಿದ್ಯಾ..? ಅನ್ನೋದು ಕೂಡ ವಿದೇಯಕ ಮಂಡನೆ ಆದ ಬಳಿಕ ಗೊತ್ತಾಗಬೇಕಿದೆ.

Related posts

ನನಗೆ ಸರ್ಕಾರದ ಭತ್ಯೆ ಬೇಡ.. ಊಟ, ತಿಂಡಿ, ಕಾಫಿ, ರೂಮು ಏನೂ ಬೇಡ.. ಸ್ಪೀಕರ್‌ಗೆ ಪತ್ರ..

Publicspot

2 ದಿನದಲ್ಲಿ ಹೊಸ ವರ್ಷ.. ಹೊಸ ಮನೆ ಕೊಡ್ತೀವಿ.. ಸಿಂಗಲ್‌ ರೂಮ್‌ ಮನೆ..

Publicspot

ಪರಿಸರವನ್ನು ಪಠ್ಯಕ್ರಮವಾಗಿಸುವ ಕೆಲಸವನ್ನು ನಮ್ಮ ಸರ್ಕಾರ ಮಾಡಲಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ

admin

Congress and Kannadigas; ಕನ್ನಡಿಗರ ಮೇಲಿನ ಪ್ರೀತಿಗಿಂತಾ ಅನ್ಯರೇ ಕಾಂಗ್ರೆಸ್ಗೆ ಮುಖ್ಯನಾ..?

Publicspot

Vote Theft.. ರಾಹುಲ್​ ಆರೋಪಕ್ಕೆ ಟೀಕೆ ಮಾಡಿದವರಿಗೆ ಪ್ರಿಯಾಂಕ್​ ತಿರುಗೇಟು..

Publicspot

ಸತ್ಯ ಹೇಳಿದ್ದಕ್ಕೆ ಸಚಿವ ಸ್ಥಾನ ಕಿತ್ಕೊಳ್ತಾ ಕಾಂಗ್ರೆಸ್​ ಹೈಕಮಾಂಡ್​..?

Publicspot