ದೆಹಲಿಗೆ ತೆರಳಿದ್ದ ಸಚಿವ ಸತೀಶ್ ಜಾರಕಿಹೊಳಿ ಬೆಂಗಳೂರಿಗೆ ವಾಪಸ್ ಆದ ಬಳಿಕ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ್ದು, ದೆಹಲಿಗೆ ಸಾಮಾನ್ಯವಾಗಿ ಕೆಲಸ ಕಾರ್ಯಗಳಿಗೆ ಹೋಗಿದ್ದೆ, ಅದರಲ್ಲಿ ವಿಶೇಷತೆ ಏನಿಲ್ಲ. ರಣದೀಪ್ ಸಿಂಗ್ ಸುರ್ಜೇವಾಲಾ ಅವರನ್ನು ಮಾತ್ರ ಭೇಟಿಯಾಗಿದ್ದೆ. ಯಾವುದೇ ಪ್ರಸ್ತಾಪ ಆಗಿಲ್ಲ, ಬೇರೇನು ಚರ್ಚೆ ಆಗಿಲ್ಲ. ಅವಕಾಶ ಬಂದಾಗ ಚರ್ಚೆ ಮಾಡುವ ಬಗ್ಗೆ ನೋಡೋಣ ಎಂದಿದ್ದಾರೆ.
ಬಿಹಾರ ಚುನಾವಣೆ ಫಲಿತಾಂಶ ಇನ್ನೂ ಬರಬೇಕು. ಸಿಎಂ ಜೊತೆ ನಾನು ಏನು ದೆಹಲಿಗೆ ಹೋಗಲ್ಲ. ವೈಟ್ ವಾಶ್ ಬಗ್ಗೆ ರಾಜಣ್ಣ ಹೇಳಿಕೆ ವಿಚಾರವಾಗಿ ಅವರ ಮಾತಿನ ಬಗ್ಗೆ ಅವರೇ ಸ್ಪಷ್ಟನೆ ಕೊಡಬೇಕು. ಅದರ ಬಗ್ಗೆ ನಾನು ಹೇಳೋಕೆ ಆಗಲ್ಲ. ಸಿಎಂ, ಅಧ್ಯಕ್ಷರು ಇದ್ದಾರೆ ಅದರ ಬಗ್ಗೆ ಅವರೇ ಮಾತಾಡಬೇಕು. ನಾವು ಏನೇ ಹೇಳಿದ್ರು ಅಂತಿಮವಾಗಿ ಹೈಕಮಾಂಡ್ ತೀರ್ಮಾನ ಮಾಡೋದು. ನಾವು ನಮ್ಮ ಅಭಿಪ್ರಾಯ ಹೇಳಿದ್ದೇವೆ, ಉಳಿದಿದ್ದು ಅವರೇ ತೀರ್ಮಾನ ಮಾಡಬೇಕು. ಐದು ವರ್ಷ ಸಿಎಂ ಎಂಬ ಜಮ್ಮೀರ್ ಹೇಳಿಕೆ ವಿಚಾರವಾಗಿ ಮಾತನಾಡಿ, ಅವರು ಹೇಳಿದ್ಮೆಲೆ ಮತ್ತೆ ನಾನು ಇನ್ನೇನು ಹೇಳಲಿ..? ಎಂದಿದ್ದಾರೆ.
ಪ್ರತ್ಯೇಕ ಉತ್ತರ ಕರ್ನಾಟಕ ವಿಚಾರವಾಗಿ ಶಾಸಕ ರಾಜು ಕಾಗೆ ಪತ್ರ ಬರೆದಿರುವ ವಿಚಾರ ಗೊತ್ತಿಲ್ಲ. ನಮ್ಮ ನಿಲುವು ಅಖಂಡ ಕರ್ನಾಟಕ ಇರಬೇಕೆಂಬುದು. ಇದನ್ನು ಉಮೇಶ್ ಕತ್ತಿ ಇದ್ದಾಗಲೇ ಅಖಂಡ ಕರ್ನಾಟಕ ಇರಬೇಕು ಎಂದಿದ್ದೇನೆ. ಹೇಳೋದಕ್ಕೆ ಎಲ್ಲರಿಗೂ ಸ್ವತಂತ್ರ ಇದೆ ಎಂದಿದ್ದಾರೆ ಸತೀಶ್ ಜಾರಕಿಹೊಳಿ. ಸಂಪುಟ ಪುನಾರಚನೆ ಬಗ್ಗೆ ವರಿಷ್ಠರು ಹೇಳಬೇಕು. ಮೊದಲೇ ಕ್ರಾಂತಿ ಆಗಲ್ಲ ಅಂತಾ ಹೇಳಿದ್ದೀವಲ್ಲ. ಫೈನಲ್ ಆಗಿ ಪಕ್ಷದ ಎಲ್ಲರು ಅಲ್ಲಿಗೆ ಬಂದಿದ್ದಾರೆ ಅಷ್ಟೇ. ನವೆಂಬರ್ ಬಳಿಕ ಯಾವುದೇ ಕ್ರಾಂತಿ ಇಲ್ಲ ಎಂದಿದ್ದಾರೆ.


