ಧರ್ಮಸ್ಥಳ ಬುರುಡೆ ಕೇಸ್ನಲ್ಲಿ ತಮಿಳುನಾಡು ಸಂಸದ, ಕರ್ನಾಟಕ ಕೇಡಾರ್ನ ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ಮೇಲೆ ಬಿಜೆಪಿ ನಾಯಕ ಜನಾರ್ದನ ರೆಡ್ಡಿ ಆರೋಪ ಮಾಡಿದ್ದರು. ಆದರೆ ಸಸಿಕಾಂತ್ ಸೆಂಥಿಲ್, ನನ್ನ ವಿರುದ್ಧ ಸುಖಾಸುಮ್ಮನೆ ಆರೋಪ ಮಾಡಲಾಗಿದೆ. ನನಗೂ ಈ ಕೇಸ್ಗೂ ಸಂಬಂಧವೇ ಇಲ್ಲ. ಎಂದು ಆರೋಪ ಮಾಡಿದ್ದ ಶಾಸಕ ಜನಾರ್ದನ ರೆಡ್ಡಿ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ನಲ್ಲಿ ಸಸಿಕಾಂತ್ ಸೆಂಥಿಲ್ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಸೆಪ್ಟೆಂಬರ್ 11ರಂದು 42ನೇ ಎಸಿಎಂಎಂ ಕೋರ್ಟ್ನಲ್ಲಿ ವಿಚಾರಣೆಗೆ ನಿಗದಿಯಾಗಿದೆ.
ಜನಾರ್ದನ ರೆಡ್ಡಿ ಕರ್ನಾಟಕದ ಪ್ರಾಪರ್ಟಿಯನ್ನ ಲೂಟಿ ಮಾಡಿದ ವ್ಯಕ್ತಿ. ಈಗಾಗಲೇ 7 ವರ್ಷ ಜೈಲು ಶಿಕ್ಷೆಗೆ ಒಳಗಾಗಿ, ಶಿಕ್ಷೆಗೆ ತಡೆಯಾಜ್ಞೆ ಪಡೆದು ಹೊರಗಿದ್ದಾರೆ. ಅಂಥಹ ವ್ಯಕ್ತಿ ನನ್ನ ಮೇಲೆ ಆರೋಪ ಮಾಡಿದ್ದಾರೆ. ನನಗೆ ಬುರುಡೆ ಬಗ್ಗೆ ಗೊತ್ತಿಲ್ಲ. ನನ್ನನ್ನ ಟಾರ್ಗೆಟ್ ಮಾಡಲಾಗ್ತಿದೆ ಎಂದು ಹೇಳಿದ್ದಾರೆ. ಆದರೆ ಜನಾರ್ದನ ರೆಡ್ಡಿ ಮಾತ್ರ ಸಸಿಕಾಂತ್ ಸೆಂಥಿಲ್ ಮೇಲೆ ಎಸ್ಐಟಿ ವಿಚಾರಣೆ ಮಾಡ್ಬೇಕು ಎಂದು ಆಗ್ರಹ ಮಾಡಿದ್ದಾರೆ. ಜೊತೆಗೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಇರುವ ಕಾರಣಕ್ಕೆ ಸಸಿಕಾಂತ್ ಸೆಂಥಿಲ್ ವಿಚಾರಣೆ ಕಷ್ಟ ಸಾಧ್ಯ. ಹೀಗಾಗಿ ಈ ಪ್ರಕರಣವನ್ನು ಎನ್ಐಎ ಅಥವಾ ಸಿಬಿಐ ತನಿಖೆ ಮಾಡುವುದು ಸೂಕ್ತ ಎಂದು ಒತ್ತಾಯ ಮಾಡಿದ್ದಾರೆ.

ಸೌಜನ್ಯ ಮಾವ ವಿಠಲ್ ಗೌಡ ಚಿನ್ನಯ್ಯನೇ ಬುರುಡೆಯನ್ನು ತಂದಿದ್ದು ಎಂದು ಎಸ್ಐಟಿ ಎದುರು ಒಪ್ಪಿಕೊಂಡಿದ್ದಾರೆ. ಆದರೆ ಆ ಬುರುಡೆ ತರುವಾಗ ಚಿನ್ನಯ್ಯನ ಜೊತೆಗೆ ನಾನಿದ್ದೆ ಎಂದಿರುವ ಕಾರಣಕ್ಕೆ ವಿಠಲ್ ಗೌಡರನ್ನು ಕರೆದುಕೊಂಡು ಹೋಗಿ ಸ್ಥಳ ಮಹಜರು ಎಲ್ಲಾ ಮಾಡಲಾಗಿದೆ. ತಲೆ ಬುರುಡೆ ತಂದಾಗ ದೇಹದ ಉಳಿದ ಭಾಗ ಎಲ್ಲಿದೆ..? ಅಸಲಿಗೆ ಆ ತಲೆ ಬುರುಡೆ ಯಾರದ್ದು..? ಅನ್ನೋ ಬಗ್ಗೆ ಎಸ್ಐಟಿ ಟೀಂ ತನಿಖೆ ಮಾಡುತ್ತಿದೆ. ಈ ನಡುವೆ ಮಧ್ಯರಾತ್ರಿ ಆದರೂ SIT ಮತ್ತೆ ಕಚೇರಿಗೆ ಕರೆದುಕೊಂಡು ಬಂದು ವಿಚಾರಣೆ ಮುಂದುವರಿಸಿದೆ. ವಿಠಲ್ ಗೌಡನ ವಿರುದ್ಧ ಸಾಕಷ್ಟು ಸಾಕ್ಷ್ಯಗಳು ಸಂಗ್ರಹ ಆದರೆ ಬಂಧನ ಮಾಡಿದರೂ ಅಚ್ಚರಿಯೇನಿಲ್ಲ ಎನ್ನಲಾಗ್ತಿದೆ.


