The Public Spot
ಅಪರಾಧ

RAMYA REACTION: ನಟ ದರ್ಶನ್​ ಜೈಲಿಗೆ ಹೋಗಿದ್ದಕ್ಕೆ ರಮ್ಯಾ ಬೇಸರ.. ಟ್ರೋಲರ್ಸ್​ ಭೀತಿನಾ..?

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್​ ಅಂಡ್​ ಗ್ಯಾಂಗ್​ ಜೈಲಿಗೆ ಹೋಗಿದ್ದು ಆಗಿದೆ. ಈ ಪ್ರಕರಣದ ಬಗ್ಗೆ ನಟಿ ರಮ್ಯಾ ರಿಯಾಕ್ಷನ್​ ಕೊಟ್ಟಿದ್ದಾರೆ. ಸುಪ್ರೀಂಕೋರ್ಟ್​ ವಿಚಾರಣೆ ವೇಳೆ ಸುಪ್ರೀಂಕೋರ್ಟ್​ ಹೈಕೋರ್ಟ್​ ಆದೇಶವನ್ನು ಕಟುವಾಗಿ ಟೀಕಿಸಿತ್ತು. ಆಗಲೇ ನ್ಯಾಯ ಸಿಗುವ ನಿರೀಕ್ಷೆ ಇದೆ ಎನ್ನುವ ಅರ್ಥದಲ್ಲಿ ಮಾತನಾಡಿದ್ದ ನಟಿ ರಮ್ಯಾ, ದರ್ಶನ್​ ಅಭಿಮಾನಿಗಳು ಎನ್ನಲಾದ ಹುಡುಗರ ಕೆಂಗಣ್ಣಿಗೆ ಗುರಿಯಾಗಿದ್ದರು. ಆದರೆ ಇದೀಗ ದರ್ಶನ್​ ಅಂಡ್​ ಗ್ಯಾಂಗ್​ ಜಾಮೀನು ರದ್ದಾಗಿ ಪರಪ್ಪನ ಅಗ್ರಹಾರ ಜೈಲಿಗೆ ಹೋಗಿದ್ದಾರೆ. ಇದೀಗ ರಮ್ಯಾ ಕೊಂಚ ಬೇಸರ ಹೊರಹಾಕಿದ್ದಾರೆ. ಜೊತೆಗೆ ದರ್ಶನ್​ ಜೊತೆಗೆ ಇರುವ ತಂಡ ಸರಿಯಿಲ್ಲ ಎಂದು ನೇರವಾಗಿಯೇ ಹೇಳಿದ್ದಾರೆ.

ವಾಯ್ಸ್​ ನೋಟ್​ ಪ್ರತಿಕ್ರಿಯೆ ನೀಡಿರುವ ರಮ್ಯಾ, ನಾನು ದರ್ಶನ್​ ಜೊತೆಗೆ ಕೆಲಸ ಮಾಡಿದ್ದೇನೆ, ನನಗೆ ಗೊತ್ತಿರುವ ವ್ಯಕ್ತಿ. ದರ್ಶನ್​ ತನ್ನ ಜೀವನವನ್ನು ತಾನೇ ಹಾಳು ಮಾಡಿಕೊಂಡರು ಎನಿಸುತ್ತದೆ. ನಾನು ಅವರ ಜೊತೆಗೆ ಕೆಲಸ ಮಾಡುವಾಗ ನನ್ನ ಜೊತೆಗೆ ಕೆಲವೊಂದು ವಿಚಾರ ಹಂಚಿಕೊಂಡಿದ್ದರು. ಎಷ್ಟು ಕಷ್ಟಪಟ್ಟು ಮೇಲೆ ಬಂದೆ ಅನ್ನೋದನ್ನು ಹೇಳಿಕೊಂಡಿದ್ದರು. ಆ ಬಗ್ಗೆ ನನಗೆ ಹೆಮ್ಮೆ ಇದೆ. ಲೈಟ್​ ಬಾಯ್​ ಆಗಿ ಕೆಲಸ ಮಾಡಿ ಈ ಮಟ್ಟಕ್ಕೆ ಬೆಳೆದಿದ್ದು ಹೆಮ್ಮೆಯ ವಿಚಾರ. ಇತ್ತೀಚಿನ ನಡವಳಿಕೆ ನೋಡಿ ನನಗೆ ಬೇಸರವೂ ಆಗಿತ್ತು. ಅವರ ಅಕ್ಕಪಕ್ಕದ ಜನರು ಇಲ್ಲ ಎನಿಸುತ್ತದೆ. ಅವರಿಗೆ ಒಳ್ಳೆಯ ದಾರಿ ತೋರಿಸಲು, ಮಾರ್ಗದರ್ಶನ ಮಾಡಲು ಗುಡ್​ ಅಡ್ವೈಸರ್​ ಇರಬೇಕು ಎಂದಿದ್ದಾರೆ.

ಮತ್ತೊಂದು ಕಡೆ ಸುಪ್ರೀಂಕೋರ್ಟ್​ ಆದೇಶ ನೋಡಿದಾಗ ನನಗೆ ರಿಲೀಫ್ ​ಎನಿಸಿತು. ಇತ್ತೀಚಿಗೆ ನಾವು, ನಮ್ಮ ಸಮಾಜ ದಿಕ್ಕು ತಪ್ಪುತ್ತಿದೆ. ಹೆಣ್ಣು ಮಕ್ಕಳ ಬಗ್ಗೆ ಗೌರವವಿಲ್ಲ. ಸೇಫ್ಟಿ ಇಲ್ಲ. ಕಳೆದ ಬಾರಿ ಸುಪ್ರೀಂಕೋರ್ಟ್​ ತೀರ್ಪು ಬಗ್ಗೆ ಮಾತನಾಡಿದ್ದಕ್ಕೆ ಕೆಟ್ಟದಾಗಿ ಕಮೆಂಟ್​ ಮಾಡಿದ್ದರು. ಟ್ರೋಲ್ಸ್​ ಮಾಡಿದ್ದರು. ಸಮಾಜದಲ್ಲಿ ಒಂದು ಕಾನೂನು, ನೀತಿ ನಿಯಮಗಳು ಇರುತ್ತವೆ. ಅವುಗಳನ್ನು ಪಾಲಿಸಬೇಕು. ನಾವೇ ಕಾನೂನು ಕೈಗೆ ತೆಗೆದುಕೊಂಡರೆ ಈ ರೀತಿಯ ಕೆಟ್ಟ ಕೆಟ್ಟ ಕೆಲಸಗಳು ಆಗುತ್ತವೆ. ಸುಪ್ರೀಂಕೋರ್ಟ್​ ಆದೇಶದಿಂದ ಸಮಾಜಕ್ಕೆ ಉತ್ತಮ ಸಂದೇಶ ರವಾನೆ ಆಗಿದೆ. ನ್ಯಾಯ ಅಂದ್ರೆ ನ್ಯಾಯ ಅಷ್ಟೆ. ದೊಡ್ಡವರೇ ಇರಲಿ, ಚಿಕ್ಕವರೇ ಇರಲಿ.

ಒಮ್ಮೊಮ್ಮೆ ನಮಗೆ ಅನಿಸುತ್ತದೆ, ನ್ಯಾಯ ಸಿಗಲ್ಲ, ತುಂಬಾ ವರ್ಷ ಕಾಯಬೇಕು ಎಂದು. ಆದರೆ ನ್ಯಾಯಾಂಗ ವ್ಯವಸ್ಥೆಯೇ ಹಾಗೆ. ಆದರೆ ನಾವು ನಂಬಿಕೆ ಇಟ್ಟುಕೊಳ್ಳಬೇಕು. ದೊಡ್ಡ ಮಟ್ಟದಲ್ಲಿ ಸಮಾಜಕ್ಕೆ ಉತ್ತಮ ಸಂದೇಶ ಹೋಗಿದೆ. ಆದರೆ ನನಗೆ ಬೇಸರವೂ ಆಗಿದೆ, ಖುಷಿಯೂ ಆಗಿದೆ. ಇದೊಂದು ಉತ್ತಮ ಆದೇಶ, ಮುಂದಿನ ಭವಿಷ್ಯದ ಸಮಾಜಕ್ಕೆ ಈ ಆದೇಶ ಸಹಕಾರಿ ಆಗಲಿದೆ ಎಂದಿದ್ದಾರೆ. ಒಟ್ಟಾರೆ ಈ ಪ್ರತಿಕ್ರಿಯೆ ನೋಡಿದಾಗ ಟ್ರೋಲರ್ಸ್​ಗಳಿಗೆ ರಮ್ಯಾ ಹೆದರಿದ್ರಾ ಅಂತಾ ಅನುಮಾನ ಬರೋದು ಸಹಜ. ಆದರೆ ರಮ್ಯಾ ಮನಸ್ಸಿನಿಂದ ಮಾತನಾಡಿದ್ದಾರೆ. ನಮ್ಮ ಜೊತೆಗಿದ್ದವರು ನಮಗೆ ಇಷ್ಟ ಇಲ್ಲದೇ ಇದ್ದರೂ ಅವರಿಗೆ ಕೆಟ್ಟದಾಯ್ತು ಅಂದಾಗ ಅಯ್ಯೋ ಎನುವುದು ಧರ್ಮ. ನಮ್ಮ ಶತ್ರುವಿಗೇ ಸಮಸ್ಯೆ ಆಯ್ತು ಅಂದಾಗ ಅಯ್ಯೋ ಪಾಪ ಎನ್ನುವುದು ಮಾನವೀಯತೆ. ಅದನ್ನೇ ರಮ್ಯಾ ಮಾಡಿದ್ದಾರೆ ಎನಿಸುತ್ತದೆ.

Related posts

Darshan And Police Officers: ರೇಣುಕಾಸ್ವಾಮಿ ಕೊಲೆ ಕೇಸ್​ ಮತ್ತು ಖಡಕ್​ ಅಧಿಕಾರಿಗಳ ಪಾತ್ರ..

ಯಶವಂತಿ

Darshan-Pavithra ಮದುವೆ ಫೋಟೋ ವೈರಲ್‌.. ಕೋರ್ಟ್‌ನಲ್ಲಿ ಕಟ್ಟ ಕಡೇ ಎಚ್ಚರಿಕೆ

Publicspot

ಧರ್ಮಸ್ಥಳದಲ್ಲಿ ಮತ್ತೊಂದು ಮಗ್ಗುಲಿಗೆ ಹೊರಳಿದ SIT ತನಿಖೆ..! ಮೂಳೆಗಳು ಬಂದಿದ್ದು ಎಲ್ಲಿಂದ..?

Publicspot

ATM ವಾಹನದಲ್ಲಿ 7.11 ಕೋಟಿ ಕಳವು.. ಬೆಂಗಳೂರು ಪೊಲೀಸ ಬಲೆಗೆ ಬಿದ್ದ 6 ಜನ..

Publicspot

Jail Video Case; ಮೊಬೈಲ್​ ಬಳಕೆಗೆ ಅವಕಾಶ ಕೊಟ್ಟವರು ಅಲ್ಲ.. ವಿಡಿಯೋ ಮಾಡಿದವರ ಟಾರ್ಗೆಟ್..

Publicspot

ಬಳ್ಳಾರಿ ಗಲಾಟೆ.. SP ಅಮಾನತು.. ಆತ್ಮಹತ್ಯೆ ಯತ್ನ.. ಸರ್ಕಾರ ಹೇಳಿದ್ದೇನು..?

Publicspot