ಬಿಗ್ಬಾಸ್ ಸ್ಪರ್ಧಿ ಆಗಿದ್ದ ನಟ ರಂಜಿತ್ ಲಾಯರ್ ಜಗದೀಶ್ ಮೇಲೆ ಹಲ್ಲೆ ಮಾಡಿ ಬಿಗ್ಬಾಸ್ ಸ್ಪರ್ಧೆಯಿಂದ ಅರ್ಧಕ್ಕೆ ವಾಪಸ್ ಬಂದಿದ್ರು. ಆ ಬಳಿಕ ಮದುವೆ ಕೂಡ ಆಗಿದ್ರು. ಜಗಳವಾಡಿಕೊಂಡು ಹೊರಕ್ಕೆ ಬಂದಿದ್ದ ಲಾಯರ್ ಜಗದೀಶ್ ಜೊತೆಗೆ ವೈಮನಸ್ಸು ಮರೆತು ಮಾತನಾಡಿದ್ದರು. ಇದೀಗ ಸ್ವಂತ ಅಕ್ಕನಿಗೆ ಧಮ್ಕಿ, ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಅಮೃತಹಳ್ಳಿ ಪೊಲೀಸ್ ಠಾಣೆಗೆ ದೂರು ಸಲ್ಲಿಕೆಯಾಗಿದೆ.

ಏನಿದು ಅಕ್ಕ-ತಮ್ಮನ ಗಲಾಟೆ..?
ಬಿಗ್ಬಾಸ್ ಸ್ಪರ್ಧಿಯಾಗಿದ್ದ ರಂಜಿತ್ ಬಾವ ಜಗದೀಶ್ ದೂರು ನೀಡಿದ್ದಾರೆ. ಅಮೃತಹಳ್ಳಿ ಠಾಣೆಯಲ್ಲಿ ಜೀವ ಬೆದರಿಕೆ ಆರೋಪದಡಿ ದೂರು ದಾಖಲಿಸಿದ್ದು, 2018 ರಿಂದ ಅಮೃತಹಳ್ಳಿಯ ಫ್ಲ್ಯಾಟ್ನಲ್ಲಿ ವಾಸವಿದ್ದೇವೆ. 2025 ರಿಂದ ಇದೇ ಫ್ಲ್ಯಾಟ್ನಲ್ಲಿ ಅಕ್ಕ, ಬಾವನ ಜೊತೆ ರಂಜಿತ್ ಕೂಡ ವಾಸವಿದ್ದು, ಇದೀಗ ಮನೆ ನಂದು ಅಂತ ಅಕ್ಕನಿಗೆ ಧಮ್ಕಿ ಹಾಕ್ತಿದ್ದಾರೆ ಎಂದು ಆರೋಪಿಸಲಾಗಿದೆ. ರಂಜಿತ್ ಹಾಗೂ ರಂಜಿತ್ ಪತ್ನಿ ಇಬ್ಬರೂ ಸೇರಿಕೊಂಡು ರಂಜಿತ್ ಅಕ್ಕನ ಜೊತೆಗೆ ಜಗಳ ಮಾಡಿದ್ದಾರೆ ಎಂದು ದೂರು ನೀಡಲಾಗಿದೆ. ಈ ಬಗ್ಗೆ ಅಮೃತಹಳ್ಳಿ ಠಾಆಣೆಯಲ್ಲಿ NCR ದಾಖಲಾಗಿದೆ.

ಠಾಣೆಗೆ ಕರೆಸಿ ವಾರ್ನ್ ಮಾಡಿದ ಪೊಲೀಸ್!
ಗಲಾಟೆ ವೇಳೆ ಒಬ್ಬರಿಗೊಬ್ಬರು ಹಲ್ಲೆ ನಡೆಸಿರೋ ಆರೋಪ ಕೇಳಿ ಬಂದಿದೆ. ನಮ್ಮ ಮನೆಯಲ್ಲಿ ಇದ್ದುಕೊಂಡು ನನ್ನದೇ ಮನೆ ಎನ್ನುತ್ತ ಮನೆ ಬಿಟ್ಟು ಹೋಗದೆ ರಂಜಿತ್ ಜೀವ ಬೆದರಿಕೆ ಹಾಕಿದ್ದಾರೆ ಅಂತಾ ದೂರು ಕೊಡಲಾಗಿದೆ. ಮನೆಯಲ್ಲಿ ಒಬ್ಬರಿಗೊಬ್ಬರು ಬೈದಾಡಿಕೊಳ್ಳುವ ವೀಡಿಯೊ ಸೆರೆ ಮಾಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ನಟ ರಂಜಿತ್ನನ್ನು ಠಾಣೆಗೆ ಕರೆಸಿದ್ದ ಅಮೃತಹಳ್ಳಿ ಪೊಲೀಸ್ರು, ಹೇಳಿಕೆ ಪಡೆದು ವಾಪಸ್ ಕಳುಹಿಸಿದ್ದಾರೆ. ಮತ್ತೊಮ್ಮೆ ಗಲಾಟೆ ಮಾಡಿಕೊಳ್ಳಬಾರದು, ಕೋರ್ಟ್ನಲ್ಲಿ ವಿವಾದ ಬಗೆಹರಿಸಿಕೊಳ್ಳುವಂತೆ ಸೂಚನೆ ನೀಡಿ ವಾಪಸ್ ಕಳುಹಿಸಿದ್ದಾರೆ ಪೊಲೀಸ್ರು.



