The Public Spot
ಅಪರಾಧ

ಕೋರ್ಟ್​ನಲ್ಲಿ ಇಂದಿನಿಂದ ದರ್ಶನ್​ ಕೊಲೆ ಕೇಸ್​ ವಿಚಾರಣೆ!!

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್​ ಅಂಡ್​ ಗ್ಯಾಂಡ್​​ಗೆ ಢವಢವ ಶುರುವಾಗುವ ದಿನಗಳು ಹತ್ತಿರವಾಗುತ್ತಿದೆ. ಇಂದಿನಿಂದ ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಅಧಿಕೃತವಾಗಿ ಟ್ರಯಲ್ ಆರಂಭ ಆಗುತ್ತಿದೆ. ಮೊದಲಿಗೆ ಪ್ರಮುಖ ಸಾಕ್ಷಿಗಳನ್ನು ವಿಚಾರಣೆ ನಡೆಸಲು ಕೋರ್ಟ್ ನಿರ್ಧಾರ ಮಾಡಿದ್ದು, ಇಂದು ಕೋರ್ಟ್​ಗೆ ರೇಣುಕಾಸ್ವಾಮಿ ತಂದೆ, ತಾಯಿ ಹಾಜರಾಗಲಿದ್ದಾರೆ.

ರೇಣುಕಾಸ್ವಾಮಿ ತಂದೆ ಕಾಶಿನಾಥ್ ಶಿವಲಿಂಗನಗೌಡರ್ ಹಾಗೂ ತಾಯಿ ರತ್ನಪ್ರಭಾ ಕೋರ್ಟ್​ ಎದುರು ಹಾಜರಾಗಿ ತಮಗೆ ಗೊತ್ತಿರುವ ಮಾಹಿತಿಯನ್ನು ಕೋರ್ಟ್​ಗೆ ತಿಳಿಸಲಿದ್ದಾರೆ. ರೇಣುಕಾಸ್ವಾಮಿ, ಅವತ್ತು ಮನೆಯಿಂದ ಎಷ್ಟು ಹೊತ್ತಿಗೆ ಹೊರಕ್ಕೆ ಹೋಗಿದ್ದ..? ಕಿಡ್ನ್ಯಾಪ್​ ಅಥವಾ ಬೆಂಗಳೂರಿಗೆ ಹೋಗ್ತಿದ್ದ ವಿಚಾರ ನಿಮಗೆ ಗೊತ್ತಿತ್ತಾ..? ಅನ್ನೋದು ಸೇರಿದಂತೆ ಹತ್ತಾರು ವಿಚಾರಗಳು 57ನೇ ಸಿಸಿಹೆಚ್ ಕೋರ್ಟ್​ನಲ್ಲಿ ನಡೆಯಲಿದೆ. CW-7, CW-8 ಇಂದು ನ್ಯಾಯಾಧೀಶರ ಮುಂದೆ ಹಾಜರಾಗಿ ಹೇಳಿಕೆ‌ ದಾಖಲಿಸಲಿರೋ

ಆರೋಪಿಗಳಾಗಿರುವ ನಟ ದರ್ಶನ್, ಪವಿತ್ರಗೌಡ ವಿರುದ್ಧ ಏನಾದರೂ ನ್ಯಾಯಾಲಯದಲ್ಲಿ ಹೇಳ್ತಾರೆ ಅನ್ನೋ ಕುತೂಹಲ ಹೆಚ್ಚಾಗಿದೆ. ಜೊತೆಗೆ ಕೋರ್ಟ್​ನಲ್ಲಿ ನ್ಯಾಯಾಧೀಶರು ಕೇಳುವ ಪ್ರಶ್ನೆಗಳಿಗೆ ಏನ್ ಉತ್ತರ ಕೊಡ್ತಾರೆ..? ರೇಣುಕಾಸ್ವಾಮಿ ತಂದೆ ತಾಯಿ ಅನ್ನೋ ಬಗ್ಗೆಯೂ ಸಾಕಷ್ಟು ಕುತೂಹಲ ಮೂಡಿಸಿದೆ. ಪೊಲೀಸರ ವಿಚಾರಣೆ ವೇಳೆ ಕಿಡ್ನ್ಯಾಪ್ ಮಾಡಿ‌ ನಮ್ಮ ಮಗನನ್ನು ಕೊಲೆ ಮಾಡಿದ್ದಾರೆ ಎಂದು ಹೇಳಿಕೆ ಕೊಟ್ಟಿದ್ದರು. ಇದೀಗ ಕೋರ್ಟ್​ನಲ್ಲಿ ಯಾವ ಹೇಳಿಕೆ ಬರುತ್ತದೆ ಅನ್ನೋದನ್ನು ಕಾದು ನೋಡ್ಬೇಕು.

ನ್ಯಾಯಾಧೀಶರು ಸಾಮಾನ್ಯವಾಗಿ ಘಟನೆ ಬಗ್ಗೆ ನಿಮಗೆ ಹೇಗೆ ಮಾಹಿತಿ ತಿಳಿಯಿತು..? ಈ ಘಟನೆ ಬಗ್ಗೆ ನಿಮಗೆ ಏನೇನು ಗೊತ್ತು..? ಅದನ್ನು ನ್ಯಾಯಾಲಯದ ಮುಂದೆ ಹೇಳಿ ಎನ್ನುತ್ತಾರೆ. ಪ್ರಾಸಿಕ್ಯೂಷನ್ ಪರವಾಗಿ ಎಸ್​ಪಿಪಿ ಪ್ರಸನ್ನ ಕುಮಾರ್ ಹಾಜರಿರುತ್ತಾರೆ. ಆರೋಪಿಗಳ ಪರ ವಕೀಲರು ಕೂಡ ಕೋರ್ಟ್​ನಲ್ಲಿ ಹಾಜರು ಇರ್ತಾರೆ. ದರ್ಶನ್, ಪವಿತ್ರಗೌಡ ಸೇರಿದಂತೆ ಜೈಲಿನಲ್ಲಿರುವ 7 ಮಂದಿ ಆರೋಪಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಕೋರ್ಟ್​ಗೆ ಹಾಜರಾಗುತ್ತಾರೆ. ಉಳಿದ ಆರೋಪಿಗಳು ವಕೀಲರ ಜೊತೆಗೆ ಕೋರ್ಟ್​ಗೆ ಆಗಮಿಸುತ್ತಾರೆ. ಒಟ್ಟಾರೆ ಇವತ್ತು ಸಾಕಷ್ಟು ಜನರ ಕಣ್ಣು ದರ್ಶನ್​ ಕೇಸ್​ ಮೇಲಿದೆ.

Related posts

ಧರ್ಮಸ್ಥಳ ಮೂಳೆ ರಹಸ್ಯ.. SIT ತನಿಖಾ ವರದಿ ಮತ್ತು ಅನುಮಾನದ ಹುತ್ತ..

Publicspot

ಶಿವಮೊಗ್ಗದಲ್ಲಿ SSLC ಸ್ಪೆಷಲ್ ಕ್ಲಾಸ್‌ ಮುಗಿಸಿ ಬರ್ದತಿದ್ದ ಹುಡುಗನನ್ನು ಹತ್ಯೆ!

Publicspot

ಕುರುಬ ಸಮುದಾಯದ ನೌಕರನ ಮೇಲೆ ಕೈ ಮಾಡಿದ ಸವಧಿ.. ಆಕ್ರೋಶ

Publicspot

Hassan Death in birthday; ಹುಟ್ಟುಹಬ್ಬದ ದಿನವೇ ಸಾವನ್ನಪ್ಪಿದ ವಿದ್ಯಾರ್ಥಿ.. ಸರ್ಕಾರದಿಂದ ಪರಿಹಾರ ಘೋಷಣೆ..

Publicspot

DARSHAN JAIL SHIFT: ದರ್ಶನ್‌ ಇವತ್ತು ಬಳ್ಳಾರಿ ಜೈಲಿಗೆ ಶಿಫ್ಟ್‌ ಆಗೋದು ಪಕ್ಕಾನಾ..?

Publicspot

ಪ್ರಜ್ವಲ್​ ರೇವಣ್ಣ ಕೇಸ್​​, 25 ಲಕ್ಷ ಬಹುಮಾನ ಘೋಷಿಸಿದ ಸರ್ಕಾರ..!

Publicspot