The Public Spot
ಕ್ರೀಡೆ

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಚಿನ್ನದಂತ ಆಟವಾಡಿದ RCB ಹುಡುಗರು.. ಚೆನ್ನೈ ಪಲ್ಟಿ..

IPL ಸೀಸನ್​ 18ರಲ್ಲಿ ಕಪ್​ ಗೆಲ್ಲುವ ಮೂಲಕ ಕಪ್​ ನಮ್ದೇ ಅನ್ನೋ ಅಭಿಮಾನಿಗಳ ಕೂಗಿದೆ ಕೊನೆಗೂ ಫಲ ಸಿಕ್ಕುವಂತೆ ಆಟವಾಡಿದ್ದ RCB ಆಟಗಾರರು ಸೀಸನ್​ 19ರಲ್ಲೂ ಭರ್ಜರಿ ಆಟವನ್ನು ಮುಂದುವರಿಸಿದ್ದಾರೆ. ಬೆಂಗಳೂರಿನಲ್ಲಿ ಕಳೆದ ವಾರ ಮಾರ್ಚ್​ 28ರಂದು ಉದ್ಘಾಟನಾ ಪಂದ್ಯದಲ್ಲಿ ಸನ್​ ರೈಸರ್ಸ್​​ ಹೈದ್ರಾಬಾದ್​ಗೆ ಸೋಲುಣಿಸಿದ್ದ RCB ಟೀನ ಆಟಗಾರರು, ಇದೀಗ ಭಾನುವಾರ (April 05) ನಡೆದ ಪಂದ್ಯದಲ್ಲಿ ಕಟ್ಟಾ ಎದುರಾಳಿ ಚೆನ್ನೈ ಸೂಪರ್​ ಕಿಂಗ್ಸ್​​ ಮಣಿಸುವ ಮೂಲಕ ಜಯದ ನಾಗಾಲೋಟ ಮುಂದುವರಿಸಿದ್ದಾರೆ. ಅದರಲ್ಲೂ ಚೆನ್ನೈ ವಿರುದ್ಧದ ಗೆಲುವು ಅಭಿಮಾನಿಗಳ ಪಾಲಿಗೆ ಸ್ವರ್ಗಕ್ಕೆ ಕಿಚ್ಚು ಹಚ್ಚಿದಂತಾಗಿದೆ.

ಸನ್​ ರೈಸರ್ಸ್​​ ವಿರುದ್ಧ ಟಾಸ್​ ಗೆದ್ದಿದ್ದ RCB ಮೊದಲು ಫೀಲ್ಡಿಂಗ್​ ಆಯ್ಕೆ ಮಾಡಿಕೊಂಡಿತ್ತು. ಕರಾರುವಕ್ಕು ಪ್ರತಿದಾಳಿ ಮೂಲಕ ಇನ್ನೂ 4 ಓವರ್​ ಬಾಕಿ ಇರುವಾಗಲೇ ಜಯದ ನಗೆ ಬೀರಿತ್ತು. ಆದರೆ ಚೆನ್ನೈ ವಿರುದ್ಧದ ಪಂದ್ಯದಲ್ಲಿ ಟಾಸ್​ ಕೈಕೊಟ್ಟಿತ್ತು. ಚಿನ್ನಸ್ವಾಮಿಯಲ್ಲಿ ಪ್ರತಿದಾಳಿ ಮೂಲಕ ಗೆಲುವು ಸುಲಭ ಅನ್ನೋದನ್ನು ಅರಿತಿದ್ದ ಚೆನ್ನೈ ನಾಯಕ ಋತುರಾಜ್ ಗಾಯಕ್ವಾಡ್​, ಮೊದಲು ಬ್ಯಾಟಿಂಗ್​ಗೆ ಬರುವಂತೆ RCB ಆಹ್ವಾನ ಕೊಟ್ರು. ಆದರೆ ಬ್ಯಾಟಿಂಗ್​​ನಲ್ಲಿ ರನ್​ಗಳ ಶಿಖರ ಕಟ್ಟುವ ಲೆಕ್ಕಾಚಾರದೊಂದಿಗೆ ಫೀಲ್ಡ್​ಗೆ ಇಳಿದ ರಜತ್​ ಪಾಟೀದಾರ್​ ಬಳಗ, 20 ಓವರ್​ಗಳಲ್ಲಿ ಬರೋಬ್ಬರಿ 250 ರನ್​ಗಳನ್ನು ಸಿಡಿಸುವ ಮೂಲಕ ಚೆನ್ನೈ ತಂಡದ ಎದುರು ಚೀನಾ ಗೋಡೆಯನ್ನೇ ನಿರ್ಮಿಸಿತ್ತು.

ವಿರಾಟ್​ ಕೊಹ್ಲಿ 18 ಎಸೆತದಲ್ಲಿ 28 ರನ್​ ಸಿಡಿಸಿ ಕ್ಯಾಚ್​ ನೀಡಿ ನಿರ್ಗಮಿಸಿದ ಬಳಿಕ ಉತ್ತರ ಜೊತೆಯಾಟದ ಮೂಲಕ ದೇವದತ್​​ ಪಡಿಕ್ಕಲ್​ 29 ಎಸೆತಕ್ಕೆ 50 ರನ್​ ಸಿಡಿಸಿದ್ರು. ಅದೇ ರೀತಿ ಫಿಲಿಪ್​ ಸಾಲ್ಟ್​​ 30 ಎಸೆತದಿಂದ 46 ರನ್​, ರಜತ್​​ ಪಾಟೀದಾರ್​ 19 ಎಸೆತಕ್ಕೆ 48 ರನ್​, ಟಿಮ್​ ಡೆವಿಡ್​ ಕೇವಲ 25 ಎಸತಕ್ಕೆ 70 ರನ್​ ಸಿಡಿಸುವ ಮೂಲಕ ಚೆನ್ನೈ ಬೌಲರ್​ಗಳನ್ನು ಅಟ್ಟಾಡಿಸಿ ರನ್​ ಮಳೆ ಸುರಿಸಿದ್ರು. ಈ ಮೂಲಕ 3 ವಿಕೆಟ್​​ ನಷ್ಟಕ್ಕೆ 250 ರನ್​ ಸೇರಿಸಿ, 251 ರನ್​ ಟಾರ್ಗೆಟ್​ ನೀಡಿದ್ರು. ಚೆನ್ನೈ ಕಡೆ ಸರ್ಫರಾಜ್​ ಖಾನ್​ 50 ರನ್​, ಪ್ರಶಾಂತ್​ ವೀರ್​​ 43 ರನ್​, ಜೇಮಿ ಓವರ್ಟನ್​​ 37 ರನ್​ ಗಳಿಸಿದ್ದು ಬಿಟ್ಟರೆ ಉಳಿದವರ ಹೋರಾಟ ಅಷ್ಟೊಂದು ತೀಕ್ಷ್ಣವಾಗಿ ಇರಲಿಲ್ಲ. ಹೀಗಾಗಿ 207 ರನ್​ ಗಳಿಸುವ ಹೊತ್ತಿಗೆ ಇನ್ನೂ 2 ಎಸೆತಗಳು ಬಾಕಿ ಇರುವಾಗಲೇ ಆಲೌಟ್​ ಆಗಿ ಸೋಲನಪ್ಪಿದರು.

RCB ಪರವಾಗಿ ಬ್ಯಾಟಿಂಗ್​ ಅತ್ಯುತ್ತಮವಾಗಿ ಇತ್ತು ಎನ್ನಬಹುದು. ಆದರೆ ಬೌಲಿಂಗ್​ನಲ್ಲೂ RCB ಆಟಗಾರರು ಉತ್ತಮ ಕೈಚಳಕ ತೋರಿಸಿ, ಆಲೌಟ್​ ಮಾಡುವಲ್ಕಲಿ ಯಶಸ್ವಿ ಆದರು. ಆದರೆ 15 ಓವರ್​ಗಳಲ್ಲೇ ಆಲೌಟ್​ ಮಾಡುವ ಹಂತದಲ್ಲಿದ್ದರು. ಆದರೆ ಆರಂಭದಿಂದಲೂ ಚೆನ್ನೈ ಆಟಗಾರರು ಮಾಡು ಇಲ್ಲವೇ ಮಡಿ ಹೋರಾಟ ನಡೆಸಿದ್ದರಿಂದ ಬೌಲರ್​ಗಳು ರನ್​ ಕೊಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೂ ಭುವನೇಶ್ವರ್​ ಕುಮಾರ್ 4 ಓವರ್​ನಲ್ಲಿ​ 41 ರನ್​ ನೀಡಿ 3 ವಿಕೆಟ್​ ಕಬಳಿಸಿದ್ರೆ, ಜಾಕಬ್​ ಡಫಿ 58 ರನ್​ ನೀಡಿ 2 ವಿಕೆಟ್​ ಕಬಳಿಸಿದ್ರು. ಇನ್ನು ಕೃನಾಲ್​ ಪಾಂಡ್ಯ 3 ಓವರ್​ಗೆ 36 ರನ್​ ಕೊಟ್ಟು 2 ವಿಕೆಟ್, ಅಭಿನಂದನ್​ ಸಿಂಗ್​​ 3.4 ಓವರ್​ನಲ್ಲಿ 30 ರನ್​ ಕೊಟ್ಟು 2 ವಿಕೆಟ್​​ ಪಡೆದ್ರು. ಸುಯಾಸ್​ ಶರ್ಮಾ 4 ಓವರ್​ಗೆ 21 ರನ್​ ಕೊಟ್ಟು 1 ವಿಕೆಟ್​ ಪಡೆದರೂ ರನ್​ಗಳ ಓಟಕ್ಕೆ ಬ್ರೇಕ್​ ಹಾಕಿದ್ರು. ಒಂದೇ ಓವರ್​ನಲ್ಲಿ 19 ರನ್​ ನೀಡಿ ಶೆಫರ್ಡ್​ ಕೊಂಚ ದುಬಾರಿಯೂ ಆದರು.

ಆದರೆ ಆರ್​​ಸಿಬಿ-ಚೆನ್ನೈ ನಡುವಿನ ಪಂದ್ಯವನ್ನು RCB ಅಭಿಮಾನಿಗಳು ಇಂಡಿಯಾ – ಪಾಕಿಸ್ತಾನದ ರೀತಿಯಲ್ಲೇ ನೋಡುವುದರಿಂದ ಈ ಪಂದ್ಯದ ಮೇಲೆ ಭಾರೀ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಈಗಾಗಲೇ 2 ಪಂದ್ಯಗಳಲ್ಲಿ ಸೋಲುಂಡು ಬೆಂಗಳೂರಿಗೆ ಬಂದಿದ್ದ ಸಿಎಸ್​ಕೆ ಟೀಂ, ಬೆಂಗಳೂರಿನಲ್ಲಾದರೂ ಗೆಲುವಿನ ಲಯಕ್ಕೆ ಮರಳಬಹುದು ಎನ್ನಲಾಗಿತ್ತು. ಆದರೆ RCB ಅಭಿಮಾನಿಗಳ ಝೇಂಕಾರದ ಎದುರು ಮಂಕಾದ ಚೆನ್ನೈನ ಸಿಂಹಗಳು RCB ಸಿಂಹಗಳ ಎದುರು ಮಂಡಿಯೂರುವಂತಾಯ್ತು. ಸತತ ಹ್ಯಾಟ್ರಿಕ್​ ಸೋಲಿನಿಂದ ಪಾಯಿಂಟ್​ ಟೇಬಲ್​ನ ಕೊನೇ ಸ್ಥಾನದಲ್ಲಿ ಉಳಿದಿದ್ರೆ RCB ಮಾತ್ರ ಪಾಯಿಂಟ್​ ಟೇಬಲ್​ನಲ್ಲಿ ಮೊದಲ ಸ್ಥಾನ ಅಲಂಕರಿಸಿ ನಾನೇ ಈ ಬಾರಿಯ ಚಾಂಪಿಯನ್​ ಅನ್ನೋ ಸುಳಿವು ಕೊಡುತ್ತಿದೆ.

Related posts

Indo – Pak T-20 Cricket; ವಿರೋಧದ ನಡುವೆ ದೇಶದ ಜನರ ಮನಸ್ಸು ಗೆದ್ದ ಕ್ರಿಕೆಟ್ ಆಟಗಾರರು..!

Publicspot

RCBಗೆ 2ನೇ ಬಾರಿ WPL ಕಿರೀಟ.. ಸ್ಮೃತಿ ಮಂದಾನ ಪಡೆ ಕಮಾಲ್​..!

Publicspot

RCB – CSK ಪಂದ್ಯಕ್ಕೆ ಸಜ್ಜಾಗಿದೆ ಚಿನ್ನಸ್ವಾಮಿ.. ಶಾಸಕರ ಟಿಕೆಟ್‌ಗಾಗಿ ಕ್ಯೂ ಕ್ಯೂ..

Publicspot

ಕಮಿಷನ್‌ ಆಸೆಗೆ ಆನೇಕಲ್‌ನಲ್ಲಿ ಕ್ರೀಡಾಂಗಣ ಮಾಡ್ತಿರೋದಾ..?

Publicspot

ಟಿ-20 ವಿಶ್ವಕಪ್‌ನಲ್ಲಿ ಸೆಮಿಫೈನಲ್‌ ಹಂತಕ್ಕೆ ಲಗ್ಗೆ ಹಾಕಿದ ಟೀಂ ಇಂಡಿಯಾ!

Publicspot

ಪಂಜಾಬ್‌ ವಿರುದ್ಧ RCB ಗೆಲುವಿಗೆ CSK ಫ್ಯಾನ್ಸ್‌ ಪ್ರಾರ್ಥನೆ.. ಯಾಕೆ..?

Publicspot