ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳ ಜಾರಿಗೆ ಪ್ರಯತ್ನ
ಪ್ರಣಾಳಿಕೆಯ 165ರ ಪೈಕಿ 158 ಅಂಶಗಳನ್ನು ಜಾರಿ ಮಾಡಿದ್ದೇವೆ
2013ರಲ್ಲಿ ನೀಡಿದ್ದ 550ರ ಪೈಕಿ 300 ಭರವಸೆ ಈಡೇರಿಸಿದ್ದೇವೆ
5 ಗ್ಯಾರಂಟಿ ಘೋಷಿಸಿದ್ವಿ, ಎಲ್ಲವನ್ನೂ ಜಾರಿ ಮಾಡಿದ್ದೇ
ಮಾತು ತಪ್ಪಿಸಿಕೊಳ್ಳುವ ಕೆಲಸ ಮಾಡಿಲ್ಲ ಎಂದ ಸಿದ್ದರಾಮಯ್ಯ.

ಇದು ನನಗೆ, ಪಕ್ಷಕ್ಕೆ ಸಂತೃಪ್ತಿ ತರುವ ವಿಚಾರ –
ಗ್ಯಾರಂಟಿ ಯೋಜನೆ ಬಗ್ಗೆ ವಿಪಕ್ಷದವ್ರು ಅಪಪ್ರಚಾರ ಮಾಡಿದ್ರು
ಪ್ರಧಾನಿ ಕೂಡಾ ನಮ್ಮ ಮೇಲೆ ಅಪಪ್ರಚಾರ ಮಾಡಿದ್ರು
ಗ್ಯಾರಂಟಿ ಜಾರಿಯಾಗಲ್ಲ ಎಂದು ಅಪಪ್ರಚಾರ ಮಾಡಿದ್ರು
ನಮ್ಮ ಗ್ಯಾರಂಟಿ ಯೋಜನೆಗಳು ಇಂದು ಮಾದರಿಯಾಗಿವೆ
ಗ್ಯಾರಂಟಿ ಜಾರಿ ಬಳಿಕ ತಲಾದಾಯದಲ್ಲಿ ದೇಶಕ್ಕೆ ನಂ.1 ಇದ್ದೇವೆ
ಜಿಎಸ್ಟಿ ಕಲೆಕ್ಷನ್ನಲ್ಲಿ ಕರ್ನಾಟಕ ನಂಬರ್ 2 ಇದೆ
ವಿಪಕ್ಷಗಳ ವಿರುದ್ಧ ಸಿಎಂ ಸಿದ್ದರಾಮಯ್ಯ ಕಿಡಿ

2026-27ನೇ ಸಾಲಿನಲ್ಲಿ ದೇಶದ GSDP ಶೇ.7.4 ಇದೆ
ಈ ಬಾರಿ ಕರ್ನಾಕಟದ GSDP ಶೇ 8.1 ರಷ್ಟಿದೆ
ರಾಜ್ಯ ಸರ್ಕಾರ ಸಾಲ ಮಾಡಿದೆ ಅನ್ನೋದು ಸುಳ್ಳು
ಕರ್ನಾಟಕದ ಅರ್ಥಿಕತೆ ಸಾಕಷ್ಟು ಸದೃಢವಾಗಿದೆ
ಸುದ್ದಿಗೋಷ್ಠಿಯಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ
ಸಾಲ ಶೇ 24.94 GSDP ಇದೆ
ಜಿಎಸ್ಟಿ ಜಾರಿಯ ಬಳಿಕ ಪರಿಹಾರ ಕೊಡುತ್ತಿಲ್ಲ
ಬಜೆಟ್ನಲ್ಲಿ 19 ಸಾವಿರ ಕೋಟಿ ವಿತ್ತೀಯ ಕೊರತೆ ಆಯ್ತು
15ನೇ ಹಣಕಾಸು ಆಯೋಗದ ಹಣ ಬಂದಿಲ್ಲ
₹5495 ಕೋಟಿ ವಿಶೇಷ ಅನುದಾನ ಕೊಡಲಿಲ್ಲ
ಕೇಂದ್ರದ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ

ಬೆಂಗಳೂರು ಕೆರೆ ಅಭಿವೃದ್ಧಿಗೆ ₹3,000 ಕೋಟಿ ಕೊಡಲಿಲ್ಲ
ಪೆರಿಫೆರಲ್ ರಿಂಗ್ ರಸ್ತೆಗೆ ₹3,000 ಕೊಡಲಿಲ್ಲ
₹11,495 ಕೋಟಿ ಕೇಂದ್ರ ಸರ್ಕಾರ ಕೊಡಲೇ ಇಲ್ಲ
ಭದ್ರಾ ಮೇಲ್ದಂಡೆ ಯೋಜನೆಗೆ ₹5,300 ಕೋಟಿ ಕೊಡಲಿಲ್ಲ
ಜೆಜೆಎಂ ಯೋಜನೆಯ ₹17,000 ಕೋಟಿ ಹಣ ಬಂದಿಲ್ಲ


