The Public Spot
ಅಪರಾಧ

PG, Sexual Assult: ಮಹಿಳಾ ಪಿಜಿಗೆ ಕಳ್ಳತನಕ್ಕೆ ಬಂದವನಿಂದ ಲೈಂಗಿಕ ದೌರ್ಜನ್ಯ..

ಬೆಂಗಳೂರಿನಲ್ಲಿ ಪಿಜಿಯಲ್ಲಿ ಮಹಿಳೆ ಮೇಲೆ ಲೈಂಗಿಕ ಕಿರುಕುಳ ಕೊಟ್ಟ ಆರೋಪ ಕೇಳಿ ಬಂದಿದೆ. ಬೆಸ್ಕಾಂನಲ್ಲಿ ಅಸಿಸ್ಟೆಂಟ್ ಎಂಜಿನಿಯರ್ ಆಗಿರೋ 30 ವರ್ಷದ ಮಹಿಳೆ ಯಲಹಂಕ ಬಳಿಯ ಪಿಜಿಯ ರೂಮ್​ನಲ್ಲಿ ವಾಸವಾಗಿದ್ದಾರೆ. ಈ ಮಹಿಳೆ ದಿನನಿತ್ಯ ಮಧ್ಯಾಹ್ನದ ಊಟಕ್ಕೂ ಪಿಜಿಗೆ ಬಂದು ವಾಪಸ್​ ಕೆಲಸಕ್ಕೆ ಹೋಗುತ್ತಾರೆ. ಆದರೆ ಆಗಸ್ಟ್​ 11ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಪಿಜಿಗೆ ಬಂದಿದ್ದ ಆಗಂತುಕನೊಬ್ಬ, ಮಹಿಳೆ ಬಳಿ ಇದ್ದ ಮೊಬೈಲ್ ಫೋನ್​​ಗಳು, ಚಿನ್ನದ ಬಳೆ ಸೇರಿದಂತೆ ಸಾಕಷ್ಟು ವಸ್ತುಗಳನ್ನ ಕದ್ದೊಯ್ದಿದ್ದಾನೆ.

ಕಳ್ಳತನ ಮಾಡಲು ಮಧ್ಯಾಹ್ನದ ಸಮಯದಲ್ಲಿ PGಗೆ ಎಂಟ್ರಿ ಕೊಟ್ಟಿದ್ದ ಖದೀಮ, ಚಾಕು ತೋರಿಸಿ ಬೆದರಿಸಿ, ಲೈಂಗಿಕ ಕಿರುಕುಳ ಕೊಟ್ಟು ಆ ನಂತರ ವಸ್ತುಗಳನ್ನು ದೋಚಿ ಎಸ್ಕೇಪ್ ಆಗಿದ್ದಾನೆ ಎಂದು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ. ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯ ಜುಡಿಷಿಯಲ್ ಲೇಔಟ್​ನಲ್ಲಿ ಘಟನೆ ನಡೆದಿದೆ. ಆಗಸ್ಟ್​ 11ನರ ಮಧ್ಯಾಹ್ನ 3ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಶಿವಾಸ್ ಲೇಡಿಸ್ ಪಿಜಿಯಲ್ಲಿ ಖದೀಮ ಈ ಕೃತ್ಯ ಎಸಗಿದ್ದಾನೆ.

ಕಳೆದ ಹದಿನೈದು ದಿನಗಳ ಹಿಂದಷ್ಟೇ ಪಿಜಿಗೆ ಸೇರಿದ್ದ ಮಹಿಳೆ ಆಗಸ್ಟ್​ 11 ರ ಮಧ್ಯಾಹ್ನ ಊಟಕ್ಕೆ ಅಂತಾ ರೂಮಿಗೆ ಬಂದಿದ್ದ ವೇಳೆ ಪಿಜಿಯ ಮೂರನೇ ಮಹಡಿಯಲ್ಲಿರೋ ತನ್ನ ರೂಮಿಗೆ ಬಂದಿದ್ದರು. ಈ ವೇಳೆ ಚಾಕು ಸಮೇತ ಏಕಾಏಕಿ ಮೂರನೇ ಮಹಡಿಗೆ ಬಂದಿದ್ದ ಖದೀಮ, ಮಹಿಳೆಯ ರೂಮಿನ ಡೋರ್ ಬಡಿದು ಕರೆದಿದ್ದಾನೆ. ಯಾರೋ ಪಿಜಿಯವರು ಇರಬಹುದು ಅಂತಾ ಡೋರ್ ಓಪನ್ ಮಾಡಿದ್ದಾರೆ ದೂರುದಾರ ಮಹಿಳೆ. ಕೂಡಲೇ ಮಹಿಳೆಯ ಕುತ್ತಿಗೆಗೆ ಚಾಕು ಇಟ್ಟು ಬೆದರಿಸಿರುವ ಆರೋಪಿ, ಆಕೆಯ ಅಂಗಾಂಗಗಳನ್ನು ಮುಟ್ಟಿ, ಆಕೆ ಮೈಮೇಲಿದ್ದ ಚಿನ್ನಾಭರಣಗಳನ್ನ ಬಿಚ್ಚಿಸಿಕೊಂಡು ಪರಾರಿ ಆಗಿದ್ದಾನೆ.

ಆಕೆ ಕಚೇರಿಯಿಂದ ಬಂದು ಬೆಡ್ ಮೇಲಿದ್ದ ಇಟ್ಟಿದ್ದ ಎರಡು ಮೊಬೈಲ್​ಗಳು ತೆಗೆದುಕೊಂಡು ಎಸ್ಕೇಪ್ ಆಗಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಿಜಿಗೆ ನುಗ್ಗಿ ಕಳ್ಳತನ ಮಾಡಿದ್ದು ಮಾತ್ರವಲ್ಲದೆ ಲೈಂಗಿಕ ಕಿರುಕುಳ ನೀಡಿರುವ ಆರೋಪಿ ಪತ್ತೆಗೆ ಪೊಲೀಸ್ರು ಮುಂದಾಗಿದ್ದಾರೆ. ಇತ್ತೀಚಿಗೆ ಪಿಜಿಗಳು ಕಳ್ಳರ ಹಾಟ್​ ಸ್ಪಾಟ್​ ಎನ್ನುವಂತಾಗಿದೆ. ಜೊತೆಗೆ ಲೈಂಗಿಕ ಕಿರುಕುಳ ಘಟನೆಗಳೂ ಪದೆ ಪದೇ ವರದಿ ಆಗುತ್ತಿರುವುದು ಪಿಜಿಗಳಲ್ಲಿ ವಾಸ ಮಾಡುವ ( Single women’s ) ಒಂಟಿ ಮಹಿಳೆಯರ ಆತಂಕ ಹೆಚ್ಚಾಗುವಂತೆ ಮಾಡಿದೆ.

Related posts

Mandya Murder: ಮಗಳನ್ನು ಪ್ರೀತಿಸಿದ್ದಕ್ಕೆ ಕೊಂದೇ ಬಿಟ್ರಾ..?

Publicspot

DARSHAN JAIL SHIFT: ದರ್ಶನ್‌ ಇವತ್ತು ಬಳ್ಳಾರಿ ಜೈಲಿಗೆ ಶಿಫ್ಟ್‌ ಆಗೋದು ಪಕ್ಕಾನಾ..?

Publicspot

Dharmasthala Twist; ಬುರುಡೆ ಹಿಂದೆ ಹೊರಟ SIT ಗೆ ಟ್ವಿಸ್ಟ್​ ಮೇಲೆ ಟ್ವಿಸ್ಟ್​..

Publicspot

ಜೈಲಲ್ಲಿ ಪವಿತ್ರಾಗೌಡಗೆ ಮನೆಯೂಟ ಸಿಗುತ್ತಾ..? ಇಲ್ವಾ..? ಹೈಕೋರ್ಟ್‌ ಹೇಳಿದ್ದೇನು..?

Publicspot

ಅಮಾವಾಸ್ಯೆ ದಿನ 9 ಬಲಿ ಪಡೆದ ಜವರಾಯ.. 24 ಗಂಟೆಯಲ್ಲಿ 17 ಜನರ ದುರ್ಮರಣ..

Publicspot

Darshan Court; ಇವತ್ತು ದರ್ಶನ್‌ಗೆ ಸಿಗುತ್ತಾ ಜೈಲು ರಿಲೀಫ್‌.. ಪತ್ನಿ ವಿಜಯಲಕ್ಷ್ಮೀ ಸೈಲೆಂಟ್‌ ಆಗಿದ್ಯಾಕೆ..?

Publicspot