ಭಾರತದ ಕಾನೂನು ವಿಶಾಲ ಹೃದಯದಿಂದ ನೋಡುತ್ತದೆ. ಅದೇ ಕಾರಣಕ್ಕೆ ಸಲಿಂಗ ಕಾಮ ಹಾಗೂ ಅಕ್ರಮ ಸಂಬಂಧ ಕಾನೂನು ಪ್ರಕಾರ ತಪ್ಪಲ್ಲ ಅನ್ನೋದನ್ನು ಸರ್ವರೂ ಒಪ್ಪಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಅಕ್ರಮ ಸಂಬಂಧ ಎಲ್ಲರಿಗೂ ಗೊತ್ತಿರುವ ಸಂಗತಿ. ಮದುವೆಯಾದ ಒಂದು ಹೆಣ್ಣು ಅಥವಾ ಗಂಡು, ಮತ್ತೋಬ್ಬರ ಜೊತೆಗೆ ಕದ್ದು ಮುಚ್ಚಿ ನಡೆಸುವ ಕಾಮಕೇಳಿಗೆ ಅಕ್ರಮ ಸಂಬಂಧ ಎನ್ನುವುದು. ಇನ್ನು ಸಲಿಂಗ ಕಾಮ ಎಂದರೆ ಪುರುಷ ಪುರುಷನನ್ನೇ ಕಾಮಿಸುವುದು. ಹೆಣ್ಣು ಮತ್ತೊಂದು ಹೆಣ್ಣನ್ನೇ ಕಾಮಿಸುವುದು ಎಂದರ್ಥ.

ಪುರುಷ ಪುರುಷರ ನಡುವಿನ ಕಾಮವನ್ನು ಗೇ ಎಂತಲು, ಹೆಣ್ಣು – ಹೆಣ್ಣಿನ ನಡುವಿನ ಕಾಮವನ್ನು ಲೆಸ್ಬಿನ್ ಎಂತಲೂ ಇಂಗ್ಲಿಷ್ನಲ್ಲಿ ಕರೆಯುತ್ತಾರೆ. ಅಂತಿಮವಾಗಿ ಸಲಿಂಗಕಾಮ ಎನ್ನುವುದು ಸೂಕ್ತ. ಇದೇ ರೀತಿಯ ಸಲಿಂಗ ಕಾಮಕ್ಕೆ ಪುಟ್ಟ ಮಗುವೊಂದು ಪ್ರಾಣ ಕಳೆದುಕೊಂಡಿರುವ ಘಟನೆ ಬೆಂಗಳೂರಿನ ಪಕ್ಕದಲ್ಲೇ ನಡೆದಿದೆ. ತಾಯಿ ಎನಿಸಿಕೊಂಡವಳು, ತನ್ನ ಸ್ನೇಹಿತೆ ಜೊತೆಗಿನ ಕಾಮ ಸುಖಕ್ಕಾಗಿ ಮಗುವನ್ನೇ ಹತ್ಯೆ ಮಾಡಿರುವ ಧಾರುಣ ಘಟನೆ ಜರುಗಿದೆ.
ಸಲಿಂಗ ಕಾಮದ ಚಟಕ್ಕೆ ಬಿದ್ದ ಮಹಿಳೆ ತನ್ನ ಕರುಳ ಕುಡಿಯನ್ನೇ ಕೊಂದು ಹಾಕಿದ್ದಾಳೆ.. ಸ್ನೇಹಿತೆ ಜೊತೆಗಿನ ಪ್ರೇಮದಾಟಕ್ಕೆ 5 ತಿಂಗಳ ಮುದ್ದಾದ ಮಗುವನ್ನೇ ಕತ್ತು ಹಿಸುಕಿ ಸಾಯಿಸಿದ್ದಾಳೆ. ಆನೇಕಲ್ ಗಡಿ ಭಾಗದ ತಮಿಳುನಾಡಿನ ಚಿನ್ನಟ್ಟಿ ಅನ್ನೋ ಗ್ರಾಮದಲ್ಲಿ ಈ ಹೃದಯವಿದ್ರಾವಕ ಘಟನೆ ನಡೆದಿದೆ. ಹೆಣ್ಣು – ಮತ್ತೊಂದು ಹೆಣ್ಣನ್ನು ಕಾಮಿಸಿ ಮಗುವನ್ನೇ ಕೊಂದಿರುವ ವಿಚಾರ, ಇಡೀ ಗ್ರಾಮಸ್ಥರನ್ನೇ ಬೆಕ್ಕಸ ಬೆರಗಾಗುವಂತೆ ಮಾಡಿದೆ. ಕಳೆದ 4 ವರ್ಷದಿಂದ ಕದ್ದು ಮುಚ್ಚಿ ಮುದ್ದಾಡ್ತಿದ್ದ ಗೆಳತಿಯರು, ತಮ್ಮ ಕಾಮದ ಚಪಲಕ್ಕಾಗಿ ಹಾಲ್ಗೆನ್ನೆಯ ಹಸುಗೂಸನ್ನೇ ಕೊಂದು ಮುಗಿಸಿದ್ದಾರೆ.

ಒಬ್ಬಳ ಹೆಸರು ಭಾರತಿ, ಮತ್ತೊಬ್ಬಳ ಹೆಸರು ಸುಮಿತ್ರಾ. 26 ವರ್ಷದ ಭಾರತಿಗೆ 22 ವರ್ಷದ ಸುಮಿತ್ರಾ ಮೇಲೆ ಮನಸ್ಸಾಗಿತ್ತು. ಆದರೆ 5 ವರ್ಷದ ಹಿಂದೆ ಸುರೇಶ್ ಎಂಬಾತನ ಜೊತೆ ಭಾರತಿಗೆ ಮದುವೆ ಆಗಿತ್ತು. ಆ ಮದುವೆಗೆ ಸಾಕ್ಷಿ ಎಂಬಂತೆ ಮೂರು ಮುದ್ದಾದ ಮಕ್ಕಳು ಇವೆ. ಈ ನಡುವೆ ನಾಲ್ಕು ವರ್ಷದ ಹಿಂದೆ ಸುಮಿತ್ರಾ ಜೊತೆಗೆ ಪಲ್ಲಂಗ ಏರಲು ಅಣಿಯಾದ ಭಾರತಿ, ಗಂಡ ಮಕ್ಕಳನ್ನ ಮರೆತು ಸಲಿಂಗ ಕಾಮದ ಸುಪ್ಪತ್ತಿಗೆಗೆ ಬಿದ್ದಿದ್ದಳು.
ಗಂಡನಲ್ಲಿ ಕಾಣದ ಸುಖವನ್ನು ಸುಮಿತ್ರಾಳಲ್ಲಿ ಪಡೆದುಕೊಳ್ಳುವ ಕೆಟ್ಟ ಗೀಳಿಗೆ ಬಿದ್ದಿದ್ದಳು. ಗಂಡ ಮನೆಯಿಂದ ಹೊರ ಹೋಗ್ತಿದ್ದಂತೆ ಇವ್ರಿಬ್ಬರ ಸರಸ, ಸಲ್ಲಾಪ ಶುರುವಾಗ್ತಿತ್ತು.. ಸ್ನೇಹದ ಹೆಸರಲ್ಲಿ ಸುಮಿತ್ರಾಳನ್ನ ಮನೆಗೆ ಕರೆಸಿಕೊಳ್ತಿದ್ದ ಭಾರತಿ, ಮಕ್ಕಳನ್ನೆಲ್ಲಾ ಹೊರಗೆ ಕಳಿಸಿ ಕಾಮದ ಜೋಕಾಲಿ ಆಡುತ್ತಿದ್ದಳು. ಇಬ್ಬರೂ ಹೆಂಗಸರೇ ಆಗಿದ್ದರಿಂದ ಯಾರೂ ಪ್ರಶ್ನೆ ಮಾಡಿರ್ಲಿಲ್ಲ. ಯಾರಿಗೂ ಅನುಮಾನವೂ ಬಂದಿರಲಿಲ್ಲ. ಇದನ್ನೇ ಅಸ್ತ್ರ ಮಾಡ್ಕೊಂಡ ಸಲಿಂಗಿಗಳು ತಮ್ಮ ಕಾಮಕೇಳಿಯಲ್ಲಿ ಮುಳುಗಿ ಹೋಗಿದ್ರು.

ಭಾರತಿಗೆ ಮೊದಲೆರೆಡು ಹೆಣ್ಮಕ್ಕಳು ಹುಟ್ಟಿದ್ದವು.. ಮೂರನೆಯದು ಗಂಡು ಮಗು ಆಗಿತ್ತು. ಹೀಗಾಗಿ ಇಡೀ ಮನೆಯವ್ರು ತುಂಬಾನೇ ಖುಷಿಯಾಗಿದ್ರು. ಮಗನ ಲಾಲನೆ ಪಾಲನೆಯಲ್ಲೇ ಭಾರತಿ ಹೆಚ್ಚಿನ ಸಮಯ ಕಳೆಯೋದಕ್ಕೆ ಶುರು ಮಾಡಿದ್ದಳು. ಇದು ಸುಮಿತ್ರಾಳ ಹೊಟ್ಟೆಗೆ ಕಿಚ್ಚು ಹಚ್ಚಿತ್ತು. ನಿನಗೆ ಮಗು ಆದ್ಮೇಲೆ ನನ್ನನ್ನೇ ದೂರ ಮಾಡ್ತಿದ್ದೀಯ. ಐದು ತಿಂಗಳಿಂದ ನನ್ನನ್ನ ಅವೈಡ್ ಮಾಡ್ತಿದ್ದೀಯ ಅಂತಾ ಪದೇ ಪದೇ ಗಲಾಟೆ ಮಾಡೋದಕ್ಕೆ ಶುರು ಮಾಡಿದ್ದಳು. ನಿನ್ನ ಮಗುವಿಗಾಗಿ ನನ್ನನ್ನೇ ದೂರ ಮಾಡ್ತಿದ್ದೀಯ. ನನಗಿಂತ ಮಗುವೇ ಹೆಚ್ಚಾಯ್ತಾ..? ಎಂದವಳು, ನಾವಿಬ್ಬರೂ ಖುಷಿಯಾಗಿ ಇರಬೇಕು ಅಂದ್ರೆ ಈ ಮಗು ಇರಬಾರದು ಅನ್ನೋ ಮನೆಹಾಳ್ ಐಡಿಯಾ ಕೊಟ್ಟಿದ್ದಳು.
ಕಾಮದ ಕ್ಷಣಕ್ಕಾಗಿ ಹಾತೊರೆದ ಹೆಣ್ಣು ಮಗುವನ್ನು ಕತ್ತು ಹಿಸುಕಿ ಕೊಲೆ ಮಾಡಿದ ಬಳಿಕ ಹಾಲು ಕುಡಿಯುವಾಗ ನೆತ್ತಿಗೇರಿ ಮಗು ಸತ್ತು ಹೋಯ್ತು ಎಂದು ಎಲ್ಲರನ್ನೂ ನಂಬಿಸಿದ್ದಳು. ಭಾರತಿಯ ಮಾತು ಕೇಳಿದ ಕುಟುಂಬಸ್ಥರು, ಅದೇ ಸತ್ಯ ಅಂದ್ಕೊಂಡು ಅಂತ್ಯ ಸಂಸ್ಕಾರವನ್ನೂ ಮಾಡಿ ಮುಗಿಸಿದ್ರು. ಗಂಡು ಮಗುವನ್ನ ಕೊಟ್ಟಿದ್ದ ಭಗವಂತ ಇಷ್ಟು ಬೇಗ ಕಿತ್ಕೊಂಡ ಅಂತಾ ದೇವರಿಗೆ ಹಿಡಿ ಶಾಪವನ್ನೂ ಹಾಕಿದ್ರು. ಆದರೆ ಯಾವಾಗ ಮೊಬೈಲ್ನಲ್ಲಿ ಸಲಿಂಗ ಸರಸ ಪತ್ತೆಯಾಯ್ತೋ ಆಗ ಅಸಲಿ ವಿಚಾರ ಬಯಲಾಗಿದೆ.
ಭಾರತಿ ಹಾಗೂ ಸುಮಿತ್ರಾ ಒಂದೊಂದು ಕಳ್ಳ ಮೊಬೈಲ್ ಇಟ್ಕೊಂಡಿದ್ರು. ಮನೆಯಲ್ಲಿ ಯಾರೂ ಇಲ್ಲದಿದ್ದಾಗ ವಿಡಿಯೋ ಕಾಲ್ ಮಾಡ್ಕೊಂಡು ಕಾಮದ ಹೊಳೆಯಲ್ಲಿ ತೇಲಾಡ್ತಿದ್ರು. ಅಷ್ಟೇ ಅಲ್ಲದೆ ಬೆತ್ತಲೆ ಫೋಟೋಗಳನ್ನ ಕಳಿಸಿಕೊಂಡು ವಿಕೃತ ಆನಂದಪಡ್ತಿದ್ರು. ಮಗು ಸತ್ತ ಕೆಲವೇ ದಿನಗಳಲ್ಲಿ ಭಾರತಿ ಗಂಡನಿಗೆ ತನ್ನ ಪತ್ನಿಯ ಕಳ್ಳ ಮೊಬೈಲ್ ಸಿಕ್ಕಿಬಿದ್ದಿತ್ತು. ಅದನ್ನ ನೋಡ್ತಿದ್ದಂತೆ ಗಂಡನೇ ಶಾಕ್ ಆಗಿ ಹೋಗಿದ್ದ. ಯಾಕಂದ್ರೆ, ಪತ್ನಿಯ ಕಾಮಕೇಳಿ ಜೊತೆಗೆ ಮಗುವನ್ನ ಕೊಂದಿದ್ದ ರಹಸ್ಯ ಕೂಡಾ ಅದೇ ಮೊಬೈಲ್ನಲ್ಲಿ ಅಡಗಿತ್ತು. ಯಾವಾಗ ಗಂಡನಿಗೆ ಸತ್ಯ ಗೊತ್ತಾಯ್ತೋ ಸೀದಾ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದ. ಇದಿಗ ಸಲಿಂಗ ಜೋಡಿಯನ್ನ ಬಂಧಿಸಿ ಜೈಲಿಗಟ್ಟಿದ್ದಾರೆ. ಆದರೆ ಸಲಿಂಗ ಕಾಮಿಗಳು ಮಗುವನ್ನು ಕೊಂದಿದ್ದು ಮಾತ್ರ ಘೋರ ಪಾಪವೇ ಸರಿ.


