The Public Spot
Uncategorized

ಕಾರ್​ ಸ್ಫೋಟ.. NIA ತನಿಖೆಗೆ ವಹಿಸಿ ಕೇಂದ್ರ ಗೃಹ ಇಲಾಖೆ ಆದೇಶ

ದೆಹಲಿಯ ಕೆಂಪು ಕೋಟೆ ಬಳಿ ಕಾರು ಸ್ಫೋಟ ಪ್ರಕರಣವನ್ನು ಅಧಿಕೃತವಾಗಿ NIA ತನಿಖೆಗೆ ಹಸ್ತಾಂತರ ಮಾಡಲಾಗಿದೆ. ಈ ಬಗ್ಗೆ ಕೇಂದ್ರ ಗೃಹ ಇಲಾಖೆ ಅಧಿಕೃತ ಆದೇಶ ಹೊರಡಿಸಿದ್ದು, ಕಾರು ಸ್ಫೋಟ ಹಾಗೂ ಸ್ಫೋಟದ ಹಿಂದಿರುವ ಸಂಚಿನ ಬಗ್ಗೆ ತನಿಖೆ ಮಾಡಲು ಆದೇಶದಲ್ಲಿ ತಿಳಿಸಲಾಗಿದೆ. ಈ ಸ್ಫೋಟದ ಹಿಂದೆ ಯಾವ ಸಂಘಟನೆಗಳ ಕೈವಾಡವಿದೆ..? ಅನ್ನೋ ಬಗ್ಗೆ ಶೀಘ್ರವೇ ತನಿಖಾ ವರದಿ ಕೊಡಲು ಸೂಚನೆ ಕೊಡಲಾಗಿದೆ. ಘಟನೆಯಲ್ಲಿ 13 ಜನರು ಸಾವನ್ನಪ್ಪಿ 30ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಈ ಘಟನೆ ಹಿಂದೆ ಯಾವ ಉಗ್ರ ಸಂಘಟನೆ ಇದೆ ಅನ್ನೋ ಬಗ್ಗೆ ತಿಳಿಯುವ ಅಗತ್ಯವಿದೆ.

ದೆಹಲಿಯ ಕೆಂಪು ಕೋಟೆ ಬಳಿ ಕಾರು ಸ್ಫೋಟದಲ್ಲಿ 13 ಜನ ಸಾವನ್ನಪ್ಪಿದ್ದು, 30 ಜನರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ನಡುವೆ ಕಾರು ಸ್ಫೋಟದಲ್ಲಿ ಸಾವನ್ನಪ್ಪಿದವರ ಕುಟುಂಬಕ್ಕೆ ದೆಹಲಿ ಸರ್ಕಾರ ಪರಿಹಾರ ಘೋಷಣೆ ಮಾಡಿದೆ. ಸಾವನ್ನಪ್ಪಿದ 13 ಮಂದಿ ಕುಟುಂಬಸ್ಥರಿಗೆ 10 ಲಕ್ಷ ರೂಪಾಯಿ, ಶಾಶ್ವತ ಅಂಗವೈಕಲ್ಯ ಆದವರಿಗೆ 5 ಲಕ್ಷ ರುಪಾಯಿ ಹಾಗೂ ಗಾಯಾಳುಗಳಿಗೆ ತಲಾ 2 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಲಾಗಿದೆ. ದೆಹಲಿ ಸಿಎಂ ರೇಖಾ ಗುಪ್ತಾ ಪರಿಹಾರ ಘೋಷಣೆ ಮಾಡಿ ಆದೇಶ ಹೊರಡಿಸಿದ್ದಾರೆ.

ದೆಹಲಿಯ ರೆಡ್‌ಪೋರ್ಟ್‌ ದುರಂತಕ್ಕೂ ಜಮ್ಮು ಕಾಶ್ಮೀರದ ಪುಲ್ವಾಮಾಕ್ಕೂ ಲಿಂಕ್​ ಸಿಕ್ಕಿದೆ. ಪುಲ್ವಾಮಾದ ಡಾ. ಉಮರ್ ಮನೆಗೂ ಲಿಂಕ್​ ಸಿಕ್ಕಿದೆ. ಈಗಾಗಲೇ ಎನ್​ಐಎ ಅಧಿಕಾರಿಗಳ ತಂಡ ಕಣಿವೆ ರಾಜ್ಯದಲ್ಲಿ ಶೋಧ ಮಾಡುತ್ತಿದ್ದು, ಡಾ ಉಮರ್​ ನಿವಾಸಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯ ಪೊಲೀಸರೊಂದಿಗೆ ಭೇಟಿ ನೀಡಿದ ಎನ್​ಐಎ ಟೀಂ, ಡಾ. ಉಮರ್ ಕುಟುಂಬದವರನ್ನ ವಿಚಾರಣೆ ನಡೆಸಿದ್ದಾರೆ. ಉಮರ್ ಸಹೋದರ ಅಜಾದ್ ಶಕೀಲ್, ಸಹೋದರಿ ಮುಜಾಮಿಲ್ ಅಖ್ತರ್​ನನ್ನು ವಿಚಾರಣೆ ನಡೆಸಿದ್ದಾರೆ. ಉಮರ್​ಗೆ ಉಗ್ರ ಸಂಘಟನೆ ಲಿಂಕ್ ಇದ್ಯಾ..? ಅನ್ನೋ ವಿಚಾರ ವಿಚಾರಗಳ ಬಗ್ಗೆ ಎನ್​ಐಎ ಟೀಂ ತನಿಖೆ ನಡೆಸ್ತಿದೆ.

ದೇಶದಲ್ಲಿ ಬರೀ ಕಾರು​​ ಸ್ಫೋಟ ಮಾತ್ರ ಉಗ್ರರ ಸ್ಕೆಚ್​ ಆಗಿರಲಿಲ್ಲ ಅನ್ನೋದು ಕೂಡ ಬಹಿರಂಗ ಆಗಿದೆ. ದೇಶದ ಪ್ರಮುಖ ದೇವಾಲಯಗಳ ಪ್ರಸಾದವನ್ನೂ ಟಾರ್ಗೆಟ್​ ಮಾಡಿದ್ದರು ಅನ್ನೋದು ಬಯಲಾಗಿದೆ. ಭಕ್ತರಿಗೆ ನೀಡುವ ಪ್ರಸಾದದಲ್ಲೂ ವಿಷ ಬೆರೆಸಲು ಉಗ್ರರು ಸ್ಕೆಚ್​ ಹಾಕಿದ್ರು ಎನ್ನಲಾಗಿದೆ. ಸೈನೆಡ್​ಗಿಂತಲೂ ಮಾರಕವಾದ ರಿಸಿನ್​​ ವಿಷವನ್ನು ಉಗ್ರರು ಸಂಗ್ರಹಿಸಿದ್ದರು. ಈ ವಿಚಾರವನ್ನು ಬಂಧಿತ ಡಾ. ಮೊಯುದ್ದೀನ್​​ ಸಯ್ಯದ್​ ಬಾಯ್ಬಿಟ್ಟಿದ್ದಾನೆ. ಒಂದು ಚಿಟಿಕೆ ರಿಸಿನ್​ ವಿಷ ಹಾಕಿದ್ರೆ ಸಾಕು ಹತ್ತಾರು ಜನ ಸಾಯುವ ಸಂಭವ ಇತ್ತು. ಅಂತಹ 300 ಕೆಜಿ ಕಾರ್ಕೋಟಕ ರಿಸಿನ್​ ಕೆಮಿಕಲ್​ ಸಂಗ್ರಹಿಸಿದ್ದರು. 300 ಕೆಜಿ ರಿಸಿನ್​ ವಿಷ 70 ರಿಂದ 80 ಲಕ್ಷ ಜನರನ್ನ ಬಲಿ ಪಡೆಯುವ ಸಾಧ್ಯತೆಯಿತ್ತು. ಪ್ರಮುಖ ದೇಗುಲಗಳ ಪ್ರಸಾದದಲ್ಲಿ ಮಿಕ್ಸ್​ ಮಾಡಲು ಉಗ್ರರು ಸಂಚು ರೂಪಿಸಿದ್ದರು ಎನ್ನಲಾಗಿದೆ.

Related posts

Nepal New Leader emerged: ನೇಪಾಳಕ್ಕೆ ನೂತನ ನಾಯಕರು ಯಾರು..? ಏನು ವಿಶೇಷ..?

Publicspot

Duniya Vijay Slams SIMA; ದುಬೈನಲ್ಲಿ ಕನ್ನಡಿಗರಿಗೆ ಅವಮಾನ.. ಯಾಕೆ ಬೇಕು ಆ ಪ್ರಶಸ್ತಿ..?

Publicspot

ಏನಿದು ತಮಿಳುನಾಡು ಕಾರ್ತಿಕ ದೀಪೋತ್ಸವ.. ನ್ಯಾಯಾಧೀಶರಿಗೇ ವಾಗ್ದಂಡನೆ ಪ್ರಕ್ರಿಯೆ..?

Publicspot

Supreme Court; ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಮೂರ್ತಿ ಮೇಲೆ ಶೂ ಎಸೆತ.. ಕಾರಣ ಏನು..?

Publicspot

ಟಾಕ್ಸಿಕ್​ ಟೀಸರ್​ ಬಗ್ಗೆ ಕೇಂದ್ರ ಸೆನ್ಸಾರ್​ ಮಂಡಳಿಗೆ ದೂರು..! ಬೀಳುತ್ತಾ ಕತ್ತರಿ..?

Publicspot

Bihara Laddus; ಗೆದ್ದೇ ಗೆಲ್ಲುವ ವಿಶ್ವಾಸ.. ಸಮೀಕ್ಷೆಗಳೇ ಉಲ್ಟಾ ಆಗುತ್ತಾ..?

Publicspot