The Public Spot
Uncategorizedರಾಜ್ಯ

ಬೆಂಗಳೂರಲ್ಲಿ ಮಳೆಯ ರೌದ್ರನರ್ತನ..!

ನಿನ್ನೆ ರಾತ್ರಿ ಬೆಂಗಳೂರಿನಲ್ಲಿ ಜೋರು ಮಳೆ ಆಗಿದೆ.. ಆರ್.ಟಿ ನಗರ, ಮೆಜೆಸ್ಟಿಕ್, ಕಾರ್ಪೋರೇಷನ್, ಜಯನಗರ, ಪ್ಯಾಲೇಸ್ ಗುಟ್ಟಹಳ್ಳಿ, ಜೆ.ಪಿ ನಗರ, ಮಲ್ಲೇಶ್ವರಂ, ರಾಜಾಜಿನಗರ, ಯಶವಂತಪುರ, ವಿಜಯನಗರ, ಕೆ.ಆರ್ ಸರ್ಕಲ್ ಸೇರಿದಂತೆ ನಗರದಾದ್ಯಂತ ಭಾರೀ ಗಾಳಿ ಸಮೇತ ಧಾರಾಕಾರವಾಗಿ ಮಳೆ ಸುರಿದಿದೆ.. ಕೆ.ಆರ್ ಪುರಂ, ವೈಟ್ಫಿಲ್ಡ್ ಭಾಗದಲ್ಲಿ ಆಲಿಕಲ್ಲು ಮಳೆ ಆಗಿದೆ.. ಅರಮನೆ ರಸ್ತೆಯಲ್ಲಿ ಹೊಳೆಯಂತೆ ನೀರು ಹರಿದಿದೆ.. ಇನ್ನು, ತಗ್ಗುಪ್ರದೇಶಗಳಿಗೆ ಮಳೆ ನೀರು ನುಗ್ಗಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ. ಮಳೆಯ ನಡುವೆ ಟ್ರಾಫಿಕ್ನಲ್ಲಿ ಸಿಲುಕಿ ವಾಹನ ಸವಾರರು ಪರದಾಡಿದ್ರು.

ಇನ್ನು ಭಾರೀ ಮಳೆಯಿಂದ ಮಾಗಡಿ ರೋಡ್ ಮೆಟ್ರೋ ಸ್ಟೇಷನ್ ಒಳಗೆಡೆ ಮಳೆ ನೀರು ನುಗ್ಗಿತ್ತು.. ಬಿರುಗಾಳಿಗೆ ಬ್ಯಾರಿಕೇಡ್ಗಳು ಕೆಳಗಿಬಿದ್ದಿದ್ವು.. ಮಳೆಯಿಂದ ಮೆಟ್ರೋ ಪ್ರಯಾಣಿಕರು ಪರದಾಡಿದ್ದಾರೆ..ಇನ್ನು, ಮೇಕ್ರಿ ಸರ್ಕಲ್ ರಸ್ತೆ ಅಂತೂ ಸಂಪೂರ್ಣ ಜಲಾವೃತ ಆಗಿತ್ತು.. ಬಿಡಿಎ ಬಿಡ್ಜ್ ಬಳಿ 4 ಕಡೆಯೂ ರಸ್ತೆಗಳಲ್ಲಿ ಮೊಣಕಾಲುದ್ದ ನೀರು ಹರಿದು, ವಾಹನಗಳು ನೀರಲ್ಲಿ ಸಿಲುಕಿದ್ವು.. ದ್ವಿಚಕ್ರ ಸವಾರನೊಬ್ಬ ನೀರಲ್ಲಿ ಆಯಾತಪ್ಪಿ ಕೆಳಗೆ ಬಿದ್ದಿದ್ದ.. ಈ ವೇಳೆ ನ್ಯೂಸ್18 ಸಿಬ್ಬಂದಿ ಆತನನ್ನ ರಕ್ಷಣೆ ಮಾಡಿದ್ರು..

ಸಿಕ್ಕಾಪಟ್ಟೆ ಮಳೆಯಿಂದ ಬೆಂಗಳೂರಲ್ಲಿ ರಸ್ತೆಗಳು ಕೆರೆಯಂತಾಗಿವೆ.. ಶೇಷಾದ್ರಿಪುರಂ ಮುಖ್ಯ ರಸ್ತೆ ಜಲಾವೃತ ಆಗಿದೆ.. ರಸ್ತೆ ತುಂಬಾ ಹರಿಯುತ್ತಿದ್ದು, ನೀರಲ್ಲಿ ಹೋಗಲಾಗದೇ ವಾಹನ ಸವಾರರು ಒದ್ದಾಡ್ತಿದ್ದಾರೆ..ಇನ್ನು, ಜಯನಗರದ 4ನೇ ಬ್ಲಾಕ್‌ನಲ್ಲಿ ಮರ ಧರೆಗೆ ಉರುಳಿದೆ.. ಬಿರುಗಾಳಿಗೆ ಮರ ಬಿದ್ದಿದ್ದಕ್ಕೆ ರಸ್ತೆ ಕಂಪ್ಲೀಟ್ ಬ್ಲಾಕ್ ಆಗಿತ್ತು.. ಬಿದ್ದ ಮರದ ಕೆಳಗಡೆಯೇ ಸ್ಥಳೀಯರು ಓಡಾಡಿದ್ದಾರೆ.. ಘಟನೆ ಸ್ಥಳಕ್ಕೆ ಬಾರದ ಜಿಬಿಎ ಸಿಬ್ಬಂದಿ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ರು..

ಇನ್ನು ಮಳೆಯಲ್ಲಿ ಟ್ರಾಫಿಕ್ ಪೊಲೀಸರೊಬ್ಬರು ಮಾನವೀಯತೆ ಮರೆದ ದೃಶ್ಯ ಕಂಡುಬಂತು.. ಮೈಸೂರು ರಸ್ತೆಯ ಕೆಎಸ್ಆರ್ಟಿಸಿ ಬಸ್ ಸ್ಟಾಂಡ್ ಬಳಿ ಈ ಘಟನೆ ನಡೆದಿದೆ.. ಮಳೆ ನೀರಲ್ಲಿ ರಸ್ತೆ ದಾಟಲು ಒದ್ದಾಡುತ್ತಿದ್ದ ವಿಶೇಷ ಚೇತನ ವ್ಯಕ್ತಿಯನ್ನ ಭುಜದ ಮೇಲೆ ಟ್ರಾಫಿಕ್ ಪೊಲೀಸ್ ಹೊತ್ತಿಕೊಂಡು ಹೋಗಿ ರಸ್ತೆ ದಾಟಿಸಿದ್ದಾರೆ.. ಬ್ಯಾಟರಾಯನಪುರ ಸಂಚಾರಿ ಠಾಣೆಯ ಕಾನ್ಸ್ ಟೇಬಲ್ ಅನಿಲ್ ಮಾನವೀಯತೆ‌‌ ಮರೆದಿದ್ದು, ಸಾರ್ವಜನಿಕರು ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ..

Related posts

ರಾಜ್ಯಮಟ್ಟದ ಸ್ವಾತಂತ್ರ‍್ಯ ದಿನಾಚರಣೆಗೆ ಎಲ್ಲಾ ರೀತಿಯ ಸಿದ್ದತೆ ಮಾಡಿಕೊಳ್ಳಿ: ಮಹೇಶ್ವರ್ ರಾವ್.

admin

ಹಿರಿಯ ಕಾರ್ಮಿಕ ಹೋರಾಟಗಾರ ಅನಂತ್‌ ಸುಬ್ಬರಾವ್‌ ಇನ್ನಿಲ್ಲ.. ದೇಹವೂ ದಾನ..

Publicspot

Ration Card Cancel; ನಿಮ್ಮ ರೇಷನ್ ಕಾರ್ಡ್ ರದ್ದು ಆಗಬಹುದು.. ರಾಜ್ಯ ಸರ್ಕಾರ ಪ್ಲ್ಯಾನಿಂಗ್..

Publicspot

Banu Selection Reaction: ಬಾನು ಆಯ್ಕೆ ಬಗ್ಗೆ ಯಾರು ಏನಂದ್ರು..?

Publicspot

Bollywood; ಗೆಳೆಯನ ಮರಣದ ದಿನವೇ ಉಸಿರು ನಿಲ್ಲಿಸಿದ ಬಾಲಿವುಡ್‌ ನಟ ಧರ್ಮೇಂದ್ರ!!

Publicspot

RSS ವಿರುದ್ಧ ಸರ್ಕಾರ ಕ್ರಮ ತೆಗೆದುಕೊಳ್ಳುತ್ತಾ..? ಬಿಜೆಪಿ ಕೆಂಡಾಮಂಡಲ ಆಗ್ತಿರೋದ್ಯಾಕೆ..?

Publicspot