The Public Spot
ಅಪರಾಧ

Online Game Murder; ಜೂಜಿನ ಚಟಕ್ಕೆ ಬಿದ್ದವನು ಕೊಲೆಗಾರನಾಗ ಕಥೆ.. ಬಾಡಿಗೆ ಮನೆ ದುರಂತ..

ಆನ್​ಲೈನ್ ಜೂಜಿನ ಚಟಕ್ಕೆ ಬಿದ್ದು ಕೈ ತುಂಬಾ ಸಾಲ ಮಾಡ್ಕೊಂಡಿದ್ದ ವ್ಯಕ್ತಿ ವೃದ್ಧೆಯ ಮೈಮೇಲಿನ ಬಂಗಾರಕ್ಕೆ ಆಸೆ ಪಟ್ಟು ಜೀವ ತೆಗೆದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕೊಲೆ ಮಾಡಿದ ನಂತರ ಮದ್ಯ ಸೇವಿಸಿ ಪಾರ್ಟಿ ಮಾಡಿದ್ದಾರೆ. ಉತ್ತರಹಳ್ಳಿಯಲ್ಲಿ ಬಾಡಿಗೆಗೆ ಮನೆ ಪಡೆದು ಜೀವನ ಮಾಡ್ತಿದ್ದ ವ್ಯಕ್ತಿ ಅದೇ ಮನೆ ಮಾಲೀಕರ ಕುತ್ತಿಗೆಯಲ್ಲಿದ್ದ ಚಿನ್ನಕ್ಕೆ ಆಸೆಪಟ್ಟು ಕೊಲೆ ಮಾಡುವ ಸಂಚು ರೂಪಿಸಿ ಯಶಸ್ವಿಯಾಗಿದ್ದಾನೆ. ಸುಬ್ರಹ್ಮಣ್ಯಪುರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ವೃದ್ಧೆ ಶ್ರೀಲಕ್ಷ್ಮಿ ಹತ್ಯೆ ಪ್ರಕರಣವನ್ನು ಬೇಧಿಸಿರುವ ಪೊಲೀಸರು, ಮನೆಯಲ್ಲಿ ಬಾಡಿಗೆಗಿದ್ದ ದಂಪತಿಯನ್ನು ಅರೆಸ್ಟ್​​ ಮಾಡಿದ್ದಾರೆ.

2025ರ ಫೆಬ್ರವರಿ 4ರಂದು ಪತಿ ಕೆಲಸಕ್ಕೆ ಹೋಗಿದ್ದರಿಂದ ವೃದ್ಧೆ ಶ್ರೀಲಕ್ಷ್ಮಿ ಮನೆಯಲ್ಲಿ ಒಬ್ಬರೇ ಇದ್ದರು. ಮಧ್ಯಾಹ್ನದ ವೇಳೆ ಕುಟುಂಬಸ್ಥರು ಅಜ್ಜಿಗೆ ಫೋನ್ ಮಾಡಿದರೂ ಅಜ್ಜಿ ಫೋನ್ ರಿಸಿವ್ ಮಾಡಿರಲಿಲ್ಲ. ಹೀಗಾಗಿ ಬಾಡಿಗೆದಾರರ ಮೊಬೈಲ್​ ನಂಬರ್​ಗೆ ಶ್ರೀಲಕ್ಷ್ಮಿ ಅವರ ಗಂಡ ಫೋನ್​ ಮಾಡಿದಾಗ ಕೊಲೆ ವಿಷಯ ಗೊತ್ತಾಗಿತ್ತು. ಆರೋಪಿ ಪ್ರಸಾದ್ ಹಾಗೂ ಆತನ ಹೆಂಡತಿ ಹೊಂಚು ಹಾಕಿ ವೃದ್ಧೆಯನ್ನ ಕೊಲೆ ಮಾಡಿ ಪರಾರಿಯಾಗಿದ್ದರು. ಅಷ್ಟೇ ಅಲ್ಲದೆ ಅಜ್ಜಿಯ ಕೊರಳಲ್ಲಿದ್ದ 52 ಗ್ರಾಂ ತೂಕದ ಚಿನ್ನದ ಸರ ಹಾಗೂ ಕೈನಲ್ಲಿದ್ದ ಎರಡು ಬಂಗಾರದ ಬಳೆಗಳನ್ನು ಕದ್ದೊಯ್ದಿದ್ದರು.

ಆನ್​​ಲೈನ್ ಗೇಮ್ಸ್ ಚಟಕ್ಕೆ ಬಿದ್ದು ವೃದ್ಧೆಯನ್ನು ಕೊಂದು ಚಿನ್ನವನ್ನು ಕೊಳ್ಳೆಯೊಡೆಯುವ ದುರುದ್ದೇಶದಿಂದ ಈ ಕೊಲೆ ನಡೆದಿತ್ತು. ಆದರೆ ಪೊಲೀಸರು ಮಾಂಗಲ್ಯ ಸರ, ಬಂಗಾರದ ಬಳೆ ದೋಚಿ ಪರಾರಿಯಾಗಿದ್ದ ದಂಪತಿಯನ್ನು ಬಂಧಿಸಿ ಕೈಗೆ ಕೋಳ ಹಾಕಿ ಕರೆತಂದಿದ್ದಾರೆ. ಅಜ್ಜಿಯನ್ನು ಕೊಂದ ಆರೋಪಿ ಕೊಲೆಗೆ ನಿಖರ ಕಾರಣ ಏನು ಅನ್ನೋದನ್ನು ಬಾಯ್ಬಿಟ್ಟಿದ್ದಾನೆ. ಪ್ರಸಾದ್​​ ಹಾಗೂ ಪತ್ನಿ ಸಾಕ್ಷಿ ಮಹಾರಾಷ್ಟ್ರದ ಸೊಲ್ಲಾಪುರ ನಿವಾಸಿಗಳಾಗಿದ್ದು, ಆನ್​ಲೈನ್ ಜೂಜಿನ ಚಟಕ್ಕೆ ಬಿದ್ದಿದ್ದ ಪ್ರಸಾದ್ ಬರೋಬ್ಬರಿ​​​​ 26 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದ. ಸಾಲಗಾರರ ಕಾಟದಿಂದ ಬೇಸತ್ತು ದಂಪತಿ ಬೆಂಗಳೂರಿಗೆ ಬಂದು ನೆಲೆಸಿದ್ದರು.

ಕೊಲೆಗಾರ ಪ್ರಸಾದ್​ ಕಟ್ಟಡದಲ್ಲಿ​ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ರೆ, ಪತ್ನಿ ಸಾಕ್ಷಿ ಬಂಗಾರದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಳು. ಸಾಲಗಾರರ ಕಾಟ ಮತ್ತೆ ಜಾಸ್ತಿಯಾಗ್ತಿದ್ದಂತೆ ದಂಪತಿ ಅಜ್ಜಿ ಶ್ರೀಲಕ್ಷ್ಮಿ ಕೊಲೆಗೆ ಸಂಚು ರೂಪಿಸಿದ್ದರು. ಅಜ್ಜಿಯನ್ನು ಕೊಲೆ ಮಾಡಿದ ಒಂದೇ ಒಂದು ಗಂಟೆಯೊಳಗೆ ಪ್ರಸಾದ್, ಅಜ್ಜಿಯ ಕುತ್ತಿಗೆಯಿಂದ ಕಳವು ಮಾಡಿದ್ದ 52 ಗ್ರಾಂ ಚಿನ್ನದ ಸರವನ್ನು ಖಾಸಗಿ ಫೈನಾನ್ಸ್​ನಲ್ಲಿ 3 ಲಕ್ಷಕ್ಕೆ ಅಡವಿಟ್ಟಿದ್ದನು. ಅದೇ ಹಣದಲ್ಲಿ 20 ಸಾವಿರವನ್ನು ತನ್ನ ಸ್ನೇಹಿತನಿಂದ ಪಡೆದಿದ್ದ ಸಾಲ ವಾಪಸ್​ ಮಾಡಿದ್ದ. ಮತ್ತೊಬ್ಬ ಸ್ನೇಹಿತನನ್ನು ಕರೆಸಿ ಬಾರ್‌ನಲ್ಲಿ ಎಣ್ಣೆ ಪಾರ್ಟಿ ಕೂಡ ಮಾಡಿದ್ದ. ಆ ಬಳಿಕ ಅನುಮಾನಗೊಂಡ ಪೊಲೀಸರು, ಪ್ರಸಾದ್​​​ನನ್ನು ವಶಕ್ಕೆ ಪಡೆದು ಪೊಲೀಸ್​ ಸ್ಟೈಲ್​ನಲ್ಲಿ ಟ್ರೀಟ್​​ಮೆಂಟ್​​ ಕೊಟ್ಟು ಕೇಳಿದಾಗ ಕೊಲೆ ಸತ್ಯ ಬಾಯ್ಬಿಟ್ಟಿದ್ದಾನೆ.

Related posts

You Tuber Sameer house Raid: ಸಮೀರ್​ ಬಗ್ಗೆ ಮಟ್ಟಣ್ಣವರ್​ ಕೊಟ್ಟ ಸ್ಪಷ್ಟನೆ ಏನು..?

Publicspot

Darshan jail case; ದರ್ಶನ್‌ಗೆ ಜೈಲಿನಲ್ಲಿ ಏನೂ ಸೌಲಭ್ಯ ಕೊಡ್ತಿಲ್ವಾ..? ಕೋರ್ಟ್‌ನಲ್ಲಿ ಏನಾಗುತ್ತೆ..?

Publicspot

ನಟ ದರ್ಶನ್​ಗೆ ಅನುಕೂಲ ಆಗುವಂತೆ ಸಾಕ್ಷಿ ಹೇಳಿದ್ರಾ ರೇಣುಕಾಸ್ವಾಮಿ ತಾಯಿ..!?

Publicspot

Love Death; ಬೆಲೆ ಕಳೆದುಕೊಂಡ ಪ್ರೀತಿ.. ಗರ್ಭಿಣಿ ಆದ ಯುವತಿಗೆ ಕೈಕೊಟ್ಟ ಪ್ರೇಮಿ..!

Publicspot

ದುಷ್ಚಟಕ್ಕೆ ದಾಸರಾಗಿ ಸ್ನೇಹಿತನನ್ನೇ ಕಿಡ್ನ್ಯಾಪ್​ ಮಾಡಿದ್ದ ಗೆಳೆಯರು ಅಂದರ್!

Publicspot

ಧರ್ಮಸ್ಥಳದಲ್ಲಿ ಇವತ್ತು ಹೈಟೆಕ್​ ತಂತ್ರಜ್ಞಾನದ ಜೊತೆಗೆ ಅಸ್ಥಿ ಆಪರೇಷನ್​..!!

Publicspot