The Public Spot
ಅಪರಾಧ

Dharmasthala SIT: ಶೀಘ್ರವೇ ಮಹೇಶ್​ ಶೆಟ್ಟಿ ತಿಮರೋಡಿ ಬಂಧನ ಆಗುತ್ತಾ..?

ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟಿದ್ದೇನೆ ಎಂದು SIT ತನಿಖೆಗೆ ಕಾರಣವಾಗಿದ್ದ ಮಾಸ್ಕ್​ ಮ್ಯಾನ್​ ಚಿನ್ನಯ್ಯನನ್ನು SIT ಟೀಂ ಈಗಾಗಲೇ ಬಂಧನ ಮಾಡಿದೆ. ಬುರುಡೆ ಪ್ರಕರಣದ ವಿಚಾರವಾಗಿ ಎಸ್​ಐಟಿ ತನಿಖೆ ಚುರುಕುಗೊಳಿಸಿದೆ. ಮಾಸ್ಕ್​ ಮ್ಯಾನ್​ ಚಿನ್ನಯ್ಯನಿಗೆ ಆಶ್ರಯ ನೀಡಿದ್ದ ಹೊರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ನಿವಾಸದಲ್ಲಿ ದಿನಪೂರ್ತಿ ಶೋಧ ನಡೆಸಿದೆ SIT ಟೀಂ. ಮಹೇಶ್​ ತಿಮರೋಡಿ ಸಹೋದರ ಮೋಹನ್ ಶೆಟ್ಟಿ ತಿಮರೋಡಿ ಮನೆಯಲ್ಲಿ ಚಿನ್ನಯ್ಯ ವಾಸ್ತವ್ಯ ಹೂಡಿದ್ದ. ಹೀಗಾಗಿ ತಿಮರೋಡಿ ಮನೆಯ ಪಕ್ಕದಲ್ಲೇ ಇರುವ ಸಹೋದರ ಮೋಹನ್ ಶೆಟ್ಟಿ ಮನೆಯಲ್ಲೂ ಮಹಜರು ಮಾಡಲಾಗಿದೆ. SIT ಎಸ್​ಪಿ ಜಿತೇಂದ್ರ ಕುಮಾರ್ ದಯಾಮಾ ನೇತೃತ್ವದಲ್ಲಿ ಮಹಜರು ಪ್ರಕ್ರಿಯೆ ನಡೆದಿದೆ. ಸೋಕೋ ಟೀಂ ಸೇರಿದಂತೆ ವಿವಿಧ ತಂಡಗಳು SIT ಅಧಿಕಾರಿಗಳಿಗೆ ಸಾಥ್​ ಕೊಟ್ಟಿದ್ದಾರೆ.

SIT ಅಧಿಕಾರಿಗಳು ಮಹಜರು ಜೊತೆ ಜೊತೆಗೇ ಮಾಸ್ಕ್​ ಮ್ಯಾನ್​ ಚಿನ್ನಯ್ಯನ ವಿಚಾರಣೆ ಕೂಡ ಆಗ್ತಿದೆ. ಮಹೇಶ್​ ಶೆಟ್ಟಿ ತಿಮರೋಡಿ ಮನೆಯಲ್ಲಿ ಸಭೆಗಳು ಆಗುತ್ತಿತ್ತಾ..? ರಹಸ್ಯ ಸಭೆಯಲ್ಲಿ ಯಾರೆಲ್ಲಾ ಇರುತ್ತಿದ್ದರು..? ಸಭೆ ವೇಳೆ ನಿನಗೆ ಯಾವ ನಿರ್ದೇಶನ ಕೊಡುತ್ತಿದ್ದರು..? ಅನ್ನೋ ಬಗ್ಗೆ ಚಿನ್ನಯ್ಯನನ್ನು ವಿಚಾರಣೆ ಮಾಡಿದ್ದಾರೆ. ಮಹೇಶ್​ ಶೆಟ್ಟಿ ತಿಮರೋಡಿ ಮನೆಯಲ್ಲಿ ಚಿನ್ನಯ್ಯ ಮಲಗುತ್ತಿದ್ದ ಕೋಣೆಯನ್ನು ಪರಿಶೀಲನೆ ಮಾಡಲಾಗಿದ್ದು, ಜನರು ಬರುತ್ತಿದ್ದ ವೇಳೆ ಕೋಣೆ ಒಳಕ್ಕೆ ಹೋಗುವಂತೆ ಹೇಳಿ, ಕಳುಹಿಸುತ್ತಿದ್ದರು. ನನ್ನನ್ನು ಕೋಣೆಯ ಒಳಕ್ಕೆ ಕಳುಹಿಸಿ ಬೀಗ ಹಾಕುತ್ತಿದ್ರು ಎಂದಿದ್ದಾನಂತೆ ಮಾಸ್ಕ್​ ಮ್ಯಾನ್​ ಚಿನ್ನಯ್ಯ.

ಮಹೇಶ್ ಶೆಟ್ಟಿ ತಿಮರೋಡಿ ಮನೆಯಿಂದ ಮಾಸ್ಕ್​ಮ್ಯಾನ್​ ಚಿನ್ನಯ್ಯನ ಮೊಬೈಲ್​​ನ ಎಸ್​​ಐಟಿ ವಶಕ್ಕೆ ಪಡೆದಿರುವ SIT ಟೀಂ. ಚಿನ್ನಯ್ಯ ಉಳಿದುಕೊಂಡಿದ್ದ ರೂಮ್​ನಲ್ಲಿ ಶೋಧ ನಡೆಸಿ ಬಟ್ಟೆ ಸೇರಿದಂತೆ ಹಲವು ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಇದ್ರ ಜೊತೆಗೆ ಮಹೇಶ್ ಶೆಟ್ಟಿ ತಿಮರೋಡಿ ಮನೆಯ ಸಿಸಿಟಿವಿ ಹಾರ್ಡ್ ಡಿಸ್ಕ್​ ಅನ್ನೂ ಕೂಡ SIT ಟೀಂ ಪಡೆದುಕೊಂಡಿದೆ. ಪತ್ತೆಯಾದ ವಸ್ತುವಿನ ವಿವರ ಬರೆದುಕೊಂಡು SIT ಸಿಬ್ಬಂದಿ ಎಲ್ಲವನ್ನೂ ಸೀಲ್ ಮಾಡಿ ಫೋರೆನ್ಸಿಕ್ ಲ್ಯಾಬ್​ ಪರೀಕ್ಷೆಗೆ ಕಳುಹಿಸಲು ತಯಾರಿ ನಡೆಸಿದ್ದಾರೆ.

ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಪ್ರಕರಣ ಸಂಬಂಧ ಇಲ್ಲೀವರೆಗೂ ಚಿನ್ನಯ್ಯನ ನೀಡಿರುವ ಹೇಳಿಕೆಗಳ ದಾಖಲೆ ಸಂಗ್ರಹಕ್ಕೆ ಎಸ್​ಐಟಿ ಮುಂದಾಗಿದೆ. ಇನ್ನೊಂದು ಕಡೆ ಎಸ್​ಐಟಿ ಕಚೇರಿಗೆ ಕರೆದುಕೊಂಡು ಬರ್ತಿದ್ದ ಕಾರಿನ ಬಗ್ಗೆ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ. ಉಜಿರೆಯ ಪ್ರಮೋದ್ ಕುಮಾರ್ ಶೆಟ್ಟಿ ಎಂಬವರ KA19MP8545 ನಂಬರ್​​​​ನ ಕಿಯಾ ಕ್ಯಾರೆನ್ಸ್​​ ಕಾರ್​ನಲ್ಲಿ SIT ಕಚೇರಿಗೆ ಬರ್ತಿದ್ದ. ತನಿಖೆಯ ಭಾಗವಾಗಿ ಕಾರಿನ ಮಾಲೀಕ ಪ್ರಮೋದ್ ಶೆಟ್ಟಿ ಹಾಗೂ ಮಹೇಶ್ ಶೆಟ್ಟಿ ತಿಮರೋಡಿ ನಂಟಿನ ಬಗ್ಗೆಯೂ ಎಸ್​ಐಟಿ ತನಿಖೆ ಕೈಗೊಂಡಿದೆ. ಕಾರು ವಶಕ್ಕೆ ಪಡೆದು ತನಿಖೆ ನಡೆಸುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಒಂದು ವೇಳೆ ಸಂಚು ನಡೆಸಿರುವುದು ಏನಾದರೂ ಪತ್ತೆಯಾದರೆ ಮಹೇಶ್​ ಶೆಟ್ಟಿ ತಿಮರೋಡಿ ಕೂಡ ಬಂಧನಕ್ಕೆ ಒಳಗಾಗುವ ಸಾಧ್ಯತೆ ದಟ್ಟವಾಗಿದೆ.

Related posts

3 ಮಕ್ಕಳ ತಾಯಿ.. ಮದುವೆ ಆಗಲು ಒತ್ತಡ.. ಲಾಡ್ಜ್​ನಲ್ಲಿ ಅವನಲ್ಲ ಇವನು..

Publicspot

ED RAID: ಕಾಂಗ್ರೆಸ್​ ಶಾಸಕನ ಮನೆ ಮೇಲೆ ED ರೇಡ್​.. ಸಿಕ್ಕಿಂನಲ್ಲಿ ಲಾಕ್​ ಆದ ವೀರೇಂದ್ರ ಪಪ್ಪಿ..

Publicspot

Old Women Murder; ಕಜ್ಜಾಯ ಕೊಡ್ತೀನಿ ಬಾರಜ್ಜಿ ಎಂದವಳು ಕೊಂದು ಮೂಟೆ ಕಟ್ಟಿಟ್ಟಳು.. ಯಾಕೆ..?

Publicspot

ಕಮಲಾಕರ ಭಟ್‌ ಕೊಲೆ ಮಾಡಿದ್ರಾ..? ಆಂಟಿ ಜೊತೆ ಅಕ್ರಮ ಸಂಬಂಧ ಸತ್ಯನಾ..?

Publicspot

ದರ್ಶನ್ ಪಾಲಿಗೆ ಕಠಿಣ ಆಗ್ತಿದೆ ಉರುಳು.. ಮಾಫಿ ಸಾಕ್ಷಿ ಬಿಚ್ಚಿಡೋ ಸತ್ಯವೇನು..?

Publicspot

ಕೆಂಪೇಗೌಡ ಏರ್​ಪೋರ್ಟ್​ನಲ್ಲಿ ದಿನಕ್ಕೊಂದು ಎಡವಟ್ಟು.. ನಿನ್ನೆ ಒಂದು.. ಇವತ್ತು ಒಂದು..

Publicspot