The Public Spot
ಅಪರಾಧ

You Tuber Sameer house Raid: ಸಮೀರ್​ ಬಗ್ಗೆ ಮಟ್ಟಣ್ಣವರ್​ ಕೊಟ್ಟ ಸ್ಪಷ್ಟನೆ ಏನು..?

ಧರ್ಮಸ್ಥಳ ವಿಚಾರವಾಗಿ AI ವಿಡಿಯೋ ಮೂಲಕ ಅಪಪ್ರಚಾರ ಮಾಡಲಾಗಿದೆ ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎನ್ನುವ ಬಗ್ಗೆ ವರದಿಯಾಗಿತ್ತು. ಇದೇ ಕಾರಣಕ್ಕೆ ಬೆಳ್ತಂಗಡಿ ಪೊಲೀಸರು ಸಮೀರ್​ ಎಂಡಿ ನಿವಾಸದ ಮೇಲೆ ರೇಡ್​ ಮಾಡಿದ್ದಾರೆ. ಬೆಳ್ತಂಗಡಿ ಕೊರ್ಟ್​ನಿಂದ ಸರ್ಚ್​ ವಾರಂಟ್​ ಪಡೆದು ಬಂದು ದಾಳಿ ಮಾಡಿದ್ದಾರೆ ಅನ್ನೋ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರ ಆಗಿತ್ತು. ಈ ಎಲ್ಲಾ ವಿಚಾರಗಳ ಬಗ್ಗೆ ಹೋರಾಟಗಾರ ಗೀರೀಶ್​ ಮಟ್ಟಣ್ಣವರ್​ ಪ್ರತಿಕ್ರಿಯೆ ನೀಡಿ, ಇದೊಂದು ರೇಡ್​ ಅಲ್ಲ ಮತ್ತು ಸರ್ಚ್​ ವಾರಂಟ್​ ಪಡೆದು ಪೊಲೀಸರು ಬಂದಿರಲಿಲ್ಲ ಎಂದಿದ್ದಾರೆ.

ಸಮೀರ್​ ಎಂಡಿ ವಿಡಿಯೋ ಮಾಡಿದ ಸಂದರ್ಭದಲ್ಲಿ ದಣಿಗಳ ಚಾಟುಗಳು (ಸೇವಕರು) ಎಂದು ಬೆಳ್ತಂಗಡಿ ಪೊಲೀಸರ ಬಗ್ಗೆ ಮಾತನಾಡಿದ್ದರು. ಆ ವಿಚಾರವಾಗಿ ಧರ್ಮಸ್ಥಳ ಪೊಲೀಸರು ವೈಯಕ್ತಿವಾಗಿ ತೆಗೆದುಕೊಂಡು ಸುಮೋಟೋ ಕೇಸ್​ ಹಾಕಿದ್ದರು. ಆ ಪ್ರಕರಣದಲ್ಲಿ ಸ್ಥಳ ಮಹಜರು ಮಾಡಲು ಬಂದಿದ್ದರು ಅಷ್ಟೆ ಎಂದಿದ್ದಾರೆ. ಇನ್ನು ಮನೆಯಿಂದ ಕ್ಯಾಮೆರಾ, ಕಂಪ್ಯೂಟರ್​ ಸೇರಿದಂತೆ ವಿಡಿಯೋ ಮಾಡಲು ಬಳಸಿದ ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದಾರೆ. ನೀವು ಮಾಧ್ಯಮ ವೃತ್ತಿಯಲ್ಲಿ ಇರುವ ಜನರಿಗೆ ಕ್ಯಾಮೆರಾ ಬಹುಮುಖ್ಯವಾದ ವಸ್ತು. ಅದನ್ನೇ ತೆಗೆದುಕೊಂಡು ಹೋಗಿದ್ದಾರೆ ಎಂದು ದೂರಿದ್ದಾರೆ.

ಯೂಟ್ಯೂಬರ್ ಸಮೀರ್ ಎಂಟಿ ಮನೆಯಲ್ಲಿ ಸ್ಪಾಟ್ ಮಹಜರ್ ಮುಕ್ತಾಯ ಮಾಡಿದ ಧರ್ಮಸ್ಥಳ ಪೊಲೀಸರು, ವಾಪಸ್​ ತೆರಳಿದ್ದಾರೆ. ಹಾರ್ಡ್ ಡಿಸ್ಕ್, ಪೆನ್ನು ಪೇಪರ್ ಸೇರಿದಂತೆ ಸಣ್ಣಪುಟ್ಟ ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಧರ್ಮಸ್ಥಳ ಪೊಲೀಸರು ಬರುವ ಮೊದಲೇ ಸಮೀರ್ ಮನೆಗೆ ಬಂದಿದ್ದ ಹೋರಾಟಗಾರ ಗಿರೀಶ್ ಮಟ್ಟಣ್ಣವರ್, ಪೊಲೀಸರ ಮಹಜರ್ ವೇಳೆ ಸ್ಥಳದಲ್ಲೇ ಇದ್ದು ಸೂಕ್ತ ಮಾಹಿತಿ ಕೊಡುವ ಕೆಲಸ ಮಾಡಿದ್ದಾರೆ. ಇಡೀ ಪೊಲೀಸರ ಸ್ಥಳ ಮಹಜರ್ ವಿಡಿಯೋ ರೆಕಾರ್ಡ್ ಮಾಡಲಾಗಿದೆ. ಮಹಜರ್​ ಮುಗಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ಸಮೀರ್ ನಿರಾಕರಿಸಿದ್ದಾರೆ.

ಎಸ್​ಐಟಿ ತನಿಖೆ ಹಲವು ಆಯಾಮಗಳನ್ನು ಪಡೆದುಕೊಂಡಿದೆ. ಮೊದಲಿಗೆ ಅಸ್ಥಿ ಶೋಧ ಮಾಡಲು ಉತ್ಖನನ ಮಾಡುತ್ತಿದ್ದ ಎಸ್​ಐಟಿ ಅಧಿಕಾರಿಗಳು ಇದೀಗ ಅದೇ ಮಾಸ್ಕ್​ಮ್ಯಾನ್​ ಚಿನ್ನಯ್ಯನನ್ನು ಬಂಧಿಸಿ ವಿಚಾರಣೆ ಮಾಡುತ್ತಿದ್ದಾರೆ. ತಲೆಬುರುಡೆ ತಂದಿದ್ದು ಎಲ್ಲಿಂದ..? ಬುರುಡೆ ಸಿಕ್ಕಿದ್ದು ಹೇಗೆ..? ಅನ್ನೋ ಬಗ್ಗೆಯೂ ವಿಚಾರಣೆ ಮಾಡ್ತಿದ್ದಾರೆ. ಇನ್ನು ತಲೆ ಬುರುಡೆ ತಂದುಕೊಟ್ಟ ಆರೋಪ ಹಾಗೂ ಮಾಸ್ಕ್​ ಮ್ಯಾನ್​ ಚಿನ್ನಯ್ಯನಿಗೆ ಆಶ್ರಯ ನೀಡಿದ ಆರೋಪದ ಮೇಲೆ ಆರ್​ಟಿಐ ಕಾರ್ಯಕರ್ತ ಜಯಂತ್​ ಟಿ ಎಂಬುವರನ್ನು ಬೆಳ್ತಂಗಡಿ ಎಸ್​ಐಟಿ ಕಚೇರಿಯಲ್ಲಿ ವಿಚಾರಣೆ ಮಾಡಲಾಗಿದೆ. ಇನ್ನೊಂದು ಕಡೆ ಧರ್ಮಸ್ಥಳ ಹಾಗೂ ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪ್ರತ್ಯೇಕ ತನಿಖೆ ನಡೆಸುತ್ತಿದ್ದಾರೆ. ಈ ನಡುವೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ವಿದೇಶದಿಂದ ಹಣ ಏನಾದರೂ ಬಂದಿದ್ಯಾ..? ಅನ್ನೋ ಬಗ್ಗೆ ತನಿಖೆ ಮಾಡ್ತಿದ್ದಾರೆ. ಈ ನಡುವೆ NIA ತನಿಖೆಗೆ ವಹಿಸಿ ಎನ್ನುವ ಆಗ್ರಹ ಕೇಸರಿ ಪಾಳಯದಿಂದ ಕೇಳಿ ಬರುತ್ತಿದೆ.

Related posts

ATM Vehicle Loot Case; ಹಣ ಸಿಕ್ಕಿಲ್ಲ.. ಲೀಡ್ಸ್​ ಸಿಕ್ಕಿದೆ.. ಮುಂದೇನು..?

Publicspot

Kashmir ಕಾಶ್ಮೀರದಲ್ಲಿ ಫೋಟೋ ಶೂಟ್​.. ವಾರ್ಷಿಕೋತ್ಸವಕ್ಕೂ ಮುನ್ನ ಮಾಸ್ಟರ್ ಪ್ಲ್ಯಾನ್

Publicspot

ಕೆಂಪೇಗೌಡ ಏರ್​ಪೋರ್ಟ್​ನಲ್ಲಿ ದಿನಕ್ಕೊಂದು ಎಡವಟ್ಟು.. ನಿನ್ನೆ ಒಂದು.. ಇವತ್ತು ಒಂದು..

Publicspot

ನಗೆಯ ಪ್ರೀತಿಗೆ ಬಲಿಕೊಟ್ಟ ಪ್ರಿಯಕರ.. ಹುಡುಗಿ ಮಾಡಿದ್ದು ಒಂದೇ ತಪ್ಪು..

Publicspot

Brother murder: ಅಕ್ಕನ ಅಕ್ರಮ ಸಂಬಂಧಕ್ಕೆ ಬಲಿಯಾದ ತಮ್ಮ..

Publicspot

Student Suicide; ಹಾಸ್ಟೆಲ್​ ವಾರ್ಡನ್ ಬೈಯ್ದಿದ್ದಕ್ಕೆ ಮಗಳು ಆತ್ಮಹತ್ಯೆ ಮಾಡಿಕೊಂಡಳಾ..?

Publicspot