The Public Spot
ಅಪರಾಧ

ಕಿರುತೆರೆ ನಟಿಗೆ ಲೈಂಗಿಕ ಕಿರುಕುಳ ಆರೋಪ, ಕೇರಳದ ಚೇಟ ಬಂಧನ..

ಸೀರಿಯಲ್‌ ನಟಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. ಫೇಸ್‌ಬುಕ್‌ನಲ್ಲಿ ಗುಪ್ತಾಂಗದ ವಿಡಿಯೊ‌ ಕಳಿಸಿ ಟಾರ್ಚರ್ ಕೊಟ್ಟ ಆರೋಪ ಕೇಳಿ ಬಂದಿದೆ. ತೆಲುಗು ಮತ್ತು ಕನ್ನಡ ಧಾರವಾಹಿಗಳಲ್ಲಿ ನಟನೆಯಲ್ಲಿ ತೊಡಗಿರುವ ನಟಿ ರಂಜಿನಿಗೆ ಸೋಷಿಯಲ್‌ ಮೀಡಿಯಾದಲ್ಲಿ ಟಾರ್ಚರ್‌ ಕೊಟ್ಟಿದ್ದಾನೆ ಎನ್ನಲಾಗಿದೆ. ಕಳೆದ 3 ತಿಂಗಳಿಂದ ನಟಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ದೂರು ನೀಡಲಾಗಿದೆ/ NAVEENZ ಎಂಬ ಫೇಸ್‌ಬುಕ್ ಐಡಿ ಮೂಲಕ ಕಿರುಕುಳ ಕೊಡಲಾಗಿದೆ ಎಂದು ನಟಿ ರಂಜಿನಿ ದೂರು ನೀಡಿದ್ದಾರೆ.

ನಟಿ ರಂಜಿನಿಗೆ ಮೊದಲು ರಿಕ್ವೆಸ್ಟ್ ಕಳುಹಿಸಿದ್ದ ನವೀನ್‌, ಆದರೆ ರಿಕ್ವೆಸ್ಟ್ ನಟಿ ರಿಕ್ವೆಸ್ಟ್‌ ಸ್ವೀಕರಿಸಿರಲಿಲ್ಲ. ಆದರೆ ಮೆಸೆಂಜರ್‌ನಲ್ಲಿ‌ ಅಶ್ಲೀಲ ಮೆಸೆಜ್ ಮಾಡಿ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. ಆಗಲೂ ನಟಿ ರಂಜಿನಿ ಮಾಡದಂತೆ ಎಚ್ಚರಿಕೆ ನೀಡಿದ್ರಂತೆ. ಆದರೂ ಬೇರೆ ಬೇರೆ ಐಡಿಯಿಂದ ಅಶ್ಲೀಲ ಹಾಗೂ ಗುಪ್ತಾಂಗದ ಫೋಟೊ ಕಳಿಸಿ ವಿಕೃತಿ ಮೆರೆದಿದ್ನಂತೆ. ಕಿರುಕುಳ ನೀಡುವುದು ಹೆಚ್ಚಾದ ಬಳಿಕ ಭೇಟಿಯಾಗಿ ಬುದ್ಧಿ ಕೂಡ ಹೇಳಿದ್ರಂತೆ. ನವೆಂಬರ್ 1ರಂದು ನಾಗರಭಾವಿ ಬಳಿ ಆರೋಪಿ ನವೀನ್‌ನನ್ನು ಭೇಟಿ ಮಾಡಿದ್ದ ನಟಿ ರಂಜಿನಿ, ಈ ರೀತಿ ಮೆಸೇಜ್‌ ಎಲ್ಲಾ ಮಾಡಬೇಡ ಎಂದಿದ್ರಂತೆ.

ಬೆಳಗ್ಗೆ 11.30ಕ್ಕೆ ನಂದನ್ ಪ್ಯಾಲೆಸ್ ಬಳಿ ನೇರವಾಗಿ ಭೇಟಿ ಆಗಿದ್ದ ನಟಿ ರಂಜಿನಿ ಹಾಗೂ ನವೀನ್‌ ಮಾತುಕತೆ ನಡೆಸಿದ್ರು. ಈ ರೀತಿ ಮೆಸೇಜ್ ಮಾಡೋದು ಬೇಡ ಎಂದಿದ್ದರಂತೆ. ಆದರೆ ಮತ್ತೆ ಅದೇ ರೀತಿ ಕಿರುಕುಳ ಕೊಡಲು ಶುರು ಮಾಡಿದ್ನಂತೆ ಆರೋಪಿ. ಅಂತಿಮವಾಗಿ ಲೈಂಗಿಕ ಕಿರುಕುಳ ಹೆಚ್ಚಾದ ಹಿನ್ನಲೆಯಲ್ಲಿ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ. ಅಶ್ಲೀಲ ಮೆಸೇಜ್ ಮಾಡಿದ ಆರೋಪದ ಮೇಲೆ ನವೀನ್ ಎಂಬಾತನನ್ನು ಬಂಧಿಸಲಾಗಿದೆ. ಆರೋಪಿ ನವೀನ್‌ ಕೇರಳ ಮೂಲದವನಾಗಿದ್ದು, ವೈಟ್ ಫೀಲ್ಡ್ ನಿವಾಸಿ ಎನ್ನಲಾಗಿದೆ.

ಪಶ್ಚಿಮ ವಿಭಾಗ ಡಿಸಿಪಿ ಗಿರೀಶ್ ಈ ಬಗ್ಗೆ ಮಾತನಾಡಿ, ಕಿರುತೆರೆ ನಟಿಯೊಬ್ಬರಿಗೆ ಕೆಲ ದಿನಗಳ ಹಿಂದೆ ವ್ಯಕ್ತಿಯೊಬ್ಬ ಪರಿಚಯವಾಗಿದ್ದ. ಸೋಷಿಯಲ್ ಮೀಡಿಯಾ ಮೂಲಕ ಇಬ್ಬರ ಪರಿಚಯವಾಗಿತ್ತು. ಆ ನಂತರ ಆ ವ್ಯಕ್ತಿ ತನ್ನ ಖಾಸಗಿ ಅಂಗದ ಪೋಟೋವನ್ನ ಅಕೆಗೆ ಕಳುಹಿಸಿದ್ದ. ಈ ಹಿನ್ನೆಲೆಯಲ್ಲಿ ನಟಿ ದೂರು ನೀಡಿದ್ರು. ವಿಚಾರಣೆ ವೇಳೆ ಆತ ಹಲವರ ಜೊತೆಗೆ ಚಾಟ್ ಮಾಡಿರೋದು ಗೊತ್ತಾಗಿದೆ. ಸದ್ಯ ಆರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ಈ ಬಗ್ಗೆ ತನಿಖೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ.

ಆದರೂ ಸೋಷಿಯಲ್‌ ಮೀಡಿಯಾದಲ್ಲಿ ನಾನು ರಿಕ್ವೆಸ್ಟ್‌ ಒಪ್ಪಿಕೊಂಡಿರಲಿಲ್ಲ ಎಂದು ನಟಿ ರಂಜಿನಿ ಹೇಳಿದ್ದಾರೆ. ಆದರೆ ರಿಕ್ವೆಸ್ಟ್‌ ಅನ್ನೇ ಒಪ್ಪದೇ ಇದ್ದರೂ ನೇರಾನೇರಾ ಭೇಟಿ ಮಾಡಿದ್ದು ಯಾಕೆ..? ಅನ್ನೋ ಪ್ರಶ್ನೆ ಎದುರಾಗಿದೆ. ಅಷ್ಟು ಮಾತ್ರವಲ್ಲದೆ ಸೋಷಿಯಲ್‌ ಮೀಡಿಯಾದಲ್ಲಿ ಪರಿಚಯ ಆಗಿತ್ತು ಎಂದು ಪೊಲೀಸರು ಹೇಳಿದ್ದಾರೆ. ಇವರಿಬ್ಬರಿಗೂ ಪರಿಚಯ ಇತ್ತಾ..? ಆ ನಂತರ ಇಬ್ಬರ ನಡುವೆ ಸಂಘರ್ಷ ಏರ್ಪಟ್ಟು ಪೊಲೀಸ್‌ ಠಾಣೆ ಮೆಟ್ಟಿಲು ಹತ್ತುವಂತಾಯ್ತಾ..? ಅನ್ನೋ ಬಗ್ಗೆ ಪೊಲೀಸ್ರು ತನಿಖೆ ನಡೆಸುತ್ತಿದ್ದಾರೆ.

Related posts

Birthday party; ಹುಟ್ಟು ಹಬ್ಬದ ಪಾರ್ಟಿಯಲ್ಲಿ ಬಿಲ್ ಪೇ ಘರ್ಷಣೆ.. ಕೊಲೆಯಲ್ಲಿ ಅಂತ್ಯ..

Publicspot

Husband Murder: ನನಗೆ ಗಂಡ ಬೇಡ.. ನೀನೇ ಬೇಕು ಅಂದಳು.. ಬಾಲ್ಯ ಸ್ನೇಹಿತನ ಕೊಂದವನ ಮಾತು.. ಖಾಕಿ ಶಾಕು..

Publicspot

Mahesh Thimarodi Arrest: ಮಹೇಶ್‌ ತಿಮರೋಡಿ ಅರೆಸ್ಟ್‌.. ಕಾರಣ ಏನು ಗೊತ್ತಾ..?

Publicspot

SIT ENQUIRY MASK MEN: ಅನಾಮಿಕನನ್ನು ಸುಧೀರ್ಘವಾಗಿ ವಿಚಾರಣೆ ಮಾಡಿದ SIT

Publicspot

ಕಮಲಾಕರ ಭಟ್‌ಗೆ ಬಲೆ ಬೀಸಿದಾಕೆ ಸುಚಿತ್ರಾ ಅಲ್ಲ.. ಸುಳ್ಳು ಹೆಸರಿನ ಹಿಂದಿನ ರಹಸ್ಯ ಏನು..?

Publicspot

ಕಮಲಾಕರ ಭಟ್‌ ಕೊಲೆ ಮಾಡಿದ್ರಾ..? ಆಂಟಿ ಜೊತೆ ಅಕ್ರಮ ಸಂಬಂಧ ಸತ್ಯನಾ..?

Publicspot