The Public Spot
ಟ್ರೆಂಡ್

ಮೌಢ್ಯದ ಮಹಲಿನಲ್ಲಿ ಮರೆಯಾದ ಚಂದಿರ.. ಫಲಾಹಾರ ಸೇವಿಸಿ ಸೈ ಎಂದ ಪ್ರಗತಿಪರರು

ನಿನ್ನೆ ರಾತ್ರಿ ಜವಹರಲಾಲ್ ನೆಹರು ತಾರಾಲಯದಲ್ಲಿ ಚಂದ್ರಗ್ರಹಣದ ಬಗ್ಗೆ ಉಪನ್ಯಾಸ ನೀಡಲಾಯ್ತು. ನೆಹರು ತಾರಾಲಯದ ನಿರ್ದೇಶಕ ಗುರುಪ್ರಸಾದ್ ಉಪನ್ಯಾಸ ನಡೆಸಿಕೊಟ್ಟರು. ನೆಹರು ತಾರಾಲಯದಲ್ಲಿ ಸಾರ್ವಜನಿಕರಿಗೆ ಚಂದ್ರಗ್ರಹಣ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ಟೆಲಿಸ್ಕೋಪ್ ಮೂಲಕ ಚಂದ್ರ ಗ್ರಹಣ ನೋಡಿದ ಜನರು ಖುಷ್‌ ಆದ್ರು.

ಚಂದ್ರಗ್ರಹಣದ ವೇಳೆ ಮೂಢನಂಬಿಕೆ ವಿರೋಧಿಸಿ ಆಹಾರ ಸೇವನೆ ಮಾಡಲಾಗಿದೆ. ಬೆಂಗಳೂರಿನ ಟೌನ್‌‌ಹಾಲ್ ಮುಂದೆ ಜಾಗೃತಿ ಕಾರ್ಯಕ್ರಮ ಮಾಡಲಾಗಿದೆ. 150ಕ್ಕೂ ಹೆಚ್ಚು ಜನರಿಂದ ಆಹಾರ ಸೇವನೆ ಮಾಡಿದ್ದಾರೆ. ನಮ್ಮ ನಡಿಗೆ ವಿಜ್ಞಾನದೆಡೆಗೆ ಶೀರ್ಷಿಕೆ ಅಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಸ್ಕೆಟ್, ಹಣ್ಣು ಹಂಪಲು, ನೀರು ಸೇವನೆ ಮಾಡಿದ್ದಾರೆ. ಈ ಮೂಲಕ ಮೂಡನಂಬಿಕೆ ತೊಲಗಲಿ ಎಂದು ಸೇವನೆ ಮಾಡಿದ್ದಾರೆ ಪ್ರಗತಿಪರರು.

ಬೀದರ್‌ನಲ್ಲಿ ಚಂದ್ರಗ್ರಹಣದ ವೇಳೆ ಸೈನಿಕ ಶಾಲೆ ಮಕ್ಕಳು ಮೌಢ್ಯಕ್ಕೆ ಸಡ್ಡು ಹೊಡೆದಿದ್ದಾರೆ. ಬೈನಾಕ್ಯೂಲರ್ ಹಿಡಿದು ಚಂದ್ರಗ್ರಹಣ ಕಣ್ತುಂಬಿಕೊಂಡಿದ್ದಾರೆ. ಬೀದರ್‌ನ ಸೈನಿಕ ಶಾಲೆಯಲ್ಲಿ ಬೈನಾಕ್ಯೂಲರ್ ಹಿಡಿದು ಚಂದ್ರಗ್ರಹಣ ನೋಡಲು ಮುಂದಾದ ಮಕ್ಕಳಿಗೆ ಬಾಳೆಹಣ್ಣು ವಿತರಿಸಿದೆ ಶಾಲಾ ಆಡಳಿತ ಮಂಡಳಿ. ಸೈನಿಕ ಶಾಲೆಯ ಮಕ್ಕಳು ಮತ್ತು ಶಿಕ್ಷಕರು ಚಂದ್ರಗ್ರಹಣ ನೋಡಿ ಮೌಢ್ಯತೆ ಆಚರಿಸಬಾರದು, ನಬೋ ಮಂಡಲದ ಕೌತುಕವನ್ನ ಕಣ್ತುಂಬಿಕೊಳ್ಳಬೇಕು ಎಂದು ಶಿಕ್ಷಕರು ತಿಳಿಸಿದ್ದಾರೆ.

ಆದರೆ ದೇವಸ್ಥಾನಗಳು ಬಾಗಿಲು ಬಂದ್ ಮಾಡಿಕೊಂಡಿದ್ದವು. ವಿಜ್ಞಾನ ಜನರಿಗೆ ಧೈರ್ಯ ಹೇಳುತ್ತಿದ್ದರೆ, ನಮ್ಮ ಧರ್ಮ ಜನರನ್ನು ಭಯಭೀತರನ್ನಾಗಿಸುವ ಕೆಲಸ ಮಾಡಿತ್ತು. ಆದರೂ ಜನರು ನೆಹರು ತಾರಾಲಯ ಸೇರಿದಂತೆ ಸಾಕಷ್ಟು ಕಡೆ ಚಂದ್ರಗ್ರಹಣ ಕಣ್ತುಂಬಿಕೊಂಡರು. ಆದರೆ ಬೆಂಗಳೂರು ಸೇರಿದಂತೆ ಸಾಕಷ್ಟು ಪ್ರದೇಶದಲ್ಲಿ ಮೋಡ ಕವಿದ ವಾತಾವರಣ ಇದ್ದಿದ್ದರಿಂದ ಚಂದ್ರಗ್ರಹಣ ನೋಡುವ ಅವಕಾಶವೇ ಇಲ್ಲದಂತಾಯ್ತು.

Related posts

Bike Taxi Start: ರಾಜ್ಯದಲ್ಲಿ ಬೈಕ್​ ಟ್ಯಾಕ್ಸಿ ಸೇವೆಗೆ ಹೈಕೋರ್ಟ್​ ಅಸ್ತು.. ರಸ್ತೆ ಫೈಟ್​ ನಿಲ್ಲಿಸಲಿ ಖಾಕಿಪಡೆ..

Publicspot

Body Fight; ಬದುಕಿದ್ದಾಗ ಬೇಡವಾದ ಅಮ್ಮ.. ಸತ್ತಾಗ ಶವಕ್ಕೆ ಬಂದ ಮಕ್ಕಳು.. ಥೂ ನಿಮ್ಮ ಜನ್ಮಕ್ಕೆ..

Publicspot

Hasanambe Last two days; ಕಾಲ್ತುಳಿತ ಸಂಭವಿಸಿದರೆ ನಾವು ಜವಾಬ್ದಾರಿ ಹೊರುವುದಿಲ್ಲ.. ಬಸ್‌ ನಿಲ್ಲಿಸಿ..

Publicspot

Sugarcane Farmers Protest; ಸರ್ಕಾರದ ಆಹ್ವಾನ ತಿರಸ್ಕರಿಸಿದ ರೈತರು.. ಸಂಜೆ ತನಕ ಡೆಡ್‌ಲೈನ್‌..

Publicspot

ಸುಳ್ಳನ್ನು ಮುಚ್ಚಿಕೊಳ್ಳುವ ಪ್ರಯತ್ನ ಮಾಡಿ ಸಿಕ್ಕಿಬಿತ್ತಾ ರಾಮೇಶ್ವರಂ ಕೆಫೆ..?

Publicspot

ಕಾಳಸಂತೆಯಲ್ಲಿ ಸಿಲಿಂಡರ್‌ ಮಾರಾಟ ಮಾಡಿದ್ರೆ ಹುಷಾರ್‌..! ಬರೀ ಮಾತಿಗಾ..?

Publicspot