The Public Spot
ರಾಜಕೀಯ

ಖಾತೆ ಹಂಚಿಕೆ.. ಕೊನೆಗೂ ಗೆದ್ದ ಮುನಿಯಪ್ಪ.. ರಾಮಲಿಂಗಾರೆಡ್ಡಿ.. ಬಿದ್ದವರು ಯಾರು..?

ಕರ್ನಾಟಕದಲ್ಲಿ ಸಿದ್ದರಾಮಯ್ಯ ರಾಜೀನಾಮೆ ಬಳಿಕ ಡಿ.ಕೆ ಶಿವಕುಮಾರ್​ ನೇತೃತ್ವದಲ್ಲಿ ಜೂನ್​ 3ರಂದು ನೂತನ ಸರ್ಕಾರ ರಚನೆ ಆಗಿತ್ತು. ಆ ಬಳಿಕ ಬರೋಬ್ಬರಿ 2 ತಿಂಗಳ ನಂತರ ಆಗಸ್ಟ್​ 3 ರಂದು ಸಚಿವ ಸಂಪುಟ ವಿಸ್ತರಣೆ ಮಾಡಲಾಗಿತ್ತು. 19 ಜನರು ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದರು. ಆದರೆ 10 ದಿನಗಳು ಕಳೆದರೂ ಖಾತೆ ಹಂಚಿಕೆ ಆಗಿರಲಿಲ್ಲ. ಇವತ್ತು ಡಿ.ಕೆ ಶಿವಕುಮಾರ್​ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿದ್ದು, ಹಳಬರ ಖಾತೆಗಳೂ ಅದಲು ಬದಲು ಆಗಿವೆ. ಅದರಲ್ಲಿ ಕೆ.ಹೆಚ್​ ಮುನಿಯಪ್ಪ ಹಾಗೂ ರಾಮಲಿಂಗಾರೆಡ್ಡಿ ತನ್ನ ಹಠವನ್ನು ಸಾಧಿಸಿ ಮೇಲುಗೈ ಸಾಧಿಸಿದ್ದಾರೆ.

ಸಚಿವ ಜಮೀರ್ ಅಹ್ಮದ್‌ ಖಾನ್ ಅವರಿಗೆ ವಸತಿ, ರಾಮಲಿಂಗಾರೆಡ್ಡಿಗೆ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ, ಲಕ್ಷ್ಮಣ ಸವದಿಗೆ ಸಹಕಾರ, ರುದ್ರಪ್ಪ ಲಮಾಣಿ ಅವರಿಗೆ ಸಕ್ಕರೆ & ಜವಳಿ ಖಾತೆ, ಕೆ.ಹೆಚ್‌. ಮುನಿಯಪ್ಪಗೆ ಸಮಾಜ ಕಲ್ಯಾಣ, ಶಿವರಾಜ ತಂಗಡಗಿಗೆ ಕನ್ನಡ & ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ. ಯು.ಟಿ. ಖಾದರ್​ಗೆ ಆರೋಗ್ಯ ಹಾಗೂ ಅಲ್ಪಸಂಖ್ಯಾತ ಕಲ್ಯಾಣ, ಹಜ್‌ & ವಕ್ಫ್‌ ಖಾತೆ, ಟಿ. ರಘುಮೂರ್ತಿಗೆ ಪರಿಶಿಷ್ಟ ಪಂಗಡಗಳ ಕಲ್ಯಾಣ, ಡಾ. ಅಜಯ್ ಸಿಂಗ್​​ಗೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ, ಎನ್. ಚಲುವರಾಯಸ್ವಾಮಿಗೆ ಜಲ ಸಂಪನ್ಮೂಲ ಖಾತೆ ನೀಡಲಾಗಿದೆ.

ಅದೇ ರೀತಿ ಮಧು ಬಂಗಾರಪ್ಪಗೆ ಪ್ರಾಥಮಿಕ & ಪ್ರೌಢ ಶಿಕ್ಷಣ, ಬಸವರಾಜ ರಾಯರೆಡ್ಡಿಗೆ ಉನ್ನತ ಶಿಕ್ಷಣ ಖಾತೆ, ಕೆ.ಎಂ. ಶಿವಲಿಂಗೇಗೌಡಗೆ ಅಬಕಾರಿ ಖಾತೆ, ಸಿ. ಪುಟ್ಟರಂಗಶೆಟ್ಟಿ ಪಶುಸಂಗೋಪನೆ, ರೇಷ್ಮೆ, ವಿಜಯಾನಂದ ಕಾಶಪ್ಪನವರ್​ಗೆ ಸಣ್ಣ ಕೈಗಾರಿಕೆ, ಸಂತೋಷ್ ಲಾಡ್‌ ಕಾರ್ಮಿಕ & ಉದ್ಯೋಗ, ಕೆ.ಎಸ್. ಬಸವಂತಪ್ಪಗೆ ಮುಜರಾಯಿ, ಮೀನುಗಾರಿಕೆ, ಬಂದರು & ಒಳಸಾರಿಗೆ, ಎಸ್‌.ಎಸ್‌. ಮಲ್ಲಿಕಾರ್ಜುನಗೆ ತೋಟಗಾರಿಕೆ, ಗಣಿ ಮತ್ತು ಭೂ ವಿಜ್ಞಾನ, ರಿಜ್ವಾನ್ ಅರ್ಷದ್‌ಗೆ ಆಹಾರ & ನಾಗರಿಕ ಸರಬರಾಜು, ಪಿ.ಎಂ. ನರೇಂದ್ರ ಸ್ವಾಮಿಗೆ ಕೃಷಿ, ಹೆಚ್‌.ಸಿ. ಬಾಲಕೃಷ್ಣಗೆ ಪೌರಾಡಳಿತ, ಬಿ.ನಾಗೇಂದ್ರಗೆ ಯೋಜನೆ ಮತ್ತು ಸಾಂಖ್ಯಿಕ ಖಾತೆ ನೀಡಲಾಗಿದೆ.

ಕೆಲವು ಸಚಿವ ತಮ್ಮ ಹಳೇ ಖಾತೆಗಳನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿ ಆಗಿದ್ದಾರೆ. ಅದರಲ್ಲಿ ಮಧು ಬಂಗಾರಪ್ಪ, ಜಮೀರ್ ಅಹ್ಮದ್‌ ಖಾನ್, ಸಂತೋಷ್ ಲಾಡ್‌, ಎಸ್‌.ಎಸ್. ಮಲ್ಲಿಕಾರ್ಜುನ, ಶಿವರಾಜ ತಂಗಡಗಿ ಪ್ರಮುಖರು. ಹಳೇ ಖಾತೆಯನ್ನು ಕಳೆದುಕೊಂಡವರು ಎನ್. ಚಲುವರಾಯಸ್ವಾಮಿ ಕೃಷಿ ಬದಲು ಜಲಸಂಪನ್ಮೂಲ ಖಾತೆಗೆ ಬಂದಿದ್ದಾರೆ. ಕೆ.ಹೆಚ್. ಮುನಿಯಪ್ಪ
ಆಹಾರ ಬದಲು ಹಠವಿಡಿದು ಸಮಾಜ ಕಲ್ಯಾಣ ಪಡೆದಿದ್ದಾರೆ. ರಾಮಲಿಂಗಾರೆಡ್ಡಿ ಜಲಸಂಪನ್ಮೂಲ ಖಾತೆಯಲ್ಲಿ ಮಾಡಬೇಕಿರುವ ಕೆಲಸ ಏನೂ ಇಲ್ಲ ಅನ್ನೋ ಕಾರಣಕ್ಕೆ ರಾಜೀನಾಮೆ ಕೊಟ್ಟು ಬೆದರಿಕೆ ಹಾಕಿದ್ದರು. ಇದೀಗ ಖಾತೆ ಬದಲಾವಣೆ ಮಾಡಿದ್ದು, ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಖಾತೆ ಕೊಡಲಾಗಿದೆ.

Related posts

ಫೋನ್​ ಟ್ಯಾಪಿಂಗ್​ ಅನ್ನೋದು ಸದಾ ಕಾಲ ಸತ್ಯ.. ಸಿದ್ದರಾಮಯ್ಯ ಪತಿವ್ರತೆ ಅಲ್ಲ..

Publicspot

ಕಮಿಷನ್‌ ಆಸೆಗೆ ಆನೇಕಲ್‌ನಲ್ಲಿ ಕ್ರೀಡಾಂಗಣ ಮಾಡ್ತಿರೋದಾ..?

Publicspot

ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರ ನಡುವೆ ಭಾಷಣ ಹಗ್ಗಾಜಗ್ಗಾಟ..!

Publicspot

JDS – BJP ಮೈತ್ರಿ ಹಾಳಾದರೆ ಹಾಸನದ ಕಿತಾಪತಿಯೇ ಕಾರಣ..?

Publicspot

ಬಿಜೆಪಿ ಗೆಲ್ಲಿಸಲು ಅಖಾಡಕ್ಕೆ ಇಳಿದ ಕೇಂದ್ರ ಸಚಿವ ಕುಮಾರಣ್ಣ!

Publicspot

ಸಚಿವ ಸ್ಥಾನಕ್ಕಾಗಿ ಕಾಂಗ್ರೆಸ್​ನಲ್ಲಿ ಒತ್ತಡ.. ಜಮೀರ್​ ಪಾಲಿಗೆ ಕಾಂಗ್ರೆಸ್​ ದೂರನಾ..?

Publicspot