The Public Spot
ಅಪರಾಧ

ಕೊಲೆಗಾರ ವಿನಯ್​ ಕುಲಕರ್ಣಿ ಮುಂದಿರುವ ಆಯ್ಕೆಗಳು ಏನು..?

ಧಾರವಾಡ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಯೋಗೇಶ್​​ಗೌಡರ್​ ಕೊಲೆ ಕೇಸ್​ನಲ್ಲಿ ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕರಾಗಿದ್ದ ವಿನಯ್​ ಕುಲಕರ್ಣಿ ದೋಷಿ ಎಂದು ಸಾಬೀತಾಗಿತ್ತು. ಬುಧವಾರ ದೋಷಿಗಳು ಎಂದು ಆದೇಶ ಮಾಡಿದ್ದ ಜನಪ್ರತಿನಿಧಿಗಳ ನ್ಯಾಯಾಲಯ ಗುರುವಾರ ಶಿಕ್ಷೆ ಪ್ರಮಾಣ ಪ್ರಕಟ ಮಾಡುವುದಾಗಿ ತಿಳಿಸಿತ್ತು. ಆ ಬಳಿಕ ಅಪರಾಧಿಗಳ ಪರ-ವಿರೋಧ ವಾದ ಪ್ರತಿವಾದ ಆಲಿಸಿದ ಕೋರ್ಟ್​, ಶುಕ್ರವಾರ ಶಿಕ್ಷೆ ಪ್ರಮಾಣ ಪ್ರಕಟ ಮಾಡಿದ್ದು, 17 ಅಪರಾಧಿಗಳ ಪೈಕಿ 16 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದು, ಉಳಿದ ಓರ್ವ ಅಂದಿನ ತನಿಖಾಧಿಕಾರಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಜೀವಾವಧಿ ಶಿಕ್ಷೆ ಎಂದರೆ 14 ವರ್ಷದ ಶಿಕ್ಷೆಯಲ್ಲಿ ಜೀವ ಇರುವ ತನಕವೂ ಕಾಂಗ್ರೆಸ್​ ಶಶಾಸಕರಾಗಿದ್ದ ವಿನಯ್​ ಕುಲಕರ್ಣಿ ಜೈಲಿನಲ್ಲೇ ಕಳೆಯಬೇಕಿದೆ. ಆದರೆ 14 ವರ್ಷ ಜೈಲು ಶಿಕ್ಷೆ ಕಳೆದ ಬಳಿಕ ಸರ್ಕಾರ ಸನ್ನಡತೆ ಆಧಾರದಲ್ಲಿ ಜೈಲಿನಿಂದ ಹೊರಕ್ಕೆ ತರುವುದಕ್ಕೆ ಅವಕಾಶವಿದೆ. ಅಲ್ಲೀವರೆಗೂ ಜೈಲುವಾಸ ವಿನಯ್​ ಕುಲಕರ್ಣಿಯ ರಾಜಕೀಯ ಭವಿಷ್ಯವನ್ನೇ ಕತ್ತಲಿಗೆ ದೂಡುವಂತೆ ಆಗಿದೆ. ಇದೀಗ ವಿನಯ್​ ಕುಲಕರ್ಣಿ ಮುಂದಿನ ದಿನಗಳಲ್ಲಿ ಸೆಷನ್ಸ್​ ಕೋರ್ಟ್​ ಆದೇಶಕ್ಕೆ ತಡೆಯಾಜ್ಞೆ ತರುವುದಕ್ಕೆ ವಿಫಲರಾದರೆ ಶಾಸಕ ಸ್ಥಾನವೂ ಅನರ್ಹಗೊಂಡು, ಉಪಚುನಾವಣೆ ನಡೆಸಬೇಕಾದ ಅನಿವಾರ್ಯತೆ ಎದುರಾಗಲಿದೆ.

ಯಾವುದೇ ಜನಪ್ರತಿನಿಧಿ ಕ್ರಿಮಿನಲ್​ ಅಪರಾಧ ಪ್ರಕರಣದಲ್ಲಿ 2 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟು ಜೈಲು ಶಿಕ್ಷೆಗೆ ಒಳಪಟ್ಟರೆ ಶಾಸಕತ್ವ ತನ್ನಷ್ಟಕ್ಕೇ ತಾನೇ ಅನರ್ಹಗೊಳ್ಳುತ್ತದೆ. ಜನಪ್ರತಿನಿಧಿ ಒಬ್ಬರು ಜೈಲು ಶಿಕ್ಷೆ ಗುರಿಯಾಗುತ್ತಿದ್ದ ಹಾಗೆ ಕೋರ್ಟ್​ ಆದೇಶ ಪ್ರತಿ ವಿಧಾನಸಭಾ ಸ್ಪೀಕರ್​ಗೆ ತಲುಪುತ್ತದೆ. ಶಾಸಕ ಸ್ಥಾನದಿಂದ ಸ್ಪೀಕರ್​ ಅನರ್ಹ ಮಾಡುತ್ತಾರೆ. ಆ ಬಳಿಕ ಕೋರ್ಟ್​ನಿಂದ ಆದೇಶಕ್ಕೆ ತಡೆಯಾಜ್ಞೆ ತರುವಲ್ಲಿ ಯಶಸ್ವಿಯಾದರೆ ಶಾಸಕ ಸ್ಥಾನ ಉಳಿಯಲಿದೆ. ಅನರ್ಹಗೊಂಡಿದ್ದ ಶಾಸಕ ಸ್ಥಾನವನ್ನು ಮರು ಸ್ಥಾಪಿಸಲಾಗುತ್ತದೆ. ಇದೀಗ ಮೇಲ್ಮನವಿ ಹೋಗುವದಕ್ಕೆ ವಿನಯ್​ ಕುಲಕರ್ಣಿ ಮುಂದೆ 30 ದಿನಗಳ ಕಾಲಾವಕಾಶವಿದೆ.

ಹೈಕೋರ್ಟ್​ ಅಥವಾ ಸುಪ್ರೀಂಕೋರ್ಟ್​ ಮೊರೆ ಹೋಗುವದಕ್ಕೆ ಅವಕಾಶವಿದ್ದು, ಸಾಮಾನ್ಯವಾಗಿ ಮೊದಲು ಹೈಹೋರ್ಟ್​ನಲ್ಲಿ ಈ ಸೆಷನ್ಸ್​ ಕೋರ್ಟ್​ ಆದೇಶವನ್ನು ಪ್ರಶ್ನೆ ಮಾಡಲಿದ್ದಾರೆ. ಜನಪ್ರತಿನಿಧಿಗಳ ನ್ಯಾಯಾಲಯ ತಪ್ಪು ಗ್ರಹಿಕೆಯಿಂದ ಈ ಆದೇಶ ನೀಡಿದ್ದು, ಅಪರಾಧಿ ಅನ್ನೋದೇ ತಪ್ಪು, ಅವರ ಪಾತ್ರ ಏನೂ ಇಲ್ಲ ಎಂದು ಹೈಕೋರ್ಟ್​ಗೆ ಮನವರಿಕೆ ಮಾಡಿಕೊಡಬೇಕಾಗುತ್ತದೆ. ಒಂದು ವೇಳೆ ಹೈಕೋರ್ಟ್​ ಅಥವಾ ಸುಪ್ರೀಂಕೋರ್ಟ್​ ಮೆಟ್ಟಿಲೇರಿದರೂ ನಾವು ಕಾನೂನು ಹೋರಾಟ ನಡೆಸಲು ಸಿದ್ಧರಿದ್ದೇವೆ ಎಂದು ಸಿಬಿಐ ಪರ ವಕೀಲರು ಈಗಾಗಲೇ ತಿಳಿಸಿದ್ದಾರೆ. ಆದರೂ ಜೀವಿತಾವಧಿ ಜೈಲು ಶಿಕ್ಷೆ ಎನ್ನುವುದು ಗಲ್ಲು ಶಿಕ್ಷೆಗೆ ಸಮ ಎನ್ನಬಹುದು.

Related posts

BENGALURU FIRE ACCIDENT: ಬೆಂಕಿ ಅವಘಡಕ್ಕೆ ನಿನ್ನೆ ಒಂದು.. ಇವತ್ತು ಐವರ ಸಜೀವ ದಹನ..

Publicspot

ವರ್ಷದ ಹಿಂದೆ DOCTOR ಮದುವೆ.. 6 ತಿಂಗಳ ಹಿಂದೆ ಕೊಲೆ.. ಈಗ ರಹಸ್ಯ ಬಯಲು..!

Publicspot

ಶಿಡ್ಲಘಟ್ಟದ ಪೌರಾಯುಕ್ತೆಗೆ ಧಮ್ಕಿ ಹಾಕಿದ್ದ ರಾಜೀವ್‌ ಗೌಡನ ಜೊತೆ ಮತ್ತೊಬ್ಬ ಅರೆಸ್ಟ್‌

Publicspot

ಅಮಾವಾಸ್ಯೆ ದಿನ 9 ಬಲಿ ಪಡೆದ ಜವರಾಯ.. 24 ಗಂಟೆಯಲ್ಲಿ 17 ಜನರ ದುರ್ಮರಣ..

Publicspot

Birthday party; ಹುಟ್ಟು ಹಬ್ಬದ ಪಾರ್ಟಿಯಲ್ಲಿ ಬಿಲ್ ಪೇ ಘರ್ಷಣೆ.. ಕೊಲೆಯಲ್ಲಿ ಅಂತ್ಯ..

Publicspot

Parappana Agrahara Jail: ದರ್ಶನ್​ಗೆ ಮಾತ್ರ ಜೈಲು.. ಉಳಿದವರಿಗೆ ಬಾರ್​.. ಪಬ್​..

Publicspot