The Public Spot
ರಾಜ್ಯ

ಪಂಚಮಸಾಲಿ ಪೀಠದಿಂದ ಬಸವಜಯ ಮೃತ್ಯುಂಜಯ ಶ್ರೀ ಕಿಕ್​ಔಟ್! ಸಿಡಿ ಬಾಂಬ್​..

ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಹೋರಾಟದ ಮೂಲಕ ಇಡೀ ರಾಜ್ಯಾದ್ಯಂತ ಭಾರೀ ಸಂಚಲನ ಸೃಷ್ಟಿಸಿದ ಕೂಡಲ ಸಂಗಮ ಪೀಠದ ಜಯಮೃತ್ಯುಂಜಯ ಸ್ವಾಮೀಜಿಯನ್ನು ಪೀಠದಿಂದ ಉಚ್ಛಾಟನೆ ಮಾಡಲಾಗಿದೆ. ಬಾಗಲಕೋಟೆ ಜಿಲ್ಲೆ ಕೂಡಲಸಂಗಮದ ಪಂಚಮಸಾಲಿ ಪೀಠದಲ್ಲಿ ನಡೆದ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜದ ಟ್ರಸ್ಟ್‌ನ ಕಾರ್ಯಕಾರಿಣಿ ಸಭೆಯಲ್ಲಿ ಉಚ್ಛಾಟನೆ ಮಾಡುವ ನಿರ್ಧಾರವನ್ನು ಒಟ್ಟಾಗಿ ತೆಗೆದುಕೊಳ್ಳಲಾಗಿದೆ. ಪಂಚಮಸಾಲಿ ಪೀಠಾಧಿಪತಿಯಾಗಿದ್ದ ಜಗದ್ಗುರು ಬಸವಜಯ ಮೃತ್ಯುಂಜಯ ಶ್ರೀಗಳನ್ನು ಟ್ರಸ್ಟ್‌ನ ಅಧ್ಯಕ್ಷ ಶಾಸಕ ವಿಜಯಾನಂದ ಕಾಶಪ್ಪನವರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಚರ್ಚೆ ನಡೆಸಿ ಉಚ್ಛಾಟಿಸುವ ನಿರ್ಣಯ ಕೈಗೊಳ್ಳಲಾಗಿದೆ.

ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಶ್ರೀಗಳ ವಿರುದ್ಧ ಟ್ರಸ್ಟ್ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್​ ಆಕ್ರೋಶ ಹೊರ ಹಾಕಿದ್ದರು. ಸ್ವಾಮೀಜಿ ನಡುವೆ ಭಾರೀ ಸಂಘರ್ಷ ನಡೆದ ಬಳಿಕ ಮಠದಲ್ಲಿದ್ದ ಶ್ರೀಗಳ ಕಚೇರಿಗೆ ಬೀಗ ಹಾಕಿ ಹೊರದಬ್ಬಲಾಗಿತ್ತು. ಆ ಬಳಿಕ ಸಂಧಾನ ನಡೆಸಿದ ಬಳಿಕ ಪ್ರಕರಣ ಸುಖಾಂತ್ಯವಾಗಿತ್ತು. ಆದರೆ ಇದೀಗ ಪಂಚಮಸಾಲಿ ಪೀಠದಿಂದಲೇ ಉಚ್ಛಾಟಿಸಲಾಗಿದೆ. ಟ್ರಸ್ಟ್ ಧರ್ಮದರ್ಶಿಗಳು ನೀಡುತ್ತಿರುವ ಕಾರಣ ಎಂದರೆ, ಅಕ್ರಮ ಆಸ್ತಿ ಸಂಪಾದನೆ. ಸ್ವಾಮೀಜಿಯವರು ದಾವಣಗೆರೆ ಸೇರಿ ವಿವಿಧೆಡೆ ಅಸ್ತಿ ಸಂಪಾದನೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಬಸವ ತತ್ವಗಳಿಗೆ ವಿರುದ್ದವಾಗಿ ನಡೆದುಕೊಳ್ಳುತ್ತಿದ್ದಾರೆ. ಅಲ್ಲದೆ ಕೆಲವು ಖಾಸಗಿ ವಿಚಾರಗಳು ಇವೆ ಅಂತ ಆರೋಪಿಸಲಾಗಿದೆ.

ಜಯಮೃತ್ಯುಂಜಯ ಶ್ರೀಗಳು ಈ ಬಗ್ಗೆ ಮಾತನಾಡಿ, ನಮ್ಮ ಪೀಠಕ್ಕೂ ಟ್ರಸ್ಟ್‌ಗೂ ಯಾವುದೇ ಸಂಬಂಧವಿಲ್ಲ. ನಮ್ಮ ಮೇಲಿನ ಆರೋಪಗಳು ಸುಳ್ಳು ಅಂತ ಹೇಳಿದ್ದಾರೆ. ಆದರೆ ಇದೀಗ ಪಂಚಮಸಾಲಿ ಪೀಠದ ಸ್ವಾಮೀಜಿ ವಿರುದ್ಧ ಸಿಡಿ ಬಾಂಬ್ ಸ್ಫೋಟವಾಗಿದೆ. ಕೂಡಲಸಂಗಮ ಪಂಚಮಸಾಲಿ ಪೀಠಾಧಿಪತಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ಬಗ್ಗೆ ಪಂಚಮಸಾಲಿ ಪೀಠದ ರಾಜ್ಯ ಕಾರ್ಯಕಾರಿ ಸಭೆಯಲ್ಲಿ ಸ್ವಾಮೀಜಿ ವಿರುದ್ಧ ಸಿಡಿ ಬಾಂಬ್ ಪ್ರಕಟವಾಗಿದೆ. ಪಂಚಮಸಾಲಿ ಪೀಠದ ಟ್ರಸ್ಟ್ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಸಿಡಿ ಬಾಂಬ್ ಸಿಡಿಸಿದ್ದಾರೆ. ಕಾರ್ಯಕಾರಿ ಸಭೆಯಲ್ಲಿ ಸ್ವಾಮೀಜಿ ವಿರುದ್ಧ ಕಾಶಪ್ಪನವರ್ ಗಂಭೀರ ಆರೋಪ ಮಾಡಿದ್ದಾರೆ. ಸ್ವಾಮೀಜಿ ಮಾರಿಕೊಂಡು ಹೋಗಿದ್ದಾನೆ, ಅಂತನೂ ನಾನು ಹೇಳುತ್ತೇನೆ. ಇವ್ರು ಸ್ವಯಂ ಘೋಷಿತ ಆಸ್ತಿ ಮಾಡಿದ್ದಾನೆ. ನಮ್ಮ ಹತ್ರ ಎಲ್ಲ ದಾಖಲೆ ಅದಾವ. ಸ್ವಯಂ ಘೋಷಿತ ಟ್ರಸ್ಟ್ ಮಾಡ್ಯಾನ. ಅದು ಬಿಡ್ರಿ ಇನ್ನು ಬಹಳ ಅದಾವ, ತರ್ತೀನಿ. ಸಮಯ ಬಂದಾಗ ಎಳೆ ಎಳೆಯಾಗಿ ಬಿಚ್ಚಿ ಇಡ್ತೀನಿ. ಎಲ್ಲ್ಲೆಲ್ಲಿ ಆಸ್ತಿ ಮಾಡ್ಯಾರ,ಎಲ್ಲೆಲ್ಲಿ ಮನಿ ಮಾಡ್ಯಾರ..? ಎಲ್ಲೆಲ್ಲಿ ಯಾರ್ ಯಾರ್ ಜೊತೆಗೆ ಅದಾರ. ಎಲ್ಲೆಲ್ಲಿ ಸಿಡಿ ಹೋಗ್ಯಾವ, ಎಲ್ಲೆಲ್ಲಿ ಏನೇನ್ ಹೋಗ್ಯಾವ ಎಲ್ಲಾ ತೋರಸ್ತಿನಿ ಎಂದಿದ್ದಾರೆ.

Related posts

Veerendra Heggade: ಧರ್ಮಸ್ಥಳದಿಂದ ಸರ್ಕಾರಕ್ಕೆ ಧನ್ಯವಾದ.. ಒಳ್ಳೆಯದ್ದೇ ಮಾಡುವ ಭರವಸೆ..

Publicspot

ಬೆಂಗಳೂರಲ್ಲಿ ಗಣತಿಗೆ ಡಿಸಿಎಂ ಡಿಕೆಶಿ ಚಾಲನೆ.. ಪ್ರಶ್ನೆಗಳಿಗೆ ಉತ್ತರಿಸಲು ಗರಂ..

Publicspot

Heavy Rain Alert: ರಾಜ್ಯದಲ್ಲಿ ಭಾರೀ ಮಳೆ ಮುನ್ಸೂಚನೆ.. ಶಾಲಾ ಕಾಲೇಜಿಗೆ ರಜೆ ಘೋಷಣೆ!!

Publicspot

ಅಡ್ಡ ಮತದಾನ ಮಾಡಿದ್ದು ವೈಯಕ್ತಿಕ ಲಾಭಕ್ಕೋ..? ನಾಯಕತ್ವದ ಸೇಡಿಗೋ..?

Publicspot

ರಾಜ್ಯಮಟ್ಟದ ಸ್ವಾತಂತ್ರ‍್ಯ ದಿನಾಚರಣೆಗೆ ಎಲ್ಲಾ ರೀತಿಯ ಸಿದ್ದತೆ ಮಾಡಿಕೊಳ್ಳಿ: ಮಹೇಶ್ವರ್ ರಾವ್.

admin

ನಾಳೆ ನಮ್ಮ ಮೆಟ್ರೋ ಟಿಕೆಟ್‌ ದರ ಏರಿಕೆ ಆಗುತ್ತಾ..? ಇಲ್ವಾ..? ಕಾಂಗ್ರೆಸ್‌-ಬಿಜೆಪಿ ಇಬ್ಬರಿಗೂ ಮನಸ್ಸಿಲ್ವಾ..?

Publicspot