The Public Spot
ಕ್ರೀಡೆ

RCBಗೆ 2ನೇ ಬಾರಿ WPL ಕಿರೀಟ.. ಸ್ಮೃತಿ ಮಂದಾನ ಪಡೆ ಕಮಾಲ್​..!

ಪುರುಷರ IPL ಒಂದು ಬಾರಿ ಕಪ್​ ಗೆಲ್ಲುವುದು ಕನಸು ಎನ್ನುವಂತಾಗಿತ್ತು. ಕಳೆದ ಬಾರಿ 18 ವರ್ಷಗಳ ಬಳಿಕ ಕಪ್​ ಸಿಕ್ಕಿದ್ದು, ಅಭಿಮಾನಿಗಳ ಆನಂದಕ್ಕೆ ಪಾರವೇ ಇಲ್ಲದಂತಾಗಿತ್ತು. ಆ ಬಳಿಕ ಸಂಭ್ರಮಾಚರಣೆಯಲ್ಲಿ ನಡೆದ ದುರಂತ 11 ಜನ ಅಭಿಮಾನಿಗಳ ಪ್ರಾಣವನ್ನೇ ಬಲಿ ಪಡೆದುಕೊಂಡಿತ್ತು. ಆದರೆ ಮಹಿಳಾ ಪ್ರೀಮಿಯರ್​ ಲೀಗ್​ ( WPL ) ಶುರುವಾಗಿ 4ನೇ ಆವೃತಿ ಆಗುವುದರೊಳಗಾಗಿ ರಾಯಲ್ ಚಾಲೆಂಜರ್ಸ್​​ ಬೆಂಗಳೂರು 2ನೇ ಬಾರಿಗೆ ಕಪ್​ ಮುಡಿಗೇರಿಸಿಕೊಂಡಿದೆ. ಗುಜರಾತ್​ನ ವಡೋಧರದಲ್ಲಿ ನಡೆದ ಪಂದ್ಯದಲ್ಲಿ ದೆಹಲಿ ವಿರುದ್ಧ ಅಬ್ಬರದ ವಿಜಯ ದಾಖಲಿಸಿ ಸ್ಮೃತಿ ಮಂದಾನ ಪಡೆ ಕಪ್​ಗೆ ಮುತ್ತಿಟ್ಟಿದೆ.

ಟಾಸ್​ ಗೆದ್ದ RCB ಮೊದಲಿಗೆ ಫೀಲ್ಡಿಂಗ್​ ಮಾಡುವ ಆಯ್ಕೆ ಮಾಡಿಕೊಂಡಿತು. ದೆಹಲಿಯ ಅಬ್ಬರದ ಬ್ಯಾಟಿಂಗ್​ ನೋಡಿದಾಗ ಸ್ಮೃತಿ ಮಂದಾನ ನಿರ್ಧಾರ ದುಬಾರಿ ಎನ್ನುವಂತಾಗಿತ್ತು. ಜೆಮಿಮಾ ರೋಡ್ರಿಗ್ರಸ್​ 57, ಲೋರಾ ವಾಲ್​​ವಾರ್ಡ್ಟ್​​ 44, ಲೀ 37 ರನ್​ ಬಾರಿಸಿ ದೆಹಲಿ ತಂಡದ ಮೊತ್ತ 203 ಆದಾಗ ಅದೆಷ್ಟೋ RCB ಅಭಿಮಾನಿಗಳ ಮನಸ್ಸು ಪೆಚ್ಚುಮೋರೆ ಹಾಕಿಕೊಂಡಿತ್ತು. ಕೇವಲ 2 ಓವರ್​ಗೆ 32 ರನ್​ ಕೊಟ್ಟು ದುಬಾರಿಯಾದ ಕನ್ನಡತಿ ಶ್ರೇಯಾಂಕಾ ಪಾಟೀಲ್​ ಕಡೆಗೂ ಕೋಪ ಉಮ್ಮಳಿಸಿತ್ತು. ಆ ಬಳಿಕ ಬ್ಯಾಟಿಂಗ್​ಗೆ ಬಂದಾಗ ಗ್ರೇಸ್​ ಹ್ಯಾರಿಸ್​ ಆರಂಭದಲ್ಲಿಯೇ ವಿಕೆಟ್​ ಒಪ್ಪಿಸಿದಾಗ RCB ಸೋಲು ನಿರ್ಧಾರ ಆಯ್ತು ಎಂದುಕೊಂಡಿದ್ದು ಅದೆಷ್ಟೋ ಮಂದಿ. ಆದರೆ ಜಾರ್ಜಿಯಾ ವಾಲ್​ (79 ರನ್​) ಹಾಗೂ ಸ್ಮೃತಿ ಮಂದಾನ (87 ರನ್​) ಜೊತೆಯಾಟ ನಿಟ್ಟುಸಿರು ಬಿಡುವಂತೆ ಮಾಡಿತ್ತು.

ಕೊನೆಯ ಮೂರು ಓವರ್​ಗಳು ಇದ್ದಾಗ RCB ಗೆ ಎದುರಾದ ಸರಣಿ ಆಘಾತ ತುದಿಗಾಲಲ್ಲಿ ನಿಲ್ಲುವಂತೆ ಮಾಡಿತ್ತು. ಜಾರ್ಜಿಯಾ ವಾಲ್​ ಕ್ಯಾಚ್​ ಕೊಟ್ಟು ನಿರ್ಗಮಿಸಿದರೆ, ರಿಚಾ ಘೋಷ್​ ಕೂಡ 6 ರನ್​ ಗಳಿಸಿ ಕ್ಯಾಚ್​ ಕೊಟ್ಟರು. ತದನಂತರ ಶತಕದತ್ತ ದಾಪುಗಾಲು ಇಡುತ್ತಿದ್ದ ಸ್ಮೃತಿ ಮಂದಾನ ಕೂಡ ಹೆನ್ರಿ ಬೌಲಿಂಗ್​ನಲ್ಲಿ ಕ್ಲೀನ್​ ಬೋಲ್ಡ್​ ಆದರು. ಕೊನೆಯಲ್ಲಿ ಜೊತೆಯಾದ ರಾಧಾ ಯಾದವ್​ (12) ಹಾಗೂ ಡಿ ಕ್ಲಾರ್ಕ್​ (07) ಆಟ RCB ತಂಡವನ್ನು ಗೆಲುವಿನ ಮೆಟ್ಟಿಲು ಮುಟ್ಟಿಸಿತು. ಈ ಸಲನೂ ಕಪ್​ ನಮ್ದೇ ಎನ್ನುವ ಮೂಲಕ ಕ್ಯಾಪ್ಟನ್​ ಸ್ಮೃತಿ ಮಂದಾನ ಕನ್ನಡಿಗರ ಪಾಲಿನ ವಿರಾಟ್​ ಕೊಹ್ಲಿ ಆಗಿಬಿಟ್ಟರು. 2023ರಲ್ಲಿ ಆರಂಭವಾದ WPL ನ 2ನೇ ಆವೃತ್ತಿಯಲ್ಲಿ ಗೆಲುವಿನ ನಗೆ ಬೀರಿದ್ದ ಮಹಿಳಾ ತಂಡ, ಇದೀಗ 4ನೇ ಆವೃತ್ತಿಯಲ್ಲೂ 2ನೇ ಬಾರಿಗೆ ಗೆದ್ದು ಕಮಾಲ್​ ಮಾಡಿದೆ.

ಸ್ಮೃತಿ ಮಂದಾನ ಪಡೆಗೆ 6 ವಿಕೆಟ್​ಗಳ ಭರ್ಜರಿ ಜಯ ಸಿಗ್ತಿದ್ದ ಹಾಗೆ ಆರ್​​ಸಿಬಿ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ಆದರೆ ಸತತ 4 ಆವೃತ್ತಿಗಳಲ್ಲೂ ಫೈನಲ್‌ ಪ್ರವೇಶ ಪಡೆದ ದೆಹಲಿ ತಂಡ ಒಮ್ಮೆಯೂ ಕಪ್​ ಗೆಲ್ಲಲು ಸಾಧ್ಯವಾಗದೆ ಚೋಕರ್ಸ್ ಆಗಿ ಉಳಿದುಕೊಂಡಿತು. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಕ್ರಿಕೆಟ್​ ಅಭಿಮಾನಿಗಳು ಸಂಭ್ರಮಿಸಿದ್ದು, RCB ತಂಡಕ್ಕೆ 6 ಕೋಟಿ ನಗದು ಬಹುಮಾನ ಸಿಕ್ಕಿದೆ. ಜೊತೆಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್​, ಕೇಂದ್ರ ಸಚಿವ ಹೆಚ್​.ಡಿ ಕುಮಾರಸ್ವಾಮಿ RCB ತಂಡಕ್ಕೆ ಶುಭಾಶಯ ಕೋರಿದ್ದಾರೆ. 2ನೇ ಬಾರಿಗೆ WPL ಕಪ್​ ಗೆದ್ದ ನಮ್ಮ ಹುಡ್ಗೀರು, ಹೆಣ್ಮಕ್ಳೇ ಸ್ಟ್ರಾಂಗು ಗುರು ಅನ್ನೋದನ್ನು ಸಾಬೀತು ಮಾಡಿದಂತಾಗಿದೆ.

Related posts

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಚಿನ್ನದಂತ ಆಟವಾಡಿದ RCB ಹುಡುಗರು.. ಚೆನ್ನೈ ಪಲ್ಟಿ..

Publicspot

ಚಿನ್ನಸ್ವಾಮಿ ಸ್ಟೇಡಿಯಂ ವಿಚಾರದಲ್ಲೂ ರಾಜಕೀಯ ನಡೀತಿದ್ಯಾ..? ನಾಳಿನ ಪಂದ್ಯ ಕ್ಯಾನ್ಸಲ್​..!!

Publicspot

Indo – Pak T-20 Cricket; ವಿರೋಧದ ನಡುವೆ ದೇಶದ ಜನರ ಮನಸ್ಸು ಗೆದ್ದ ಕ್ರಿಕೆಟ್ ಆಟಗಾರರು..!

Publicspot

ಟಿ-20 ವಿಶ್ವಕಪ್‌ನಲ್ಲಿ ಸೆಮಿಫೈನಲ್‌ ಹಂತಕ್ಕೆ ಲಗ್ಗೆ ಹಾಕಿದ ಟೀಂ ಇಂಡಿಯಾ!

Publicspot

RCB – CSK ಪಂದ್ಯಕ್ಕೆ ಸಜ್ಜಾಗಿದೆ ಚಿನ್ನಸ್ವಾಮಿ.. ಶಾಸಕರ ಟಿಕೆಟ್‌ಗಾಗಿ ಕ್ಯೂ ಕ್ಯೂ..

Publicspot

India Wins Women’s WorldCup: ಚೊಚ್ಚಲ ವಿಶ್ವಕಪ್​ಗೆ ಮುತ್ತಿಟ್ಟ “ಭಾರತಾಂಬೆ” ಮಕ್ಕಳು

Publicspot