The Public Spot
ಅಪರಾಧ

ಕೆಂಪೇಗೌಡ ಏರ್​ಪೋರ್ಟ್​ನಲ್ಲಿ ದಿನಕ್ಕೊಂದು ಎಡವಟ್ಟು.. ನಿನ್ನೆ ಒಂದು.. ಇವತ್ತು ಒಂದು..

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿನ್ನೆ ಗುರುವಾರ ಅಚ್ಚರಿಯ ಘಟನೆಯೊಂದ ನಡೆದಿತ್ತು. ವಿದೇಶಿ ಮಹಿಳೆಯನ್ನು ತಪಾಸಣೆ ನೆಪದಲ್ಲಿ ಪುರುಷರ ಟಾಯ್ಲೆಟ್​ಗೆ ಕರೆದೊಯ್ದು, ಬಟ್ಟೆ ಬಿಚ್ಚಿಸಿ, ಮೈಕೈ ಮುಟ್ಟಿ ಲೈಂಗಿಕ ದೌರ್ಜನ್ಯ ನಡೆಸಲಾಗಿತ್ತು. AISATS ನಲ್ಲಿ ಹೊರ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡ್ತಿದ್ದ ಅಪಾನ್​ ಅಹಮದ್​​ ಎಂಬಾತನನ್ನು ಕೆಲಸದಿಂದ ವಜಾ ಮಾಡಲಾಗಿದೆ. ಅಲ್ಲದೆ ವಿದೇಶಿ ಮಹಿಳೆ ಕೊಟ್ಟ ದೂರನ್ನು ಆಧಾರಿಸಿ ಏರ್​ಪೋರ್ಟ್​ ಪೊಲೀಸರು ಆರೋಪಿಯನ್ನು ಬಂಧನ ಮಾಡಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಇವತ್ತು ಮತ್ತೊಂದು ಘಟನೆ ನಡೆದಿದ್ದು, ಒಂದೇ ಪಾಸ್ ಪೋರ್ಟ್, ವೀಸಾ ಬಳಸಿ ಇಬ್ಬರು ಪ್ರಯಾಣಕ್ಕೆ ಯತ್ನ ಮಾಡಿದ್ದಾರೆ.

ಒಬ್ಬನ ವೀಸಾ ಮತ್ತು ಪಾಸ್‌ಪೋರ್ಟ್ ಬಳಸಿ ಲಂಡನ್​ಗೆ ಪ್ರಯಾಣ ಮಾಡಲು ಯತ್ನಿಸಿದ ಶ್ರೀಲಂಕಾ ಮೂಲದ ವ್ಯಕ್ತಿಯನ್ನು ಕೆಂಪೇಗೌಡ ಏರ್​​ಪೋರ್ಟ್​ ಪೊಲೀಸರು ಬಂಧನ ಮಾಡಿದ್ದಾರೆ. ಸ್ನೇಹಿತನಿಗೆ ತನ್ನ ವೀಸಾ ಕೊಟ್ಟು ತಾನು ಅರೆಸ್ಟ್ ಆಗಿದ್ದಾನೆ ಆರೋಪಿ. ಏರ್ಪೋರ್ಟ್ ಪೊಲೀಸರು ಶ್ರೀಲಂಕಾ ಮೂಲದ ರಾಜಗೋಪಾಲ್ ಎಂಬಾತನ ಬಂಧನ ಮಾಡಿದ್ದಾರೆ. ಕಳೆದ ಭಾನುವಾರ UKಗೆ ಪ್ರಯಾಣಿಸಬೇಕಿದ್ದ ಬಂಧಿತ ಆರೋಪಿ. ಪ್ಯಾಸೆಂಜರ್ ಎಕ್ಸ್ ಚೇಂಜ್ ಬಳಿ ಫ್ಲೈಟ್​ಗಾಗಿ ಕಾಯ್ತಿದ್ದ ಆರೋಪಿಯನ್ನು ಪೊಲೀಸರು ಬಂಧನ ಮಾಡಿದ್ದಾರೆ. ಆ ನಂತರ ವೀಸಾ, ಪಾಸ್ ಪೋರ್ಟ್ ಕಳೆಕೊಂಡಿದ್ದೇನೆ ಎಂದು ಹೇಳಿಕೊಂಡಿದ್ದ ಆರೋಪಿಯನ್ನು ವಿಚಾರಣೆ ಮಾಡಿದಾಗ ಖತರ್ನಾಕ್​ ಪ್ಲ್ಯಾನ್​ ಬಯಲಾಗಿದೆ.

ಈಗಾಗಲೇ ಬಂಧಿತ ರಾಜಗೋಪಾಲ್​ನ ಸ್ನೇಹಿತ ವೀಸಾ ಮೂಲಕ ಯುಕೆಗೆ ಪ್ರಯಾಣ ಬೆಳೆಸಿದ್ದು, ಏರ್ಪೋರ್ಟ್​ಗೆ ತನ್ನ ಸ್ನೇಹಿತನನ್ನ ಕರೆಸಿಕೊಂಡಿದ್ದ ಆರೋಪಿ. ತನ್ನ ದಾಖಲಾತಿಯನ್ನ ಸ್ನೇಹಿತನಿಗೆ ಕೊಟ್ಟು ಯುಕೆಗೆ ಕಳುಹಿಸಿದ್ದಾನೆ. ಆ ಬಳಿಕ ತನ್ನ ದಾಖಲಾತಿ ಕಳೆದಿದೆ ಎಂದು ನಾಟಕ ಮಾಡಿದ್ದಾನೆ. ಕಳೆದು ಹೋಗಿರುವ ದಾಖಲಾತಿಯನ್ನು ಅಧಿಕಾರಿಗಳಿಗೆ ತಿಳಿಸಿ ಬದಲಿ ದಾಖಲಾತಿ ಪಡೆಯೋ ಪ್ರಯತ್ನ ಮಾಡಿದ್ದಾನೆ. ಪೊಲೀಸರ ವಿಚಾರಣೆ ವೇಳೆ ಪ್ರಯಾಣಿಕನ ಕಳ್ಳಾಟ ಬಯಲಾಗಿದೆ. ಕೂಡಲೇ ಆರೋಪಿಯನ್ನು ಬಂಧಿಸಿದ ಏರ್ಪೋರ್ಟ್ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈತನ ಪಾಸ್​ಪೋರ್ಟ್​ನಲ್ಲಿ ಪ್ರಯಾಣಿಸಿದ ವ್ಯಕ್ತಿಯ ಬಗ್ಗೆ ಮಾಹಿತಿ ಸಂಗ್ರಹ ಮಾಡಲಾಗಿದೆ.

ಯುಕೆಯಲ್ಲಿ ನಿರಾಶ್ರಿತರ ಸ್ಟೇಟಸ್ ಪಡೆಯಲು ಈ ರೀತಿ ನಾಟಕ ಮಾಡಿರೋ ಶಂಕೆ ವ್ಯಕ್ತವಾಗಿದೆ. ಕೆಐಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ. ಒಂದೇ ಪಾಸ್​ಪೋರ್ಟ್ ವೀಸಾ ಬಳಸಿ ಇಬ್ಬರು ಪ್ರಯಾಣಕ್ಕೆ ಯತ್ನ ಮಾಡಿರುವುದು ಬಯಲಾಗಿದೆ. ಒಬ್ಬನ ವೀಸಾ, ಪಾಸ್‌ಪೋರ್ಟ್​ನಲ್ಲೆ ಯುಕೆಗೆ ಪ್ರಯಾಣ ಮಾಡಿದ್ದಾನೆ. ಓರ್ವ ಶ್ರೀಲಂಕಾ ಮೂಲದ ವ್ಯಕ್ತಿಯ ಬಂಧನ ಮಾಡಲಾಗಿದೆ. ಸ್ನೇಹಿತನಿಗೆ ತನ್ನ ವೀಸಾ ಕೊಟ್ಟು ತಾನು ಅರೆಸ್ಟ್ ಆಗಿದ್ದಾನೆ. ಕೆಐಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.

Related posts

ಗಂಡನ ಜೊತೆ ವಿರಸ.. ಪ್ರಿಯಕರನ ಜೊತೆ ಸರಸ.. ಕೊಂದು ಹೋದ ರಫೀಕ್‌..

Publicspot

ಶಿವಮೊಗ್ಗದಲ್ಲಿ SSLC ಸ್ಪೆಷಲ್ ಕ್ಲಾಸ್‌ ಮುಗಿಸಿ ಬರ್ದತಿದ್ದ ಹುಡುಗನನ್ನು ಹತ್ಯೆ!

Publicspot

ಕಿರುತೆರೆ ನಟಿಗೆ ಲೈಂಗಿಕ ಕಿರುಕುಳ ಆರೋಪ, ಕೇರಳದ ಚೇಟ ಬಂಧನ..

Publicspot

ಕಮಲಾಕರ ಭಟ್‌ ಕೊಲೆ ಮಾಡಿದ್ರಾ..? ಆಂಟಿ ಜೊತೆ ಅಕ್ರಮ ಸಂಬಂಧ ಸತ್ಯನಾ..?

Publicspot

Kolar malur MLA Case; ಕಾಂಗ್ರೆಸ್‌ ಶಾಸಕನ ಸ್ಥಾನ ಅನರ್ಹ.. ಸುಪ್ರೀಂಕೋರ್ಟ್‌ನಲ್ಲಿ ಸಿಗುತ್ತಾ ರಿಲೀಫ್..?

Publicspot

ಕೋಟೆ ನಾಡಿನ ಕಾಂಗ್ರೆಸ್​ ಶಾಸಕ ಪಪ್ಪಿ ಜೈಲಿನಿಂದ ರಿಲೀಸ್​.. 4 ತಿಂಗಳ ಸೆರೆವಾಸಕ್ಕೆ ರಿಲೀಫ್..

Publicspot