The Public Spot
ಅಪರಾಧ

ಕುರುಬ ಸಮುದಾಯದ ನೌಕರನ ಮೇಲೆ ಕೈ ಮಾಡಿದ ಸವಧಿ.. ಆಕ್ರೋಶ

ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಶಾಸಕ ಲಕ್ಷ್ಮಣ ಸವದಿ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ಡಿಸಿಸಿ ಬ್ಯಾಂಕ್ ವರ್ಕರ್​ ಹಾಗೂ ಯುನಿಯನ್ ಅಧ್ಯಕ್ಷ ನಿಂಗರಾಜ ಕರೆಣ್ಣವರ ಮೇಲೆ ಶಾಸಕ ಲಕ್ಷ್ಮಣ ಸವದಿ ಹಾಗೂ ಪುತ್ರ ಚಿದಾನಂದ ಸವದಿ ವಿರುದ್ಧ ಹಲ್ಲೆ ಮಾಡಿದ್ದಾರೆಂದು ಆರೋಪಿಸಿ ಜೇವರ್ಗಿ-ಸಂಕೇಶ್ವರ ರಾಜ್ಯ ಹೆದ್ದಾರಿ ತಡೆದು ಡಿಸಿಸಿ ಬ್ಯಾಂಕ್​ ನೌಕರರು ಪ್ರತಿಭಟನೆ ನಡೆಸಿದ್ದಾರೆ. ಅಂಬೇಡ್ಕರ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ಲಕ್ಷ್ಮಣ ಸವದಿ ವಿರುದ್ಧ ಧಿಕ್ಕಾರ ಕೂಗಿದ್ದಾರೆ.

ಬೆಳಗಾವಿ ಜಿಲ್ಲೆ ಅಥಣಿಯಲ್ಲಿ ಡಿಸಿಸಿ ಬ್ಯಾಂಕ್ ನೌಕರನ ಮೇಲೆ ಹಲ್ಲೆ ಮಾಡಲಾಗಿದೆ ಅನ್ನೋ ಆರೊಪಕ್ಕೆ ಆಕ್ರೋಶ ವ್ಯಕ್ತವಾಗಿದೆ. ಬೆಳಗಾವಿಯಲ್ಲಿ ಬಿಜೆಪಿ ಮುಖಂಡ ಸತ್ಯಪ್ಪ ಬಾಗನ್ನವರ್ ಮಾತನಾಡಿ, ಅಥಣಿಯಲ್ಲಿ ನಡೆದ ಘಟನೆ ವಿಷಾದನೀಯ.. ಮನೆಗೆ ಕರೆಸಿಕೊಂಡು ಅಪ್ಪ ಮಗ ಹಿಗ್ಗಾಮುಗ್ಗಾ ಹಲ್ಲೆ ಮಾಡಿದ್ದಾರೆ.. ಮನೆ ಬಿಟ್ಟು ಓಡಿ ಬಂದ್ರು ಲಕ್ಷ್ಮಣ ಸವದಿ ಬಿಟ್ಟಿಲ್ಲ, ಇದು ಶಾಸಕ ಲಕ್ಷ್ಮಣ ಸವದಿ ಮಾಡುತ್ತಿರೋ ದುರಾಡಳಿತ. ಲಕ್ಷ್ಮಣ ಸವದಿ ಶಾಸಕರಾಗಲು ಹಾಲುಮತ ಸಮಾಜ ಕಾರಣ. ನಮ್ಮ ಸಮಾಜದ ಮೇಲೆ ದೌರ್ಜನ್ಯ ಮಾಡಿದ್ದು ಖಂಡನೀಯ ಎಂದಿದ್ದಾರೆ.

2018ರಲ್ಲಿಯೂ ಇದೇ ರೀತಿ ಮಾಡಿದ್ದ ಲಕ್ಷ್ಮಣ ಸವದಿಯನ್ನು ಮನೆಗೆ ಕಳುಹಿಸಿದ್ವಿ. ಶಾಸಕ ಲಕ್ಷ್ಮಣ ಸವದಿ ಅಂತ್ಯ ಆರಂಭವಾಗಿದೆ ಎಂದು ಕುರುಬ ಸಮುದಾಯ ಸತ್ಯಪ್ಪ ಬಾಗನ್ನವರ್ ಕಿಡಿಕಾರಿದ್ದಾರೆ. ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ನಿನ್ನ ತಾಕತ್ತು ಕಮ್ಮಿಯಾಗಿದೆ ಎಂದಿರುವ ಬಾಗನ್ನವರ್, ಮನೆಗೆ ಕರೆಸಿ ಹಲ್ಲೆ ಮಾಡಿರೋದು ಖಂಡನೀಯ. ತಕ್ಷಣ ಶಾಸಕ ಲಕ್ಷ್ಮಣ ಸವದಿ ಹಾಗೂ ಚಿದಾನಂದ ಸವಧಿಯನ್ನು ಬಂಧಿಸಬೇಕು. ಹಲ್ಲೆಗೆ ಒಳಗಾದ ನೌಕರ ಮೇಲೆಯೇ ದೂರು ದಾಖಲು ಮಾಡಲು ಎಸ್ಸಿ, ಎಸ್ಟಿ ಕೇಸ್ ದಾಖಲು ತಯಾರಿ ನಡೆಸಿದ್ದಾರೆ. ತಕ್ಷಣ ಎಸ್‌ಪಿಯವರು ಶಾಸಕ ಹಾಗೂ ಅವರ ಪುತ್ರನ ಮೇಲೆ ಕೇಸ್ ದಾಖಲು ಮಾಡಬೇಕು ಎಂದು ಆಗ್ರಹ ಮಾಡಿದ್ದಾರೆ.

ಈ ಘಟನೆಯಿಂದ ಶಾಸಕ ಲಕ್ಷ್ಮಣ ಸವದಿ ಅಥಣಿ ಬಿಟ್ಟು ಗ್ರಾಮೀಣ ಭಾಗದಲ್ಲಿ ಓಡಾಡೋದು ಕಷ್ಟ ಆಗಲಿದೆ ಎಂದು ಬಾಗನ್ನವರ್ ಎಚ್ಚರಿಸಿದ್ದಾರೆ. ಲಕ್ಷ್ಮಣ ಸವದಿ ತನ್ನ ಪುತ್ರನ ಜೊತೆಗೆ ಸೇರಿ ಹಲ್ಲೆ ಮಾಡಿದ್ದಾರೆ. ಆತನ ಅಳಿಯ 27 ವರ್ಷಗಳಿಂದ ಅಥಣಿಯಲ್ಲಿ ಠಿಕಾಣಿ ಹೂಡಿದ್ದಾನೆ. ಆತ ಏನೋ ಲಫಡಾ ಮಾಡಿರಬೇಕು, ಅದಕ್ಕಾಗಿ ಆತನನ್ನು ತೆಗೆದಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ. ಕಾಂಗ್ರೆಸ್‌ ಸರ್ಕಾರದಲ್ಲಿ ಒಂದಾದ ಮೇಲೆ ಒಂದರಂತೆ ಕುಕೃತ್ಯಗಳು ನಡೆಯುತ್ತಲೇ ಇದ್ದು, ಈ ಪ್ರಕರಣ ಮತ್ತಷ್ಟು ಕಾವು ಪಡೆದುಕೊಳ್ಳುವ ಸಾಧ್ಯತೆಯಿದೆ. ಸಿಎಂ ಸಿದ್ದರಾಮಯ್ಯ ಕೂಡ ಈ ಪ್ರಕರಣದ ಬಗ್ಗೆ ಮಾಹಿತಿ ಪಡೆದುಕೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ.

Related posts

Darshan Bail Cancel: ದರ್ಶನ್​ ಜಾಮೀನು ರದ್ದು.. ಕರ್ನಾಟಕ ಹೈಕೋರ್ಟ್​ಗೆ ಸುಪ್ರೀಂಕೋರ್ಟ್​ ಗುದ್ದು..

Publicspot

ಜಾರ್ಖಂಡ್​ ಮೂಲದ ಯುವತಿಯ ಬೆತ್ತಲೆ ದೇಹ ಪತ್ತೆ..! ಕೊಲೆ ಶಂಕೆ..

Publicspot

ಕೊಲೆಗಾರ ವಿನಯ್​ ಕುಲಕರ್ಣಿ ಮುಂದಿರುವ ಆಯ್ಕೆಗಳು ಏನು..?

Publicspot

ಅಪ್ಪನ ಕಡು ಕೋಪಕ್ಕೆ ನಡೀತು ಘನಘೋರ ಘಟನೆ.. ಅಯ್ಯೋ ಶಿವನೇ..

Publicspot

Parappana Agrahara Jail: ದರ್ಶನ್​ಗೆ ಮಾತ್ರ ಜೈಲು.. ಉಳಿದವರಿಗೆ ಬಾರ್​.. ಪಬ್​..

Publicspot

30 ಲಕ್ಷ ಚಿನ್ನಾಭರಣ ಜೊತೆಗೆ ನಾಪತ್ತೆ.. ಕುಣಿಗಲ್‌ನಲ್ಲಿ ಮಹಿಳೆ ಪತ್ತೆ ಆಗಿದ್ಹೇಗೆ..?

Publicspot